ರಾಷ್ಟ್ರೀಯ ಪೆಂಕಾಕ್ ಸೀಲತ್ ಚಾಂಪಿಯನ್ ಷಿಪ್ ನಲ್ಲಿ ಮಿಂಚಿದ ರಾಜ್ಯದ ಸ್ಪರ್ಧಿಗಳು
Team Udayavani, Dec 29, 2021, 4:10 PM IST
ಕುಷ್ಟಗಿ: ಹರಿಯಾಣದ ರೋಹತಕ್ ನ ಮಹರ್ಷಿ ದಯಾನಂದ ವಿಶ್ವ ವಿದ್ಯಾಲಯದಲ್ಲಿ ನಡೆದ ರಾಷ್ಟ್ರೀಯ ಪೆಂಕಾಕ್ ಸೀಲತ್ ಚಾಂಪಿಯನ್ ಷಿಪ್ ನಲ್ಲಿ ರಾಜ್ಯದ ಸ್ಪರ್ಧಿಗಳು ಮಿಂಚಿದ್ದಾರೆ.
ಡಿಸೆಂಬರ್ 23ರಿಂದ 27ರವರೆಗೆ ನಡೆದ ಕ್ರೀಡಾಕೂಟದಲ್ಲಿ 32 ರಾಜ್ಯದ 1200 ಕ್ರೀಡಾಪಟುಗಳು ಭಾಗವಹಿಸಿದ್ದರು. ರಾಜ್ಯದ ಬೆಳಗಾವಿ, ಚಿಕ್ಕಮಗಳೂರು, ಕೊಪ್ಪಳ, ಮೈಸೂರು, ಬೆಂಗಳೂರು ಹಾಗೂ ರಾಯಚೂರು ಜಿಲ್ಲೆಗಳ 26 ಬಾಲಕಿಯರು, 43 ಬಾಲಕರು ಸೇರಿದಂತೆ 70 ಕ್ರೀಡಾಪಟುಗಳು ಭಾಗವಹಿಸಿದ್ದರು. ತೀವ್ರ ಹಣಾಹಣಿಯಲ್ಲಿ ಕರ್ನಾಟಕ ರಾಜ್ಯದ ಕ್ರೀಡಾಪಟುಗಳು 7 ಚಿನ್ನದ ಪದಕ, 10 ಬೆಳ್ಳಿ ಪದಕ, 13 ಕಂಚಿನ ಪದಕ ಪಡೆದು ಸಾಧನೆ ಮೆರೆದಿದ್ದಾರೆ.
ಬಾಲಕಿಯರ ವಿಭಾಗ: ಕೊಪ್ಪಳ ಜಿಲ್ಲೆಯ ರೇಣುಕಾ ವಡ್ಡರ್ (ಚಿನ್ನದ ಪದಕ) ನಿಸರ್ಗ ವಡ್ಡರ್ (ಕಂಚಿನ ಪದಕ), ಬೆಂಗಳೂರಿನ ಸಮೀಕ್ಷಾ ರಡ್ಡಿ (ಚಿನ್ನದ ಪದಕ), ಶ್ರೀ ವಿದ್ಯಾ ಹಾಗೂ ಶಿವಾನಿಬಾಯಿ (ಬೆಳ್ಳಿ ಪದಕ) ಕೀರ್ತನಾ (ಕಂಚಿನ ಪದಕ) ಹಾಗೂ ರಾಯಚೂರು ಜಿಲ್ಲೆಯ ಕಾಜಿ ತುಬಾ ಅನುಂ ಹಾಗೂ ಕಾವ್ಯಾಂಜಲಿ (ಬೆಳ್ಳಿ ಪದಕ), ಬೆಳಗಾವಿ ಜಿಲ್ಲೆಯ ರೇಣುಕಾ ತರಲೆ ಹಾಗೂ ಚಿಕಮಗಳೂರು ಜಿಲ್ಲೆಯ ನಿಶೆಲ್ ಡಿಸೋಜಾ (ಚಿನ್ನದ ಪದಕ) ರಿಯಾನ್ ಲೇವಿಸ್ (ಬೆಳ್ಳಿ ಪದಕ) ಶೋಭಾ, ವಿನ್ನೀಶಾ ಹಾಗೂ ಮೈಸೂರು ಜಿಲ್ಲೆಯ ಯಾಧವಿ (ಬೆಳ್ಳಿ ಪದಕ) ಶ್ರಧ್ಧಾ (ಕಂಚಿನ ಪದಕ)
ಬಾಲಕರ ವಿಭಾಗ: ಕೊಪ್ಪಳ ಜಿಲ್ಲೆಯ ಸೃಜನ್ ಅಂಗಡಿ, ಸಂಜಯ್ (ಚಿನ್ನದ ಪದಕ), ಸಾಕೇತ್ ಆಲಂಪಲ್ಲಿ ಹಾಗೂ ಆದಿತ್ಯ ಕೊತ್ವಾಲ್ (ಕಂಚಿನ ಪದಕ) ಕಾರ್ಯದರ್ಶಿ ಹಾಗೂ ಸಾನ್ವಿಕ್ (ಬೆಳ್ಳಿ ಪದಕ) ಚಿಕಮಗಳೂರು ಜಿಲ್ಲೆಯ ಮನೋಜ್ ಅರಸ್, ಅಮಾನ್ ಶ್ರೀವಾಸ್ತ ಹಾಗೂ ನಿಹಾಲ್ (ಚಿನ್ನದ ಪದಕ), ಕುಶಾಲ್ ಜ್ಞಾನದೀಪ (ಕಂಚಿನ ಪದಕ) ಮೈಸೂರು ಜಿಲ್ಲೆಯ ಹರ್ಷನ್ ಕಂಚಿನ ಪದಕ ಪಡೆದಿದ್ದಾರೆ.
ರಾಜ್ಯ ತಂಡದ ತರಭೇತುದಾರ, ತಾಂತ್ರಿಕ ನಿರ್ದೇಶಕ ಜಗದಶೀಧ ಎಸ್. ಪಿ ತಿಳಿಸಿದ್ದಾರೆ. ರಾಜ್ಯ ಪೆಂಕಾಕ್ ಸೀಲತ್ ಸಂಸ್ಥೆಯ ಅಧ್ಯಕ್ಷ ಜಗನ್ನಾಥ ಆಲಂಪಲ್ಲಿ, ಕಾರ್ಯದ ವಿಜಯಕುಮಾರ ಹಂಚಿನಾಳ, ಖಜಾಂಚಿ ಅಬ್ದುಲ್ ರಝಾಕ್ ಟೇಲರ್ ಎಲ್ಲಾ ಕ್ರೀಡಾಪಟುಗಳಿಗೆ ಅಭಿನಂದಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Koppala; ಬಿಜೆಪಿಯಲ್ಲಿ ಸೌಜನ್ಯತೆ ಇಲ್ಲವೆನಿಸಿ ಕಾಂಗ್ರೆಸ್ ಸೇರಿದೆ: ಸಂಗಣ್ಣ ಕರಡಿ
Janardhan Reddy; ಸಿದ್ದರಾಮಯ್ಯ ಮೈಸೂರಲ್ಲಿ ಭಿಕ್ಷೆ ಬೇಡುತ್ತಿದ್ದಾರೆ
Lok Sabha ಚುನಾವಣೆಯಲ್ಲಿ ಕಾಂಗ್ರೆಸ್ ಎರಡಂಕಿ ಸ್ಥಾನ ಗೆಲ್ಲಲ್ಲ: ಶ್ರೀರಾಮುಲು
Congress ಪ್ರಧಾನಿ ಅಭ್ಯರ್ಥಿ ಯಾರು ಹೇಳಿ ನೋಡೋಣ: ಯಡಿಯೂರಪ್ಪ
Karadi Sanganna: ಬಿಜೆಪಿ ಗೆ ಗುಡ್ ಬೈ ಹೇಳಿ ಕಾಂಗ್ರೆಸ್ ಸೇರ್ಪಡೆಗೊಂಡ ಸಂಗಣ್ಣ ಕರಡಿ
MUST WATCH
ಹೊಸ ಸೇರ್ಪಡೆ
Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು
Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್
UV Fusion: ಭಕ್ತಿಯ ಜಾತ್ರೆ ನೋಡುವುದೇ ಚೆಂದ
Lok Sabha 1 Phase: ನಿತಿನ್ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…
Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ