10 ವಾಣಿಜ್ಯ ಮಳಿಗೆಗಳಿಗೆ ಬೀಗ
Team Udayavani, Apr 29, 2021, 7:41 PM IST
ಕುಷ್ಟಗಿ: ಪಟ್ಟಣದ ಬನ್ನಿಕಟ್ಟೆ ಸಂತೆ ಮೈದಾನದಲ್ಲಿ ಪುರಸಭೆ ಅಧೀನದಲ್ಲಿದ್ದ 10 ವಾಣಿಜ್ಯ ಮಳಿಗೆಗಳ ಅನಧಿಕೃತ ಬಳಕೆ ಹಿನ್ನೆಲೆಯಲ್ಲಿ ಮುಖ್ಯಾಧಿಕಾರಿ ಉಮೇಶ ಕೆ. ಹಿರೇಮಠ ನೇತೃತ್ವದಲ್ಲಿ ಬೀಗ ಜಡಿಯಲಾಯಿತು.
ಸಂತೆ ಮೈದಾನದಲ್ಲಿ 10 ವಾಣಿಜ್ಯ ಮಳಿಗೆಗಳಲ್ಲಿ ಕಾಯಿಪಲ್ಲೆ ವ್ಯಾಪಾರಸ್ಥರು ಕಾಯಿಪಲ್ಲೆ ಸಂಗ್ರಹಿಸಿಕೊಳ್ಳಲು ಬಳಕೆಯಲ್ಲಿತ್ತು. ಬುಧವಾರ ಪುರಸಭೆ ಮುಖ್ಯಾ ಧಿಕಾರಿ ಉಮೇಶ ಹಿರೇಮಠ ಮಳಿಗೆಗಳಲ್ಲಿ ದಾಸ್ತಾನು ಮಾಡಿದ್ದ ಕಾಯಿಪಲ್ಲೆ ಹೊರಗಿಟ್ಟುಕೊಳ್ಳುವಂತೆ ಸೂಚಿಸಿದರು. ಆಗ ಯಾರೂ ಕಾಯಿಪಲ್ಲೆ ಮಳಿಗೆಗಳಿಂದ ಹೊರಗಿಡಲು ಮುಂದಾಗಲಿಲ್ಲ. ಈ ಹಿನ್ನೆಲೆಯಲ್ಲಿ ಮುಖ್ಯಾಧಿಕಾರಿಗಳು ಕೂಡಲೇ 10 ಹೊಸ ಬೀಗ ತರಿಸಿ, ಎಲ್ಲ ಮಳಿಗೆಗಳ ಬಾಗಿಲು ಹಾಕಲು ಮುಂದಾದಾಗ, ವ್ಯಾಪಾರಸ್ಥರು ದಾಸ್ತಾನು ಮಾಡಿಕೊಂಡಿದ್ದ ಕಾಯಿಪಲ್ಲೆ, ಸೊಪ್ಪು ಹೊರಗಿಟ್ಟುಕೊಳ್ಳಲು ಯತ್ನಿಸಿದರು.
ಇದೇ ವೇಳೆ ಪೌರ ಕಾರ್ಮಿಕರು ಕಾಯಿಪಲ್ಲೆ ದಾಸ್ತಾನು ಹೊರಗಿಡಲು ನೆರವಾದರು. ನಂತರ 10 ವಾಣಿಜ್ಯ ಮಳಿಗೆಗಳಿಗೆ ಬೀಗ ಹಾಕಿದರು. ಈ ಕುರಿತು ಮುಖ್ಯಾ ಧಿಕಾರಿ ಉಮೇಶ ಹಿರೇಮಠ ಪ್ರತಿಕ್ರಿಯಿಸಿ, ತಾಲೂಕು ಕ್ರೀಡಾಂಗಣದಲ್ಲಿ ಕಾಯಿಪಲ್ಲೆ ಲಿಲಾವಿಗೆ ಅವಕಾಶವಿದೆ. ಅಲ್ಲಿ ಖರೀ ದಿಸಿದ ಕಾಯಿಪಲ್ಲೆ ಓಣಿಯಲ್ಲಿ ತಳ್ಳುಗಾಡಿಯಲ್ಲಿ ಮಾರಬೇಕು. ಸಾಮಾಜಿಕ ಅಂತರ, ಮಾಸ್ಕ್ ಧರಿಸದೇ ಕೆಲವು ವ್ಯಾಪಾರಸ್ಥರು ಬನ್ನಿಕಟ್ಟೆ ಸಂತೆ ಮೈದಾನದಲ್ಲಿ ಮಾರಾಟಕ್ಕೆ ಮುಂದಾಗಿದ್ದಾರೆ. ಅಲ್ಲದೇ ಕಾಯಿಪಲ್ಲೆಯನ್ನು ಪುರಸಭೆ ಮಳಿಗೆ ಗಳಲ್ಲಿ ದಾಸ್ತಾನು ಮಾಡಿರುವುದು ತೆರವು ಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Belagavi; ಸವದಿ ಮನೆಗೆ ಭೇಟಿ ನೀಡಿದ ರಣದೀಪ್ ಸುರ್ಜೆವಾಲಾ
Loksabha; ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ
LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
MUST WATCH
ಹೊಸ ಸೇರ್ಪಡೆ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Delhi Police: ಮಾರುತಿ ಸ್ವಿಫ್ಟ್ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!
BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ
Kannada Cinema; ಬ್ಯಾಡ್ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…
Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ