ವಿರುಪಾಪೂರ ಗಡ್ಡೆಯಲ್ಲಿ ಸಿಲುಕಿದ ವಿದೇಶಿಗರು ಮತ್ತು ಸ್ಥಳಿಯರು
Team Udayavani, Aug 11, 2019, 8:58 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಕೊಪ್ಪಳ: ಹಂಪಿ ಸಮೀಪದ ಪ್ರವಾಸಿ ತಾಣ ವಿರುಪಾಪುರ ಗಡ್ಡೆಯಲ್ಲಿ ವಿದೇಶಿಗರು ಸೇರಿದಂತೆ 350ಕ್ಕೂ ಹೆಚ್ಚು ಜನ ಸಿಲುಕಿದ್ದಾರೆ.
ವಿರುಪಾಪುರ ಗಡ್ಡೆಯು ಪ್ರವಾಸಿ ತಾಣವಾಗಿದ್ದು, ಹಂಪಿ, ಅಂಜಿನಾದ್ರಿ ವೀಕ್ಷಣೆಗೆ ಬರುವ ವಿದೇಶಿಗರು ಹೆಚ್ಚಾಗಿ ವಿರುಪಾಪುರ ಗಡ್ಡೆಯಲ್ಲೇ ನೆಲೆಸಿ ಪ್ರವಾಸ ಮುಗಿಸಿ ತೆರಳುತ್ತಾರೆ.
ವಿರುಪಾಪುರ ಗಡ್ಡೆಯು ತುಂಗಭದ್ರಾ ನದಿ ತಟದಲ್ಲಿ ಇದೆ. ಈ ಬಾರಿ ಜಲಾಶಯದಿಂದ ನೀರನ್ನು ನದಿ ಪಾತ್ರಗಳಿಗೆ ಹೆಚ್ಚಿನ ಮಟ್ಟದಲ್ಲಿ ಬಿಡುಗಡೆ ಮಾಡಿದ ಹಿನ್ನೆಲೆಯಲ್ಲಿ ವಿರುಪಾಪುರ ಗಡ್ಡೆಯು ನಡುಗಡ್ಡೆಯಾಗಿದೆ. ಮಾತ್ರವಲ್ಲದೇ ನದಿಯ ನೀರು ರಭಸವಾಗಿ ಹರಿಯುತ್ತಿದೆ. ವಿರುಪಾಪುರ ಗಡ್ಡೆಯಲ್ಲಿ ಹೋಟಲ್ ಮಾಲಿಕರು ಸೇರಿದಂತೆ ಸ್ಥಳೀಯ ನಿವಾಸಿಗಳು ನೆಲೆಸಿದ್ದಾರೆ.
20ಕ್ಕೂ ಹೆಚ್ಚು ವಿದೇಶಿಗರು ಗಡ್ಡೆಯಲ್ಲಿ ಸಿಲುಕಿದ್ದಾರೆ. ಕೊಪ್ಪಳ ಜಿಲ್ಲಾಡಳಿತ 64 ಜನರನ್ನು ರಕ್ಷಣೆ ಮಾಡಿ ಸುರಕ್ಷಿತ ಸ್ಥಳಕ್ಕೆ ಕರೆ ತಂದಿದೆ. ಇನ್ನೂ ಗಡ್ಡೆಯಲ್ಲಿ 350ಕ್ಕೂ ಹೆಚ್ಚು ಜನರಿರುವ ಕುರಿತು ಮಾಹಿತಿ ಇದ್ದು, ಅವರ ರಕ್ಷಣೆಗೆ ಧಾರವಾಡದಿಂದ NDRF ತಂಡ ಆಗಮಿಸಲಿದೆ. ರಕ್ಷಣಾ ತಂಡ ಬಂದ ಬಳಿಕ ಉಳಿದವರನ್ನು ರಕ್ಷಣೆ ಮಾಡುವುದಾಗಿ ಎಸಿ ಸಿ.ಡಿ ಗೀತಾ ಅವರು ‘ಉದಯವಾಣಿ’ಗೆ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್
BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ
Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ
Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ
Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ