ಬಾಲಕೃಷ್ಣರ ಸಿನಿಮಾ ಚಿತ್ರೀಕರಣಕ್ಕಾಗಿ ಲೋಕೇಶನ್ ವೀಕ್ಷಣೆ
Team Udayavani, Feb 9, 2021, 7:24 PM IST
ಗಂಗಾವತಿ: ತೆಲುಗು ಚಿತ್ರರಂಗದ ಖ್ಯಾತ ನಟ ಬಾಲಕೃಷ್ಣ ಅವರು ಅಭಿನಯದ ಸಿನಿಮಾದ ಚಿತ್ರೀಕರಣ ಮಾಡಲು ತಾಲೂಕಿನ ಗೂಗಿಬಂಡಿ, ದೇವಘಾಟ, ಕಡೆಬಾಗಲು, ಹನುಮಮಹಳ್ಳಿ, ಸಾಣಾಪೂರ ಕೆರೆ, ವಿರೂಪಾಪೂರಗಡ್ಡಿ ಹಾಗೂ ನಾರಾಯಣಪೇಟೆ ಗ್ರಾಮಗಳ ಹತ್ತಿರದ ಸ್ಥಳಗಳನ್ನು ನಿರ್ದೇಶಕ ಬೋಯಪಾಟೀ ಶ್ರೀನಿವಾಸ ಪರಿಶೀಲಿಸಿದರು.
ನಿರ್ದೇಶಕ ಬೋಯಪಾಟೀ ಶ್ರೀನಿವಾಸ ಅವರು ತೆಲುಗು ಭಾಷೆಯ ಲೆಜೆಂಡ್, ಸಿಂಹ, ಸರೈನಾಡು, ವಿನಯವಿಧೇಯರಾಮಾ ಸೇರಿ ಹಲವು ಚಿತ್ರಗಳನ್ನು ನಿರ್ದೇಶನ ಮಾಡಿದ್ದಾರೆ. ಇನ್ನೂ ನಾಮಕರಣ ಮಾಡದ ಬಾಲಕೃಷ್ಣ ಅಭಿನಯದ ಚಿತ್ರವನ್ನು ಈಗಾಗಲೇ ಆಂಧ್ರಪ್ರದೇಶ, ತಮಿಳುನಾಡು, ತೆಲಂಗಾಣ ರಾಜ್ಯಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಉಳಿದ ಭಾಗವನ್ನು ಸಂಡೂರು, ಹಂಪಿ, ಕಿಷ್ಕಿಂದಾ, ಅಂಜನಾದ್ರಿ ಬೆಟ್ಟ ಪ್ರದೇಶ ಹಾಗೂ ತುಂಗಭದ್ರಾ ನದಿಯ ದಡದಲ್ಲಿರುವ ಸುಂದರ ತಾಣಗಳಲ್ಲಿ ಚಿತ್ರೀಕರಣ ಮಾಡಲು ಯೋಜಿಸಲಾಗಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ :ಭಾಷೆ ಬೆಳೆಸುವಲ್ಲಿ ಕಸಾಪ ಪಾತ್ರ ಮಹತ್ವದು
ಈಗಾಗಲೇ ತೆಲುಗಿನ ಶ್ರೀಆಂಜನೇಯ, ಪೂರ್ಣಿಮಾ ಹಾಗೂ ಕನ್ನಡದ ರಣವಿಕ್ರಂ, ಜೇಮ್ಸ್ ಸೇರಿ ಹಲವು ಚಿತ್ರಗಳು ತಾಲೂಕಿನ ಆನೆಗೊಂದಿ ಪ್ರದೇಶದಲ್ಲಿ ಚಿತ್ರೀಕರಣ ಮಾಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು
MUST WATCH
ಹೊಸ ಸೇರ್ಪಡೆ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್