ಭಲೇ ದ್ಯಾಮಣ್ಣ.. :1ಕ್ವಿಂಟಲ್ 53 ಕೆ.ಜಿ.ಭಾರ ಎತ್ತಿ ಶಕ್ತಿ ಪ್ರದರ್ಶನದಲ್ಲಿ ಸೈ ಎನಿಸಿದ ಯುವಕ
Team Udayavani, Aug 20, 2022, 9:54 AM IST
ಕುಷ್ಟಗಿ : ತಾಲೂಕಿನ ಬೋದೂರು ಗ್ರಾಮದ ಯುವಕ 1ಕ್ವಿಂಟಲ್ 53 ಕೆ.ಜಿ. ಚೀಲ ಭಾರವನ್ನು ಎತ್ತುವ ಮೂಲಕ ಶಕ್ತಿ ಪ್ರದರ್ಶನದಲ್ಲಿ ಸೈ ಎನಿಸಿಕೊಂಡಿದ್ದಾನೆ.
26ರ ಹರಯದ ದ್ಯಾಮಣ್ಣ ಹನಮಂತಪ್ಪ ಕೊಡಗಲಿ ಈ ಯುವಕ ಕಳೆದ ಗುರುವಾರ, ಇಲ್ಲಿನ ಎಪಿಎಂಸಿ ಯಾರ್ಡ ಬನ್ನಿಕಟ್ಟಿಯ ಆವರಣದಲ್ಲಿ ಶ್ರೀ ಚಾಮುಂಡೇಶ್ವರಿ ಹಮಾಲರ ಸಂಘದ ಶ್ರಮಿಕ ವರ್ಗದವರು, ಸೌಹಾರ್ಧ ಭಾರ ಎತ್ತುವ ಸ್ಪರ್ದೆ ಆಯೋಜಿಸಲಾಗಿತ್ತು.
ಈ ಔಪಚಾರಿಕ ಸ್ಪರ್ಧೆಯಲ್ಲಿ ದ್ಯಾಮಣ್ಣ ಹನಮಂತಪ್ಪ ಕೊಡಗಲಿ ಅವರು, 1 ಕ್ವಿಂಟಲ್, 53 ಕೆ.ಜಿ. ಚೀಲದ ಭಾರವನ್ನು ಬೆನ್ನ ಮೇಲೆ ಹೊತ್ತು ನೆಲಕ್ಕೆ ಹಣೆ ಹಚ್ಚಿ, ಮೇಲಕ್ಕೇಳಬೇಕು ಪುನಃ ಮಂಡಿಯೂರಿ ಬಾಗಿ ಹಣೆ ಹಚ್ಚಬೇಕು ಇದೇ ರೀತಿ ಮೂರು ಬಾರಿ ಮಾಡಿ ಭಾರ ಎತ್ತುವ ಸ್ಪರ್ಧೆ ಯಲ್ಲಿ ಭಲೇ ದ್ಯಾಮಣ್ಣ… ಎನಿಸಿಕೊಂಡಿದ್ದಾರೆ.
ಪದವೀಧರನಾಗಿರುವ ಯುವಕ ಬೋದೂರು ಗ್ರಾಮದಲ್ಲಿ ಕೃಷಿಕನಾಗಿದ್ದು, ಊರಲ್ಲಿ ತನ್ನಷ್ಟಕ್ಕೆ ತಾನು ಭಾರ ಎತ್ತುವ ಕಸರತ್ತು ಮಾಡುತ್ತಿದ್ದ. ಇದನ್ನು ಗಮನಿಸಿದ ಸ್ಥಳೀಯರು ಕುಷ್ಟಗಿ ಎಪಿಎಂಸಿ ಯಾರ್ಡನಲ್ಲಿ ಶ್ರಾವಣಮಾಸದ ಬನ್ನಿ ಮಹಾಂಕಾಳಿ ಪೂಜಾ ಕಾರ್ಯಕ್ರಮದಲ್ಲಿ ಈ ಯುವಕನ ಸಹಾಸ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಿದ್ದು ಇದರಲ್ಲಿ ಸೈ ಎನಿಸಿಕೊಂಡಿದ್ದಾನೆ.
ದ್ಯಾಮಣ್ಣ ಕೊಡಗಲಿ ಶಕ್ತಿ ಪ್ರದರ್ಶನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರುವ ಕುಷ್ಟಗಿಯ ಮಾಜಿ ಸೈನಿಕ ಭೀಮನಗೌಡ ಪಾಟೀಲ ಜಾಲಿಹಾಳ ಅವರು, ಈ ಯುವಕ ಯಾರ ನೆರವು ಇಲ್ಲದೇ, ಒಂದೂವರೆ ಕ್ವಿಂಟಲ್ ಭಾರವನ್ನು ಸಲೀಸಾಗಿ ಎತ್ತಿರುವುದು ಅಚ್ಚರಿಯಾಗಿದೆ. ಇಂತಹ ಯುವ ಪ್ರತಿಭೆಗೆ ಸರ್ಕಾರ ವೇಟ್ ಲಿಫ್ಟಿಂಗ್ ನಂತಹ ತರಭೇತಿ ನೀಡಿ ಕಾಮನವೆಲ್ತ, ಒಲಂಪಿಕ್ ಕ್ರೀಡಾಕೂಟದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಿದರೆ ಮಾತ್ರ ಇಂತಹ ಪ್ರತಿಭೆಗಳು ಬೆಳಕಿಗೆ ಬರಲು ಸಾದ್ಯವಿದೆ ಎಂದರು.
—-ಮಂಜುನಾಥ ಮಹಾಲಿಂಗಪುರ (ಕುಷ್ಟಗಿ)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ
Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ
Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ
Temperature ರಾಜ್ಯದ 10 ಜಿಲ್ಲೆಗಳಲ್ಲಿ ಬೀಸಲಿದೆ ಬಿಸಿಗಾಳಿ
ಸಂಪತ್ತು ಹಂಚಿಕೆ ಬಗ್ಗೆ ನಾವೆಲ್ಲಿ ಹೇಳಿದ್ದೇವೆ: ಖರ್ಗೆ ಪ್ರಶ್ನೆ
MUST WATCH
ಹೊಸ ಸೇರ್ಪಡೆ
Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ
ಭಾರತದಲ್ಲಿ ರಿಲೀಸ್ಗೂ ಮುನ್ನ ʼಮಂಕಿ ಮ್ಯಾನ್ʼ ಹೆಚ್ ಡಿ ಕಾಪಿ ಲೀಕ್: ವಿಳಂಬ ಯಾಕೆ?
Bagalkote: ಯತ್ನಾಳ ಗೊಡ್ಡ ಎಮ್ಮಿ ಇದ್ದಂಗ: ಕಾಶಪ್ಪನವರ ಟೀಕೆ
West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ
Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ