ಅಂತರ್ಜಲ ಕುಸಿತ: ನೀರಿಗೆ ಹಾಹಾಕಾರ


Team Udayavani, Nov 4, 2018, 4:13 PM IST

4-november-19.gif

ಕುಷ್ಟಗಿ: ಅಂತರ್ಜಲ ಕುಸಿತದ ಹಿನ್ನೆಲೆಯಲ್ಲಿ ಪಟ್ಟಣದ ಹೊರವಲಯದ ಮಾರುತಿ ನಗರದಲ್ಲಿ ಕುಡಿಯುವ ನೀರಿನ ಅಭಾವ ತಲೆದೋರಿದ್ದು, ನೀರಿಗಾಗಿ ಹಾಹಾಕಾರ ಶುರುವಾಗಿದೆ.

ಪಟ್ಟಣದ ಪುರಸಭೆ ವ್ಯಾಪ್ತಿಯ 1ನೇ ವಾರ್ಡ್‌ನಲ್ಲಿರುವ ಕೊಳಚೆ ನಿರ್ಮೂಲನೆಯ ಮಂಡಳಿ ಅಧಿಧೀನದಲ್ಲಿ 200 ಮನೆಗಳಿದ್ದು, ಇವುಗಳೊಂದಿಗೆ ಹೆಚ್ಚುವರಿಯಾಗಿ 100 ಮನೆಗಳು ತಲೆ ಎತ್ತಿವೆ. ಅಂದಾಜು 1,200 ಜನಸಂಖ್ಯೆ ಇದೆ. ಇಷ್ಟೊಂದು ಜನಕ್ಕೆ ನೀರು ಪೂರೈಸಲು ಇಲ್ಲಿ ಇರುವುದು ಒಂದೇ ಕೊಳವೆಬಾವಿ. ಒಂದೇ ಕೊಳವೆಬಾವಿ ನೀರು ಸಾಲುತ್ತಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಕೇವಲ ಒಂದೇ ಕೊಳವೆಬಾವಿಯಿಂದ ಇಡೀ ಬಡಾವಣೆಯ ಜನತೆ ನೀರು ತುಂಬಿಕೊಳ್ಳುವ ಪರಿಸ್ಥಿತಿ ಇದೆ. ಇದು ಬಿಟ್ಟರೆ ನೀರಿನ ಪರ್ಯಾಯ ವ್ಯವಸ್ಥೆ ಇಲ್ಲ. ಪಕ್ಕದ ತೋಟಪಟ್ಟಿಗಳಿಂದ ನೀರು ತರಬೇಕೆಂದರೆ ಅಲ್ಲಿಯೂ ಅಂತರ್ಜಲ ಕೊರತೆಯಿಂದ ರೈತರು ನೀರು ನೀಡಲು ಹಿಂದೇಟು ಹಾಕುತ್ತಿದ್ದಾರೆ. ನೀರಿಗಾಗಿ ನಿತ್ಯದ ಕೆಲಸ ಬಿಟ್ಟು, ನೀರಿನ ತೊಟ್ಟಿಯ ಬಳಿ ದಿನವೂ ಕಾಯುತ್ತ ಕುಳಿತರೆ ನೀರು ಸಿಗುತ್ತದೆ. ನೀರಿಗಾಗಿ ಜಗಳ ಸಾಮಾನ್ಯವಾಗುತ್ತಿದ್ದು, ಸಂಬಂಧಿಸಿದ ಪುರಸಭೆ ಸದಸ್ಯರ ಗಮನಕ್ಕೆ ತರಲಾಗಿದ್ದು, ಕೊಳವೆಬಾವಿ ಕೊರೆಸುವ ಭರವಸೆ ನೀಡಿದ್ದಾರೆ. 

ಈ ಹಿನ್ನೆಲೆಯಲ್ಲಿ ಅಂತರ್ಜಲ ಸೆಲೆಗಾಗಿ ಹುಡುಕಾಟ ನಡೆಸಿರುವುದು ಕಂಡು ಬಂತು. ಕೃಷ್ಣೆಯ ನೀರು ಮರೀಚಿಕೆ: ಈ ಬಡಾವಣೆಯ ಕೂಗಳತೆ ದೂರದಲ್ಲಿ ಆಲಮಟ್ಟಿ ಜಲಾಶಯದಿಂದ ಜಿಂದಾಲ್‌ ಗೆ ಕೃಷ್ಣಾ ನದಿ ನೀರಿನ ಪೈಪ್‌ಲೈನ್‌ ಹಾದು ಹೋಗಿದೆ. ಈ ಪೈಪ್‌ಲೈನ್‌ ಮೂಲಕ ಆಸುಪಾಸಿನ ಗ್ರಾಮಗಳಿಗೆ ನೀರು ಬಳಸಿಕೊಳ್ಳಲಾಗಿದೆ. ಅದೇ ರೀತಿ ಮಾರುತಿ ನಗರಕ್ಕೂ ಈ ನೀರು ಕೊಡಿ ಎನ್ನುವ ಪ್ರಸ್ತಾಪವನ್ನು ಶಾಸಕ ಅಮರೇಗೌಡ ಪಾಟೀಲ ಬಯ್ನಾಪೂರ ಅವರಲ್ಲಿ ನಿವೇದಿಸಿಕೊಳ್ಳಲಾಗಿದೆ. ಆದರೆ ಶಾಸಕರು, ಈ ನೀರು ಕೇವಲ ಗ್ರಾಮೀಣ ಪ್ರದೇಶಕ್ಕೆ ಮಾತ್ರ ಪಟ್ಟಣಕ್ಕೆ ಅಲ್ಲ ಎಂದು ಹೇಳಿ ಪುನಃ ಪ್ರಸ್ತಾಪಿಸದಂತೆ ಮಾಡಿದ್ದಾರೆ. ಈಗಿನ ಅಸಮರ್ಪಕ ಮಳೆ ಪರಿಸ್ಥಿತಿಯಲ್ಲಿ ಅಂತರ್ಜಲ ನೆಚ್ಚಿಕೊಳ್ಳುವುದು ಅಸಾಧ್ಯವೆನಿಸಿದೆ. ದಿನದಿಂದ ದಿನಕ್ಕೆ ಅಂತರ್ಜಲ ಕುಸಿಯುತ್ತಿದೆ. ಇದುವರೆಗೂ 10 ಕೊಳವೆಬಾವಿ ಕೊರೆಸಲಾಗಿದ್ದು, ಎಲ್ಲವೂ ವಿಫಲವಾಗಿವೆ. ಇಂತಹ ಪರಿಸ್ಥಿತಿಯಲ್ಲಿ ಜನರ ಕಷ್ಟಕ್ಕೆ ಸ್ಪಂದಿಸಿದ ಮೋಹನಲಾಲ್‌ ಜೈನ್‌ ಹಾಗೂ ಸ್ಥಳೀಯರು ವಂತಿಗೆ ಸಂಗ್ರಹಿಸಿ ಕೊಳವೆಬಾವಿ ಹಾಕಿಸಿಕೊಂಡಿದ್ದು, ಅದರಿಂದಲೇ ಈ ಬಡಾವಣೆ ನೀರು ಕಾಣುವಂತಾಗಿದೆ ಎಂದು ಸ್ಥಳೀಯರಾದ ಶಿವು ಹಜಾಳ, ಮಹಿಬೂಬ್‌ ಅಳ್ಳಳ್ಳಿ, ಬುಡಾನಸಾಬ್‌ ಖಾನಗೌಡ್ರು, ಹನುಮೇಶ ಮೇಟಿ ತಿಳಿಸಿದರು.

ಈ ಬಡಾವಣೆಯಲ್ಲಿ ಜನಸಂಖ್ಯೆಗೆ ತಕ್ಕಂತೆ ಕುಡಿಯುವ ನೀರು ಹಾಗೂ ಅಗತ್ಯ ಸೌಲತ್ತು ಒದಗಿಸುವಂತೆ ಕೊಳಚೆ ನಿರ್ಮೂಲನೆ ಮಂಡಳಿಗೆ ಮನವಿ ಮಾಡಿಕೊಂಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಪುರಸಭೆ ಸದಸ್ಯರ, ಶಾಸಕರ ಗಮನಕ್ಕೆ ತರಲಾಗಿದ್ದು, ಕೊಳವೆಬಾವಿ ಕೊರೆಯುವ ವಾಹನ ಕಳುಹಿಸಲಾಗಿದ್ದು, ನೀರು ಸಿಕ್ಕರೆ ನಮ್ಮ ಪುಣ್ಯ. ಇಲ್ಲವಾಗಿದ್ದರೆ ಟ್ಯಾಂಕರ್‌ಗಳ ಮೂಲಕ ನೀರು ತರಿಸಿಕೊಳ್ಳುವುದು ಅನಿವಾರ್ಯವೆನಿಸಿದೆ ಎನ್ನುತ್ತಾರೆ ಸ್ಥಳೀಯರಾದ ದೊಡ್ಡಪ್ಪ.

ಮಾರುತಿ ನಗರದಲ್ಲಿ ಕುಡಿಯುವ ನೀರು ಮೂಲಸೌಕರ್ಯಕ್ಕಾಗಿ ಸರ್ಕಾರಕ್ಕೆ 7 ಲಕ್ಷ ರೂ. ಪ್ರಸ್ತಾವನೆ ಸಲ್ಲಿಸಿದ್ದೇವೆ. ಅನುದಾನ ಇಲ್ಲ ಎನ್ನುವ ಕಾರಣಕ್ಕೆ ಪ್ರಸ್ತಾವನೆ ವಾಪಸ್ಸಾಗಿದೆ. ಇನ್ನೂ ಪುರಸಭೆಯ ಅಭಿವೃದ್ಧಿ ಅನುದಾನದಲ್ಲಿ ಸ್ಲಂ ಸೆಸ್‌ ಮೊತ್ತದಲ್ಲಿ ಅಗತ್ಯ ಸೌಕರ್ಯ ಕೈಗೊಳ್ಳಬಹುದಾಗಿದೆ. ಪುರಸಭೆಯವರು ಸ್ಲಂಸೆಸ್‌ ಮೊತ್ತ ತಿಳಿಸಿದರೆ ಆ ಮೊತ್ತವನ್ನು ಬಳಸಿಕೊಳ್ಳಲು ಕೊಳಚೆ ನಿರ್ಮೂಲನೆ ಮಂಡಳಿ ಅನುಮೋದನೆ ನೀಡಲಿದೆ. 
. ಆನಂದಪ್ಪ, ಎಇಇ ಕೊಳಚೆ ನಿರ್ಮೂಲನೆ ಮಂಡಳಿ, ಗದಗ

ಟಾಪ್ ನ್ಯೂಸ್

Kota: ಬೈಕ್‌ ಅಪಘಾತ; ಯುವಕ ಸಾವು

Kota: ಬೈಕ್‌ ಅಪಘಾತ; ಯುವಕ ಸಾವು

Uppinangady : ಗ್ರಾ.ಪಂ. ಸಿಬಂದಿ ಆತ್ಮಹತ್ಯೆ

Uppinangady : ಗ್ರಾ.ಪಂ. ಸಿಬಂದಿ ಆತ್ಮಹತ್ಯೆ

Subrahmanya: ಬಸ್ಸಿನಿಂದ ಬಿದ್ದು ಪ್ರಯಾಣಿಕ ಸಾವು

Subrahmanya: ಬಸ್ಸಿನಿಂದ ಬಿದ್ದು ಪ್ರಯಾಣಿಕ ಸಾವು

ಬರ ಪರಿಹಾರದಲ್ಲಿ ಸಿಎಂ, ಕಾಂಗ್ರೆಸ್‌ ರಾಜಕೀಯ: ಅಶೋಕ್‌

ಬರ ಪರಿಹಾರದಲ್ಲಿ ಸಿಎಂ, ಕಾಂಗ್ರೆಸ್‌ ರಾಜಕೀಯ: ಅಶೋಕ್‌

“ಬರ ಪರಿಹಾರ ಕೊಡಿ, ಇಲ್ಲವೇ ರಾಜ್ಯಕ್ಕೆ ಬರಲೇಬೇಡಿ’

“ಬರ ಪರಿಹಾರ ಕೊಡಿ, ಇಲ್ಲವೇ ರಾಜ್ಯಕ್ಕೆ ಬರಲೇಬೇಡಿ’

Gold price drops by Rs 1,530 in one day

Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ

ನಿಮ್ಮ ಮನೆ ದೇವರು, ಮತದಾರರು ಒಳ್ಳೆಯದು ಮಾಡ್ತಾರಾ?: ಡಿಕೆಶಿ

ನಿಮ್ಮ ಮನೆ ದೇವರು, ಮತದಾರರು ಒಳ್ಳೆಯದು ಮಾಡ್ತಾರಾ?: ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Parameshwar

Dr.G. Parameshwara ಅವರ ಜಾತಿ ನಿಂದನೆ; ಬೀದರ್ ವ್ಯಕ್ತಿ ವಿರುದ್ಧ ಕೇಸ್

Minchu

Rain; ಬೀದರ್,ಕೊಪ್ಪಳದಲ್ಲಿ ಸಿಡಿಲಿನ ಆರ್ಭಟಕ್ಕೆ ಇಬ್ಬರು ಮೃತ್ಯು

Neha Hiremath Case; Protest by BJP-JDS-ABVP across the state

Neha Hiremath Case; ಬಿಜೆಪಿ-ಜೆಡಿಎಸ್-ಎಬಿವಿಪಿಯಿಂದ ರಾಜ್ಯದೆಲ್ಲೆಡೆ ಪ್ರತಿಭಟನೆ

Gangavathi; ಪರಾರಿಯಾಯ್ತು ಮೇಕೆ ಹಿಡಿಯಲು ಬಂದು ಸೆರೆಯಾಗಿದ್ದ ಚಿರತೆ

Gangavathi; ಪರಾರಿಯಾಯ್ತು ಮೇಕೆ ಹಿಡಿಯಲು ಬಂದು ಸೆರೆಯಾಗಿದ್ದ ಚಿರತೆ

crime (2)

Koppal: ಕಾಣೆಯಾಗಿದ್ದ 7 ವರ್ಷದ ಬಾಲಕಿ ಶವವಾಗಿ ಪತ್ತೆ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Kota: ಬೈಕ್‌ ಅಪಘಾತ; ಯುವಕ ಸಾವು

Kota: ಬೈಕ್‌ ಅಪಘಾತ; ಯುವಕ ಸಾವು

Uppinangady : ಗ್ರಾ.ಪಂ. ಸಿಬಂದಿ ಆತ್ಮಹತ್ಯೆ

Uppinangady : ಗ್ರಾ.ಪಂ. ಸಿಬಂದಿ ಆತ್ಮಹತ್ಯೆ

Subrahmanya: ಬಸ್ಸಿನಿಂದ ಬಿದ್ದು ಪ್ರಯಾಣಿಕ ಸಾವು

Subrahmanya: ಬಸ್ಸಿನಿಂದ ಬಿದ್ದು ಪ್ರಯಾಣಿಕ ಸಾವು

ಬರ ಪರಿಹಾರದಲ್ಲಿ ಸಿಎಂ, ಕಾಂಗ್ರೆಸ್‌ ರಾಜಕೀಯ: ಅಶೋಕ್‌

ಬರ ಪರಿಹಾರದಲ್ಲಿ ಸಿಎಂ, ಕಾಂಗ್ರೆಸ್‌ ರಾಜಕೀಯ: ಅಶೋಕ್‌

“ಬರ ಪರಿಹಾರ ಕೊಡಿ, ಇಲ್ಲವೇ ರಾಜ್ಯಕ್ಕೆ ಬರಲೇಬೇಡಿ’

“ಬರ ಪರಿಹಾರ ಕೊಡಿ, ಇಲ್ಲವೇ ರಾಜ್ಯಕ್ಕೆ ಬರಲೇಬೇಡಿ’

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.