ಲಿಂಗಾಯತ ಧರ್ಮಕ್ಕಾಗಿ ರಾಜೀನಾಮೆ ನೀಡಲೂ ಸಿದ್ಧ
Team Udayavani, Nov 12, 2017, 11:55 AM IST
ಕೊಪ್ಪಳ: “ಲಿಂಗಾಯತ ಧರ್ಮದ ಸಾಂವಿಧಾನಿಕ ಮಾನ್ಯತೆಗಾಗಿ ನ.13ರಂದು ಬೆಳಗಾವಿಯಲ್ಲಿ ಸಭೆ
ಕರೆಯಲು ನಿರ್ಧರಿಸಿದ್ದು, ಬಸವರಾಜ ಹೊರಟ್ಟಿ ಅವರ ಅಧ್ಯಕ್ಷತೆಯಲ್ಲಿ ಈ ಸಭೆ ನಡೆಯಲಿದೆ. ಸಭೆಯಲ್ಲಿ
ಲಿಂಗಾಯತ ಧರ್ಮದ ವಿಚಾರದಲ್ಲಿ ಇನ್ನೊಬ್ಬರ ಬಗ್ಗೆ ಯಾವುದೇ ಹೇಳಿಕೆ ನೀಡದಿರುವ ನಿರ್ಧಾರಕ್ಕೆ ಬರಲಿದ್ದೇವೆ. ಅಗತ್ಯ ಬಿದ್ದರೆ ಸಚಿವ ಸ್ಥಾನಕ್ಕೂ ರಾಜೀನಾಮೆ ನೀಡಲು ಸಿದ್ಧನಿದ್ದೇನೆ’ ಎಂದು ಜಲ ಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕೂಡಲಸಂಗಮ ಪೀಠದ ಸ್ವಾಮೀಜಿ ಸೇರಿ ಯಾರೇ ದಾರಿ
ತಪ್ಪಿ ಮಾತನಾಡಿದ್ದರೂ ಅದು ತಪ್ಪೆ. ಇನ್ಮುಂದೆ ಯಾವುದೇ ವ್ಯಕ್ತಿ ಹಾಗೂ ಸ್ವಾಮೀಜಿಗಳು ಯಾರ ಬಗ್ಗೆಯೂ ಸುಮ್ಮನೆ ಮಾತನಾಡದಂತೆ ಎಚ್ಚರಿಕೆ ವಹಿಸಲು ಬೆಳಗಾವಿಯಲ್ಲಿ ಸಭೆ ಕರೆದಿದ್ದೇವೆ. ವೀರಶೈವರು ಬೇಕಿದ್ದರೆ ನಮ್ಮ ಬಗ್ಗೆ ಮಾತನಾಡಿಕೊಳ್ಳಲಿ. ನಾವು ಯಾರ ಬಗ್ಗೆಯೂ ಮಾತನಾಡದಿರಲು ನಿರ್ಧರಿಸಲಿದ್ದೇವೆ ಎಂದರು.