ಆದಾಯವಿಲ್ಲದೆ ನರಳುತ್ತಿದೆ ಎಪಿಎಂಸಿ

| ಎಪಿಎಂಸಿ ಕಾಯ್ದೆ ತಿದ್ದುಪಡಿಯಿಂದ ವೇದನೆ | ಪ್ರಸಕ್ತ ವರ್ಷ ಶೇ. 60 ಆದಾಯ ಕುಸಿತ

Team Udayavani, Feb 23, 2021, 5:16 PM IST

ಆದಾಯವಿಲ್ಲದೆ ನರಳುತ್ತಿದೆ ಎಪಿಎಂಸಿ

ಕೊಪ್ಪಳ: ರಾಜ್ಯ ಸರ್ಕಾರವು ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದ ಬಳಿಕ ಎಪಿಎಂಸಿಯಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಯಾಗಿದೆ. ವರ್ತಕರು, ವಹಿವಾಟಿಗೆ ಮೂಗುದಾರವೇ ಇಲ್ಲದಂತಾಗಿದ್ದು ಆದಾಯದಲ್ಲೂ ಭಾರಿ ಕುಸಿತ ಕಂಡಿದೆ. ಆಡಳಿತ ಮಂಡಳಿಗೂ ಆದಾಯ ಮೂಲ ಸೃಜನೆಗೆ ಪರ್ಯಾಯ ದಾರಿಗಳು ಕಾಣದಂತಾಗಿದೆ.

ಹೌದು. ರಾಜ್ಯ ಸರ್ಕಾರ ಎಪಿಎಂಸಿ ಕಾಯ್ದೆಗೆ ತಿದ್ದುಪಡಿತಂದ ಬಳಿಕ ಎಪಿಎಂಸಿ ಹಲ್ಲಿಲ್ಲದಹಾವಿನಂತಾಗಿದೆ ಎನ್ನುವ ಮಾತುಸಹಜವಾಗಿಯೇ ಕೇಳಿ ಬರುತ್ತಿದೆ. ಆದರೆ ರೈತರಿಗೆ ನಾವು ಮುಕ್ತ ಅವಕಾಶ ಕಲ್ಪಿಸಿದ್ದೇವೆ.ಎಲ್ಲಿ ಬೇಕಾದರೂ ಮಾರಾಟ ಮಾಡಲು ಅವಕಾಶವಿದೆ ಎಂದೆನ್ನುತ್ತಿದೆ ಸರ್ಕಾರ.

ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರುವ ಮೊದಲುರೈತರು ಹಾಗೂ ವರ್ತಕರು ಎಪಿಎಂಸಿ ಆವರಣದಲ್ಲೇ ತಮ್ಮ ಉತ್ಪನ್ನಮಾರಾಟ ಮಾಡಲು, ಖರೀದಿಸಲುಅವಕಾಶ ಕಲ್ಪಿಸಲಾಗಿತ್ತು. ಕಾಯ್ದೆಗೆ ತಿದ್ದುಪಡಿ ತಂದ ನಂತರ ರೈತ ಹಾಗೂ ವರ್ತಕರಿಗೆ ಖರೀದಿ,ವಹಿವಾಟಿಗೆ ಮುಕ್ತ ಅವಕಾಶ ಸಿಕ್ಕಂತಾಗಿದೆ. ಕಾಯ್ದೆಗೆ ತಿದ್ದುಪಡಿ ತಂದ ಬಳಿಕ ಎಪಿಎಂಸಿಗಳು ತನ್ನ ಪರಿಸ್ಥಿತಿಯೂ ಅದೇ ಆಗಿದೆ. ಅಧಿಕಾರಿಗಳಿಗೆಎಪಿಎಂಸಿಗಳ ಒಳಗೆ ಮಾತ್ರ ಅಧಿಕಾರ ಮೀಸಲಿಟ್ಟುಹೊರಗೆ ಏನೇ ನಡೆದರೂ ಅಧಿಕಾರಿಗಳು ಕ್ರಮ ಕೈಗೊಳ್ಳದಂತಹ ಸ್ಥಿತಿ ಎದುರಾಗಿದೆ.

ಎಪಿಎಂಸಿ ಆದಾಯಕ್ಕೂ ಹೊಡೆತ: ಎಪಿಎಂಸಿ ಕಾಯ್ದೆ ತಿದ್ದುಪಡಿಗೂ ಮೊದಲು ವರ್ತಕರಿಂದ ಮಾರುಕಟ್ಟೆ ಶುಲ್ಕ 1.50 ರೂ. ವಸೂಲಿ ಮಾಡಲಾಗುತ್ತಿತ್ತು.ಆಗ ಕೊಪ್ಪಳ ಎಪಿಎಂಸಿಗೆ ಮಾಸಿಕ 30 ಲಕ್ಷ ರೂ. ಆದಾಯ ಬರುತ್ತಿತ್ತು. ವಾರ್ಷಿಕವಾಗಿ 3ರಿಂದ 4 ಕೋಟಿ ರೂ. ಆದಾಯ ಬರುತ್ತಿತ್ತು. ಕಳೆದ2019-20ರಲ್ಲಿ ಎಪಿಎಂಸಿಗೆ 3.73 ಕೋಟಿ ರೂ.ಆದಾಯ ಬಂದಿದೆ. ಆದರೆ ಕಾಯ್ದೆಗೆ ತಿದ್ದುಪಡಿ ಬಳಿಕ ಮಾರುಕಟ್ಟೆ ಶುಲ್ಕವನ್ನು ದಿಢೀರ್‌ 35 ಪೈಸೆಗೆ ಇಳಿಕೆ ಮಾಡಿದ್ದರಿಂದ ಆದಾಯಕ್ಕೆ ದೊಡ್ಡ ಹೊಡೆತ ಬಿದ್ದಿದೆ. ಇದನ್ನು ಮನಗಂಡ ಸರ್ಕಾರ ಮತ್ತೆ 1ರೂ. ಗೆ ಏರಿಕೆ ಮಾಡಿ ಪ್ರಸ್ತುತ ಮತ್ತೆ 60 ಪೈಸೆಗೆ ಮಾರ್ಕೆಟ್‌ ಸೆಸ್‌ ಸಂಗ್ರಹಕ್ಕೆ ಆದೇಶಿಸಿದೆ. ಇದರಿಂದ ಕಳೆದ ಆಗಸ್ಟ್ ನಿಂದ ಈ ವರ್ಷದ ಜನವರಿ ಅಂತ್ಯಕ್ಕೆ 1.31 ಕೋಟಿರೂ. ಆದಾಯ ಸಂಗ್ರಹವಾಗಿದೆ. ಅಂದರೆ ಮಾಸಿಕ 5-6 ಲಕ್ಷ ರೂ. ಆದಾಯ ಸಂಗ್ರಹವಾಗುತ್ತಿದೆ. ಇದರಿಂದ ಆಡಳಿತ ನಿರ್ವಹಣೆಗೆ ಎಪಿಎಂಸಿ ನರಳಾಡುವಂತಾಗಿವೆ.

ಅಧಿಕಾರಿ ಇಲ್ಲದಂತಾಗಿದೆ: ಮೊದಲೆಲ್ಲ ಎಲ್ಲಿಯಾದರೂ ವರ್ತಕರು ಬಿಲ್‌ ಇಲ್ಲದೇ ಉತ್ಪನ್ನ ಸಾಗಾಟ ಮಾಡಿದರೆ ಎಪಿಎಂಸಿ ಅಧಿಕಾರಿಗಳು ದಾಳಿ ಮಾಡಿ ದಂಡ ವಿಧಿಸಲು ಅಧಿಕಾರವಿತ್ತು.ಕಾಯ್ದೆಗೆ ತಿದ್ದುಪಡಿ ಬಳಿಕ ಅಧಿಕಾರಿಗಳು ಎಪಿಎಂಸಿಆವರಣದಲ್ಲಿ ಮಾತ್ರ ಅಂತಹ ವಾಹನಗಳಿಗೆದಂಡ ವಿಧಿಸುವ ಅಧಿಕಾರವಿದೆ. ಹೊರಗಡೆ ಬಿಲ್‌ಇಲ್ಲದೇ ವರ್ತಕರು ಉತ್ಪನ್ನ ಸಾಗಾಟ ಮಾಡಿದ್ರೂ ಅಧಿಕಾರಿಗಳು ನೋಡಿಯೂ ಸುಮ್ಮನಿರಬೇಕಾದಪರಿಸ್ಥಿತಿ ಎದುರಾಗಿದೆ. ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲು ಬರಲ್ಲ. ಇನ್ನು ವರ್ತಕರು ಸಹ ರೈತರ ಉತ್ಪನ್ನವನ್ನು ಎಪಿಎಂಸಿ ಹೊರಗಡೆ ಖರೀದಿ ಮಾಡಿದರೆ ಮಾರುಕಟ್ಟೆ ಶುಲ್ಕ ಕಟ್ಟಬೇಕಿಲ್ಲ. ಎಪಿಎಂಸಿ ಆವರಣದಲ್ಲಿ ಖರೀದಿ ಮಾಡಿದರಷ್ಟೇ ಮಾರ್ಕೆಟ್‌ ಶುಲ್ಕ 60 ಪೈಸೆ ಕಟ್ಟಲು ಅವಕಾಶವಿದೆ. ಆದರೆಕೆಲವೆಡೆ ವರ್ತಕರು ಮಾರುಕಟ್ಟೆಯ ಶುಲ್ಕ ತಪ್ಪಿಸಲು ಎಪಿಎಂಸಿಯಲ್ಲೇ ರೈತರ ಉತ್ಪನ್ನ ಖರೀದಿ ಮಾಡಿದ್ದರೂನಾವು ಹೊರಗಡೆ ಖರೀದಿ ಮಾಡಿದ್ದೇವೆ ಎನ್ನುವಸಬೂಬು ನೀಡುತ್ತಿರುವುದರಿಂದ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದಂತಾಗಿದೆ.

ಆದಾಯ ಸೃಜನೆಗೆ ದಾರಿಯೇ ಇಲ್ಲ: ಕೊಪ್ಪಳ ಎಪಿಎಂಸಿಯಲ್ಲಿ ಆದಾಯ ಸೃಜನೆಗೆ ಪರ್ಯಾಯ ದಾರಿಯೇ ಇಲ್ಲದಂತಾಗಿದೆ. ಕೆಲವೊಂದು ಮಳಿಗೆ

ಬಾಡಿಗೆ ಬಿಟ್ಟರೆ ಮತ್ಯಾವ ಆದಾಯ ಮೂಲವೂ ಇಲ್ಲದಂತಾಗಿದ್ದು, ಸರ್ಕಾರದ ಅನುದಾನದಮೇಲೆಯೇ ಎಪಿಎಂಸಿಗಳು ಕಣ್ಣಿಡುವಂತಾಗಿದೆ.ಆದಾಯ ಕುಸಿತದ ಹಿನ್ನೆಲೆಯಲ್ಲಿ ಎಪಿಎಂಸಿಯಲ್ಲಿ ಕೆಲಸ ಮಾಡುತ್ತಿದ್ದ ಹೊರಗುತ್ತಿಗೆ ನೌಕರರು ವೇತನ ಇಲ್ಲದಂತಾಗಿ ಕೆಲಸ ಕಳೆದುಕೊಂಡಿದ್ದಾರೆ. ಎಪಿಎಂಸಿಗೂ ಇದೊಂದು ದೊಡ್ಡ ಸವಾಲಿನ ವಿಷಯವಾಗಿದೆ.

ರೈತರ ಒಡನಾಟ ಬಿಟ್ಟಿಲ್ಲ: ಎಪಿಎಂಸಿಗೆ ರೈತರ ಒಡನಾಟ ಮೊದಲಿನಂತೆ ಇದ್ದರೂ ವಹಿವಾಟಿನಲ್ಲಿ ಬದಲಾವಣೆ ಕಾಣುತ್ತಿಲ್ಲ. ಉತ್ಪನ್ನ ಕಳೆದ ವರ್ಷದಂತೆ ಈ ವರ್ಷ ಬರುತ್ತಿಲ್ಲ. ಬಂದರೂ ವರ್ತಕರು ರಾಮ-ಕೃಷ್ಣನ ಲೆಕ್ಕಮಾಡುತ್ತಿರುವುದರಿಂದ ಎಲ್ಲವೂ ಅಯೋಮಯ ಎನ್ನುವಂತಾಗಿದ್ದು, ಎಪಿಎಂಸಿಯಲ್ಲಿ ಕಸ ಒಡೆಯುವಕೂಲಿ ಕಾರ್ಮಿಕರಿಗೂ ವೇತನ ಕೊಡದಂತ ಪರಿಸ್ಥಿತಿ ಎದುರಾಗಿದೆ.

ಎಪಿಎಂಸಿಗೆ ಕಳೆದ ವರ್ಷ ಮಾರ್ಕೆಟ್‌ ಶುಲ್ಕ 1.50 ರೂ. ಇದ್ದಾಗ ನಮಗೆ 3.73 ಕೋಟಿ ರೂ. ಆದಾಯ ಬಂದಿತ್ತು. ಈ ವರ್ಷ ಮಾರ್ಕೆಟ್‌ ಶುಲ್ಕ 60 ಪೈಸೆ ಸರ್ಕಾರ ನಿಗದಿಮಾಡಿದ್ದರಿಂದ ಜನವರಿ ಅಂತ್ಯಕ್ಕೆ 1.31 ಕೋಟಿರೂ. ಆದಾಯ ಸಂಗ್ರಹವಾಗಿದೆ. ಶೇ.60ಆದಾಯ ಕುಸಿತವಾಗಿದೆ. ಇರುವ ಆದಾಯದಲ್ಲೇನಾವು ಆಡಳಿತ ನಡೆಸಬೇಕಾಗಿದೆ. ಆದಾಯಸೃಜನೆಗೆ ಪರ್ಯಾಯ ದಾರಿಗಳಿಲ್ಲ. ಸರ್ಕಾರದಆದೇಶವನ್ನು ನಾವು ಪಾಲಿಸಬೇಕಿದೆ. ಸಿದ್ದಯ್ಯಸ್ವಾಮಿ, ಕೊಪ್ಪಳ ಎಪಿಎಂಸಿ ಕಾರ್ಯದಶಿ

 

­ ದತ್ತು ಕಮ್ಮಾರ

ಟಾಪ್ ನ್ಯೂಸ್

IPL 2024; Chahal’s 200-wicket haul; First bowler to achieve this feat

IPL 2024; ಚಹಲ್‌ 200 ವಿಕೆಟ್‌ಗಳ ಕಮಾಲ್‌; ಈ ಸಾಧನೆಗೈದ ಮೊದಲ ಬೌಲರ್‌

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!

Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!

ಕಾಂಗ್ರೆಸ್‌ ವಿರುದ್ಧ ಮೋದಿ ಈಗ ದೇಶ ವಿಭಜನೆ ಅಸ್ತ್ರ ಪ್ರಯೋಗ

Loksabha election; ಕಾಂಗ್ರೆಸ್‌ ವಿರುದ್ಧ ಮೋದಿ ಈಗ ದೇಶ ವಿಭಜನೆ ಅಸ್ತ್ರ ಪ್ರಯೋಗ

Temperature ರಾಜ್ಯದ 10 ಜಿಲ್ಲೆಗಳಲ್ಲಿ ಬೀಸಲಿದೆ ಬಿಸಿಗಾಳಿ

Temperature ರಾಜ್ಯದ 10 ಜಿಲ್ಲೆಗಳಲ್ಲಿ ಬೀಸಲಿದೆ ಬಿಸಿಗಾಳಿ

6-court

Mangaluru: ಬಾಲಕಿಯನ್ನು ಅಪಹರಿಸಿ ಅತ್ಯಾಚಾರ; ಅಪರಾಧಿಗೆ 10 ವರ್ಷ ಕಠಿನ ಕಾರಾಗೃಹ ಶಿಕ್ಷೆ

ಸಂಪತ್ತು ಹಂಚಿಕೆ ಬಗ್ಗೆ ನಾವೆಲ್ಲಿ ಹೇಳಿದ್ದೇವೆ: ಖರ್ಗೆ ಪ್ರಶ್ನೆ

ಸಂಪತ್ತು ಹಂಚಿಕೆ ಬಗ್ಗೆ ನಾವೆಲ್ಲಿ ಹೇಳಿದ್ದೇವೆ: ಖರ್ಗೆ ಪ್ರಶ್ನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Parameshwar

Dr.G. Parameshwara ಅವರ ಜಾತಿ ನಿಂದನೆ; ಬೀದರ್ ವ್ಯಕ್ತಿ ವಿರುದ್ಧ ಕೇಸ್

Minchu

Rain; ಬೀದರ್,ಕೊಪ್ಪಳದಲ್ಲಿ ಸಿಡಿಲಿನ ಆರ್ಭಟಕ್ಕೆ ಇಬ್ಬರು ಮೃತ್ಯು

Neha Hiremath Case; Protest by BJP-JDS-ABVP across the state

Neha Hiremath Case; ಬಿಜೆಪಿ-ಜೆಡಿಎಸ್-ಎಬಿವಿಪಿಯಿಂದ ರಾಜ್ಯದೆಲ್ಲೆಡೆ ಪ್ರತಿಭಟನೆ

Gangavathi; ಪರಾರಿಯಾಯ್ತು ಮೇಕೆ ಹಿಡಿಯಲು ಬಂದು ಸೆರೆಯಾಗಿದ್ದ ಚಿರತೆ

Gangavathi; ಪರಾರಿಯಾಯ್ತು ಮೇಕೆ ಹಿಡಿಯಲು ಬಂದು ಸೆರೆಯಾಗಿದ್ದ ಚಿರತೆ

crime (2)

Koppal: ಕಾಣೆಯಾಗಿದ್ದ 7 ವರ್ಷದ ಬಾಲಕಿ ಶವವಾಗಿ ಪತ್ತೆ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

IPL 2024; Chahal’s 200-wicket haul; First bowler to achieve this feat

IPL 2024; ಚಹಲ್‌ 200 ವಿಕೆಟ್‌ಗಳ ಕಮಾಲ್‌; ಈ ಸಾಧನೆಗೈದ ಮೊದಲ ಬೌಲರ್‌

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Dina Bhavishya

Daily Horoscope; ಉದ್ಯೋಗಸ್ಥರಿಗೆ ಹಿತಶತ್ರುಗಳ ಕಾಟ.ಶನಿ ಅನುಗ್ರಹ ಪ್ರಾಪ್ತಿಯ ಸಮಯ

Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!

Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!

ಕಾಂಗ್ರೆಸ್‌ ವಿರುದ್ಧ ಮೋದಿ ಈಗ ದೇಶ ವಿಭಜನೆ ಅಸ್ತ್ರ ಪ್ರಯೋಗ

Loksabha election; ಕಾಂಗ್ರೆಸ್‌ ವಿರುದ್ಧ ಮೋದಿ ಈಗ ದೇಶ ವಿಭಜನೆ ಅಸ್ತ್ರ ಪ್ರಯೋಗ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.