
ರಾಜಕಾಲುವೆಗಳ ಒತ್ತುವರಿ : ಕುಷ್ಟಗಿಯ 3ನೇ ವಾರ್ಡಿನ ನಿವಾಸಿಗಳಿಗೆ ಜಲ ದಿಗ್ಬಂದನ
Team Udayavani, Sep 7, 2022, 9:41 AM IST

ಕುಷ್ಟಗಿ : ಕುಷ್ಟಗಿಯ 3ನೇ ವಾರ್ಡಿನಲ್ಲಿ ರಾಜಕಾಲುವೆ ಒತ್ತುವರಿ ಪರಿಣಾಮ ಮನೆಗಳು ಜಲಾವೃತಗೊಂಡಿದ್ದು ಮಳೆ ನೀರು ಸ್ಥಳೀಯ ನಿವಾಸಿಗಳಿಗೆ ಜಲ ದಿಗ್ಭಂದನ ವಿಧಿಸಿದೆ.
ಕುಷ್ಟಗಿ ಪುರಸಭೆ ವ್ಯಾಪ್ತಿಯ 3ನೇ ವಾರ್ಡಿನಲ್ಲಿ ರಾಜಕಾಲುವೆಗಳ ಇಕ್ಕೆಲಗಳಲ್ಲಿ ನಿವೇಶನಗಳು ಅತಿಕ್ರಮಿಸಿದ್ದು ರಾಜಕಾಲುವೆ ಇಕ್ಕಟ್ಟಾಗಿದ್ದು, ನಾಲೆಯ ಪ್ರದೇಶದಲ್ಲಿ ಘನತ್ಯಾಜ್ಯ ಮುಳ್ಳು ಕಂಟಿ ಬೆಳೆದಿದೆ. ಈ ಪ್ರದೇಶದಲ್ಲಿ ಕಲ್ಯಾಣ ಕರ್ನಾಟಕ ಅನುದಾನದ 48 ಲಕ್ಷ ರೂ. ಯೋಜನಾ ವೆಚ್ಚದಲ್ಲಿ ಟೆಂಡರ್ ಆಗಿ 6 ತಿಂಗಳಾಗಿದ್ದು, ಕಾಮಗಾರಿ ಕಾಲಮಿತಿ ಮೀರಿದೆ.
ಪುರಸಭೆ ರಾಜಕಾಲುವೆ ಸರಹದ್ದು ಅಳತೆ ಮಾಡಿ ಒತ್ತುವರಿ ನಿವೇಶನಗಳ ತೆರವುಗೊಳಿಸಬೇಕಿದ್ದು ಇದು ಪುರಸಭೆಯಿಂದ ಅಸಾದ್ಯವಾಗಿದೆ. ಈ ಸಮಸ್ಯೆಯನ್ನು ನಿಭಾಯಿಸಿ ಪರಿಹಾರ ಕಂಡುಕೊಳ್ಳಬೇಕಾದ ಪುರಸಭೆ, ಭೂಮಾಪನ ಇಲಾಖೆಗೆವಹಿಸಿ ಜಾಣ ಕುರುಡು ಪ್ರದರ್ಶಿಸಿದೆ. ಪುರಸಭೆ ಅಸಹಕಾರದಿಂದ ನಿವೇಶನ ಒತ್ತುವರಿ ತೆರವು ಕಾರ್ಯಾಚರಣೆ ಪುರಸಭೆಗೆ ನುಂಗಲು ಬಾರದ, ಉಗಳಲು ಬಾರದ ಬಿಸಿ ತುಪ್ಪವಾಗಿದೆ. ಆದರೆ ಪ್ರತಿ ಮಳೆಗೂ ಈ ಪ್ರದೇಶ ಜಲಾವೃತಗೊಂಡು ಸಂಚಾರಕ್ಕೆ ಅಡಚಣೆಯಾಗುತ್ತಿದ್ದು ಈ ದುಸ್ಥಿತಿಯಲ್ಲಿ ವಿಷಜಂತುಗಳ ಕಾಟ ನಿವಾಸಿಗಳಲ್ಲಿ ಭಯ ಹುಟ್ಟಿಸಿದೆ.
ಸ್ಥಳೀಯ ನಿವಾಸಿಗಳಾದ ಡಿ.ಬಿ.ಗಡೇದ್, ಎ.ವೈ.ಲೋಕರೆ, ರಮೇಶ ನೀಲಿ ಮೊದಲಾದವರು, ರಾಜಕಾಲುವೆಗೆ ಸಿಮೆಂಟ್ ಕಾಂಕ್ರೀಟ್ ಚರಂಡಿ ನಿರ್ಮಾಣ ಕಾಮಗಾರಿ ತುರ್ತಾಗಿ ನಡೆಸಲು ಪುರಸಭೆಗೆ ಮನವಿ ಮಾಡಿದರೂ ಪ್ರಯೋಜನೆ ಆಗಿಲ್ಲ. ಸಂಬಂಧಿಸಿದ ಪುರಸಭೆ ಸದಸ್ಯೆ ಇದ್ದರೂ ಇಲ್ಲದಂತೆ ಇದ್ದು ಈ ಸದಸ್ಯೆಯನ್ನು ಆಯ್ಕೆ ಮಾಡಿ ತಪ್ಪು ಮಾಡಿದ್ದೇವೆ. ಪುರಸಭೆ ಅಧಿಕಾರಿಗಳ ನಿರ್ಲಕ್ಷ ನಡೆಗೆ ಬೇಸರ ವ್ಯಕ್ತ ಪಡಿಸಿದ್ದಾರೆ.
ಇದನ್ನೂ ಓದಿ : ಪಿ.ಎಂ-ಕಿಸಾನ್ ಯೋಜನೆಯಡಿ ಪರಿಹಾರ : ಇ-ಕೆವೈಸಿಗೆ ಇಂದೇ ಕೊನೆಯ ದಿನ
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಜಾನಪದ ಪ್ರಪಂಚ ಪ್ರಶಸ್ತಿ ಪ್ರದಾನ; ಅಧಿಕಾರಕ್ಕೆ ಬಂದ ಕೂಡಲೇ ವಿಶೇಷ ಅನುದಾನ: ಸಿದ್ದರಾಮಯ್ಯ

360 ಡಿಗ್ರಿ ಬ್ರ್ಯಾಂಡಿಂಗ್ ಪ್ರಚಾರ ನಡೆಸಲು ಕಾಂಗ್ರೆಸ್ ಮುಖಂಡರಿಗೆ ಟಾಸ್ಕ್

ಪ್ರತಿಪಕ್ಷದ ನಾಯಕರನ್ನು ಹೀಗಳೆದಾಗ ಭಾರತದ ಗೌರವಕ್ಕೆ ಧಕ್ಕೆ ಉಂಟಾಗುವುದಿಲ್ಲವೇ : ಸಿದ್ದರಾಮಯ್ಯ

ಬೆಂಗಳೂರು ಏರೋ ಇಂಡಿಯಾ ಶೋ ; ಮಾಂಸ ಮಾರಾಟ ಬಂದ್

ದಾಖಲೆ ಸಮೇತ ದೂರು ನೀಡಿದರೆ ದೂರುದಾರಿಗೂ ರಕ್ಷಣೆ : ಲೋಕಾಯುಕ್ತ ಪಾಟೀಲ್
MUST WATCH

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?

ಕೃಷ್ಣ ನಗರಿಯ ಕುರಿತು ಅಭಿಮಾನದ ಮಾತುಗಳನ್ನಾಡಿದ Melody King Rajesh Krishnan
