ಗಂಗಾವತಿ ಚಿಕ್ಕರಾಂಪೂರ ಹತ್ತಿರ ಎರಡು ಚಿರತೆ, ಮೂರು ಕರಡಿ ಪ್ರತ್ಯಕ್ಷ: ಭಯದಲ್ಲಿ ಜನತೆ
Team Udayavani, Oct 11, 2020, 2:58 PM IST
ಗಂಗಾವತಿ: ಕಳೆದ ಒಂದು ವಾರದಿಂದ ತಾಲೂಕಿನ ಆನೆಗೊಂದಿ ಅಂಜನಾದ್ರಿ ಕಿಷ್ಕಿಂದಾ ಗುಡ್ಡ ಪ್ರದೇಶದಲ್ಲಿ ಚಿರತೆ ,ಕರಡಿಗಳು ಕಂಡು ಬಂರುತ್ತಿವೆ. ರವಿವಾರ ಬೆಳ್ಳಿಗ್ಗೆ ಅಂಜನಾದ್ರಿ ಬೆಟ್ಟದ ಹತ್ತಿರ ಇರುವ ಚಿಕ್ಕರಾಂಪೂರ ಗ್ರಾಮದ ಗುಡ್ಡದಲ್ಲಿ ಮೂರು ಕರಡಿಗಳು ಮತ್ತು ಎರಡು ಚಿರತೆಗಳು ಪ್ರತ್ಯಕ್ಷವಾಗಿವೆ.
ಕರಡಿ ಮತ್ತು ಚಿರತೆಗಳು ಕಾಣಸಿಕ್ಕಿರುವುದರಿಂದ ಸುತ್ತಮುತ್ತಲಿನ ಗ್ರಾಮಗಳ ಜನತೆ ಭಯಭೀತರಾಗಿದ್ದಾರೆ. ಕಳೆದ ಒಂದು ವಾರದಲ್ಲಿ ಜಂಗ್ಲಿ ರಂಗಾಪೂರದಲ್ಲಿ ದನ ಮೇಯಿಸಲು ತೆರಳಿದ್ದ ಮಹಿಳೆ ಹಾಗೂ ಪಾಲಕರ ಜತೆ ವಾಲೀಕಿಲ್ಲಾ ಮೇಗೋಟ್ ಆದಿಶಕ್ತಿ ದೇಗುಲಕ್ಕೆ ಆಗಮಿಸಿದ್ದ ಹೈದ್ರಾಬಾದ್ ಮೂಲದ09 ವರ್ಷದ ಬಾಲಕನ ಕುತ್ತಿಗೆಗೆ ಚಿರತೆ ಕಚ್ಚಿ ಗಾಯಗೊಳಿಸಿತ್ತು. ಈ ಘಟನೆ ಜನರು ಮರೆಯುವ ಮುಂಚೆ ರವಿವಾರ ಬೆಳ್ಳಿಗ್ಗೆ ಚಿಕ್ಕರಾಂಪೂರ ಗ್ರಾಮದ ಗುಡ್ಡದಲ್ಲಿ ಕರಡಿ ಚಿರತೆ ಪ್ರತ್ಯಕ್ಷವಾಗಿವೆ.
ಇದನ್ನೂ ಓದಿ:ಯಳಂದೂರು ಪಟ್ಟಣ ಪಂಚಾಯಿ : ಅಧ್ಯಕ್ಷೆ ಸ್ಥಾನಕ್ಕೆ ನಾಲ್ವರು ಮಹಿಳೆಯರ ಮಧ್ಯೆ ಪೈಪೋಟಿ
ಡಿಎಫ್ ಓ ಭೇಟಿ: ಚಿರತೆ ದಾಳಿ ಹಿನ್ನೆಲೆಯಲ್ಲಿ ತಾಲೂಕಿನ ಆನೆಗೊಂದಿ ಸಾಣಾಪೂರ ಹನುಮನಹಳ್ಳಿ ಜಂಗ್ಲಿ ರಂಗಾಪೂರ ಗುಡ್ಡಪ್ರದೇಶಕ್ಕೆ ಡಿಎಫ್ ಓ ಹರ್ಷಾಭಾನು, ತಾಲೂಕು ಅರಣ್ಯಾಧಿಕಾರಿಗಳು ರವಿವಾರ ಬೆಳ್ಳಿಗ್ಗೆ ಭೇಟಿ ನೀಡಿ ಪರಿಶೀಲಿಸಿದರು. ಚಿರತೆ ಕರಡಿ ಕಂಡು ಬಂದ ಪ್ರದೇಶದಲ್ಲಿ ಬೋನು ಇಡಲು ಸೂಚನೆ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗಂಗಾವತಿ: ನೇಮಕಾತಿ ಪರೀಕ್ಷೆಗೆ ವೆಬ್ ಕಾಸ್ಟಿಂಗ್ ಜಾರಿಯಾಗಲಿ
Dr.G. Parameshwara ಅವರ ಜಾತಿ ನಿಂದನೆ; ಬೀದರ್ ವ್ಯಕ್ತಿ ವಿರುದ್ಧ ಕೇಸ್
Rain; ಬೀದರ್,ಕೊಪ್ಪಳದಲ್ಲಿ ಸಿಡಿಲಿನ ಆರ್ಭಟಕ್ಕೆ ಇಬ್ಬರು ಮೃತ್ಯು
Neha Hiremath Case; ಬಿಜೆಪಿ-ಜೆಡಿಎಸ್-ಎಬಿವಿಪಿಯಿಂದ ರಾಜ್ಯದೆಲ್ಲೆಡೆ ಪ್ರತಿಭಟನೆ
Gangavathi; ಪರಾರಿಯಾಯ್ತು ಮೇಕೆ ಹಿಡಿಯಲು ಬಂದು ಸೆರೆಯಾಗಿದ್ದ ಚಿರತೆ
MUST WATCH
ಹೊಸ ಸೇರ್ಪಡೆ
LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
Students Notes: ಸ್ಕ್ರೀನ್ ಶಾರ್ಟ್ಗಳೆಂದು ಪುಸ್ತಕವಾಗದಿರಲಿ
ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ
Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು