ಬೆಳಿಗ್ಗೆ ಶಾಲೆ ಹೋಗೋ ಹೊತ್ತಿಗಾದ್ರೂ ಒಂದು ಬಸ್ ಬಿಡ್ರಿ… ಸಂಜೆ ಬೇಕಾದ್ರು ನಡ್ಕೊಂಡು ಹೋಗ್ತೀವಿ..
ಅಧಿಕಾರಿಗಳಲ್ಲಿ ಮನವಿ ಮಾಡಿದ ಶಾಲಾ ವಿದ್ಯಾರ್ಥಿಗಳು
Team Udayavani, Nov 30, 2022, 12:10 PM IST
ಕುಷ್ಟಗಿ: ಬೆಳಗ್ಗೆ ಶಾಲೇ ಹೋಗೋ ಹೊತ್ತಿಗೆ ಒಮ್ಮೆ ನಮ್ಮೂರಿಗೆ ಬಸ್ ಬಿಡ್ರೀ… ಸಂಜೆ ಶಾಲೆ ಬಿಟ್ ಮೇಲೆ ಬೇಕಾದ್ರು ನಾವು ಕಾಲ್ನಡಿಗೆಯಲ್ಲೇ ನಮ್ಮೂರಿಗೆ ಹೋಗ್ತೀವಿ.. ಇದು ಕುಷ್ಟಗಿ ತಾಲೂಕಿನ ವಣಗೇರಾ ಗ್ರಾಮದ ವಿದ್ಯಾರ್ಥಿಗಳ ಆಳಲು.
ವಣಗೇರಾ ಗ್ರಾಮದ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು 5 ಕಿ.ಮೀ. ಅಂತರದ ತಳವಗೇರಾ ಪ್ರೌಢಶಾಲೆಯಲ್ಲಿ ಕಲಿಯುತ್ತಿದ್ದಾರೆ. ವಣಗೇರಾದಿಂದ ತಳವಗೇರಾ ಮಾರ್ಗವಾಗಿ ರಸ್ತೆ ಚನ್ನಾಗಿದ್ದರೂ ಈ ಒಳ ಮಾರ್ಗದಲ್ಲಿ ಒಂದೇ ಒಂದು ಬಸ್ ಸೇವೆ ಇಲ್ಲ.
ಬೆಳಗ್ಗೆ ಕುಷ್ಟಗಿಯಿಂದ ರಾಷ್ಟ್ರೀಯ ಹೆದ್ದಾರಿ ಮಾರ್ಗವಾಗಿ ವಣಗೇರಾ ವರೆಗೆ ಬಂದು ಮತ್ತೆ ಅದೇ ಮಾರ್ಗವಾಗಿ ಕುಷ್ಟಗಿಗೆ ಹೋಗುತ್ತದೆ. ಸದ್ಯ ಈ ಬಸ್ಸನ್ನೇ ವಣಗೇರಾ ಮಾರ್ಗವಾಗಿ ತಳವಗೇರಾ ಶಾಲೆಯ ತನಕ ಬಂದರೆ ಸಂಜೆ ಶಾಲೆ ಬಿಡುವ ಸಮಯಕ್ಕೆ ತಳವಗೇರಾ ದಿಂದ ಕುಷ್ಟಗಿಗೆ ಪ್ರಯಾಣಿಸಿದರೆ ಮಕ್ಕಳಿಗೆ ಸಹಾಯವಾಗುತ್ತದೆ ಎಂದು ಮನವಿ ಮಾಡಿದ್ದರು. ಆದರೆ ಈ ಮನವಿಗೆ ಘಟಕ ವ್ಯವಸ್ಥಾಪಕರು ಸ್ಪಂಧಿಸುತ್ತಿಲ್ಲ ಹೀಗಾಗಿ ಬೆಳಗ್ಗೆ ಶಾಲಾ ಆರಂಭದ ವೇಳೆಗೆ ಕುಷ್ಟಗಿ, ವಣಗೇರಾ ಬಸ್ ಸೇವೆಯನ್ನು ತಳವಗೇರಾಕ್ಕೆ ವಿಸ್ತರಿಸಿರಿ ಸಂಜೆ ಶಾಲೆ ಬಿಟ್ಟ ಬಳಿಕ ವಣಗೇರಾಕ್ಕೆ 5 ಕಿ.ಮೀ. ನಡೆದು ಬರುತ್ತೇವೆ ಎಂದು ಕೇಳಿಕೊಂಡರು ಘಟಕ ವ್ಯವಸ್ಥಾಪಕ ಸ್ಪಷ್ಟ ಭರವಸೆ ನೀಡಿಲ್ಲ ಎಂದು ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಉಮೇಶ ಯಾದವ್ ತಿಳಿಸಿದ್ದಾರೆ.
ಇದನ್ನೂ ಓದಿ: ಫಲಿತಾಂಶ ಬರೋವರೆಗೂ ಕಾದು ನೋಡಿ…ಗುಜರಾತ್ ನಲ್ಲಿ AAP ಖಾತೆಯನ್ನೇ ತೆರೆಯಲ್ಲ: ಶಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
PSI re-examination: ಪಿಎಸ್ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ
Lok sabha polls: ಸುರೇಶ್ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್ ದಾಸ್
Congress candidate: ನಾನು ಹುಟ್ಟಿದಾಗ ಒಕ್ಕಲಿಗ, ಬೆಳೆಯುತ್ತ ವಿಶ್ವಮಾನವ: ಲಕ್ಷ್ಮಣ್
Dinesh Gundu Rao: ಕ್ಷಯ ರೋಗ ನಿಯಂತ್ರಣ ಔಷಧ ಪೂರೈಕೆಗೆ ಕೇಂದ್ರಕ್ಕೆ ಮನವಿ; ದಿನೇಶ್
Lok Sabha elections: ಸಂಸದ ಬಸವರಾಜುಗೆ “ಗೋ ಬ್ಯಾಕ್’ ಎಂದ ಬಿಜೆಪಿಗರು!
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ