ಕೆರೆ ಅಭಿವೃದ್ಧಿಗೆ ಸಹಾಯ ಹಸ್ತ ಚಾಚಿದ ವೃದ್ಧೆ
Team Udayavani, Mar 10, 2019, 11:33 AM IST
ಕುಷ್ಟಗಿ: ವೃದ್ಧೆಯೊಬ್ಬರು ತಮ್ಮ ವೃದ್ಧಾಪ್ಯ ವೇತನ ಹಾಗೂ ತಾವು ಕೂಡಿಟ್ಟ 10 ಸಾವಿರ ರೂ. ಗಳನ್ನು ನಿಡಶೇಸಿ ಕೆರೆ ಅಭಿವೃದ್ಧಿಗೆ ನೀಡಿ, ಇತರರಿಗೆ ಮಾದರಿಯಾಗಿದ್ದಾರೆ.
ಶಿವಮ್ಮ ಸಜ್ಜನ್ ಕೆರೆ ಅಭಿವೃದ್ಧಿಗೆ ದೇಣಿಗೆ ನೀಡಿದ ವೃದ್ಧೆ. ಇವರು ತಾಲೂಕಿನ ನಿಡಶೇಸಿ ಗ್ರಾಮದವರು. ಬಾಲ್ಯದಿಂದಲೂ ಅಧ್ಯಾತ್ಮ ಪ್ರಭಾವಕ್ಕೆ ಒಳಗಾಗಿ ದೇವದುರ್ಗ ತಾಲೂಕಿನ ಗೆಜ್ಜಿಬಾವಿ ಪಶ್ಚಕಂಥಿ ಹಿರೇಮಠದಲ್ಲಿ ಸ್ವಾಮೀಜಿ ಸೇವಾ ನಿರತರಾಗಿದ್ದರು. ಗೆಜ್ಜಿಭಾವಿ ಶ್ರೀಗಳು ಲಿಂಗೈಕ್ಯರಾದ ಬಳಿಕ ಅವರು ತಮ್ಮ ನೆಂಟರ್ ಮನೆಯಲ್ಲಿ ವಾಸವಾಗಿದ್ದಾರೆ. ಶಿವಮ್ಮ ಸಜ್ಜನ್ ಅವರಿಗೆ ಮಕ್ಕಳಿಲ್ಲ, ಸ್ವಂತಕ್ಕೆ ಮನೆ ಇಲ್ಲ. ಇದ್ದ ಜಮೀನು ನಿಡಶೇಸಿ ಕೆರೆಗೆ ಮುಳುಗಡೆಯಾಗಿದ್ದು, ಸರ್ಕಾರ ನೀಡುತ್ತಿರುವ ವೃದ್ಧಾಪ್ಯ ವೇತನ, ಅವರಿರುವ ನೀಡಿದ ಹಣದಲ್ಲಿ ಜೀವನ ಕಳೆಯುತ್ತಿದ್ದಾರೆ.
ಸಾರ್ವಜನಿಕರು, ರೈತರು ತಮ್ಮೂರಿನ ಕೆರೆಯ ಹೂಳೆತ್ತುವ ಕಾರ್ಯ ಕೈಗೊಂಡ ವಿಷಯವನ್ನು ದಿನಪತ್ರಿಕೆಗಳಲ್ಲಿ ಗಮನಿಸಿದ್ದ ಅವರು ತಾವು ಕೂಡಿಟ್ಟ ಹಣ ನೀಡಬೇಕೆನ್ನಿಸಿತು. ಈ ಹಿನ್ನೆಲೆಯಲ್ಲಿ ಎರಡ್ಮೂರು ಸಾರಿ ಭೇಟಿ ನೀಡಿ ಯಾರಿಗೆ ಹಣ ಕೊಡಬೇಕೆಂದು ತಿಳಿಯದೇ ವಾಪಸ್ಸಾಗಿದ್ದಾರೆ. ಕಳೆದ ಶುಕ್ರವಾರ ಖುದ್ದು ಕೆರೆ ಪ್ರದೇಶಕ್ಕೆ ಭೇಟಿ ನೀಡಿ ಅಲ್ಲಿದ್ದ ಕಲ್ಲೇಶ ತಾಳದ್, ತಾಜುದ್ದೀನ್ ದಳಪತಿ ಅವರಿಗೆ 10 ಸಾವಿರ ರೂ. ಹಸ್ತಾಂತರಿಸಿದರು. ಈ ವೇಳೆ ಪ್ರತಿಕ್ರಿಯಿಸಿದ ಅವರು, ಈ ಕೆರೆಗೂ ತಮಗೂ ಅವಿನಾಭಾವ ಸಂಬಂಧವಿದೆ. ಈ ಕೆರೆಗೆ ಮುಳುಗಡೆಯಾಗಿರುವ ಜಮೀನಿನಲ್ಲಿ ಸದಾ ನೀರು ಇರಬೇಕು. ಪ್ರಾಣಿ ಪಕ್ಷಿ, ದನಕರುಗಳಿಗೆ ಆಸರೆಯಾಗಿರಬೇಕೆಂದು ಆಶಯ ವ್ಯಕ್ತಪಡಿಸಿದರು. ಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ದೇವೇಂದ್ರಪ್ಪ ಬಳೂಟಗಿ ಅವರು, ಶಿವಮ್ಮ ಸಜ್ಜನ್ ನಿಸ್ವಾರ್ಥ ಸೇವೆಗೆ ಖುದ್ದಾಗಿ ಅವರ ಮನೆಗೆ ತೆರಳಿ ಸನ್ಮಾನಿಸಿದರು. ಈ ವೇಳೆ ತಾಜುದ್ದೀನ್ ದಳಪತಿ, ಅಪ್ಪಣ್ಣ ನವಲೆ ಇತರರಿದ್ದರು.
ದೇಣಿಗೆ: ಕುಷ್ಟಗಿ ತಾಪಂ ಸಿಬ್ಬಂದಿ 2ಲಕ್ಷ ರೂ., ತೋಟಗಾರಿಕೆ ಉಪ ನಿರ್ದೇಶಕ ಕೃಷ್ಣ ಉಕ್ಕುಂದ ಅವರು ತಮ್ಮ ಇಲಾಖಾ ಸಿಬ್ಬಂದಿ ಸಂಗ್ರಹಿಸಿದ 1.50 ಲಕ್ಷ ರೂ.ಗಳನ್ನು ಕೆರೆ ಅಭಿವೃದ್ಧಿ ಸಮಿತಿಗೆ ನೀಡಿದರು. ಇದೇ ವೇಳೆ ಸಿಪಿಐ ಸುರೇಶ ತಳವಾರ ಮಿತ್ರರಾದ ಇಲಕಲ್ಲ ರಾಘವೇಂದ್ರ ಎಂಟರ್ ಪ್ರೈಸಿಸ್, ಸೂರ್ಯ ನಾರಾಯಣ ರಡ್ಡಿ ಅವರು ಕೆರೆ ಅಭಿವೃದ್ಧಿಗೆ 2 ಲಕ್ಷ ರೂ., ಸ್ಥಳೀಯ ವಿಜಯ ವಿಠ್ಠಲ ಮಂದಿರದಿಂದ 25 ಸಾವಿರ ರೂ. ದೇಣಿಗೆ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kanakagiri ದೇಗುಲಕ್ಕೆ ಬಂದಿದ್ದ ಕರಡಿ ಸೆರೆ ಹಿಡಿಯುವಾಗ ದಾಳಿ: ವೃದ್ಧ ಸಾವು
ಕೊಪ್ಪಳ: ಮಗ ರಾಜಶೇಖರ ವಿರುದ್ಧ ತಂದೆ ನಾಮಪತ್ರ ಸಲ್ಲಿಕೆ!
Kushtagi:ವಿದ್ಯುತ್ದೀಪದ ಕಂಬಗಳಿಗೆ ಬಲ್ಬ್ ಅಳವಡಿಸುವ ವೇಳೆ ಅವಘಡ; ಪುರಸಭೆ ಸಿಬ್ಬಂದಿಗೆ ಗಾಯ
Kushtagi: ನಿರೀಕ್ಷಿತ ಫಲಿತಾಂಶ ಬಾರದ ಹಿನ್ನೆಲೆ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ
Koppala; ಬಿಜೆಪಿಯಲ್ಲಿ ಸೌಜನ್ಯತೆ ಇಲ್ಲವೆನಿಸಿ ಕಾಂಗ್ರೆಸ್ ಸೇರಿದೆ: ಸಂಗಣ್ಣ ಕರಡಿ
MUST WATCH
ಹೊಸ ಸೇರ್ಪಡೆ
Davanagere; ಗಾಯಿತ್ರಿ ಸಿದ್ದೇಶ್ವರ್ ಅಂತಿಮ ನಾಮಪತ್ರ ಸಲ್ಲಿಕೆ; ಭರ್ಜರಿ ಮೆರವಣಿಗೆ
Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ
Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ
Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ
Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ