ಕೆರೆ ಅಭಿವೃದ್ಧಿ ಪರಿಶೀಲಿಸಲು ಕೊಪ್ಪಳಕ್ಕೆ ಖುದ್ದು ಭೇಟಿ: ಸಚಿವ ಮಾಧುಸ್ವಾಮಿ
Team Udayavani, Dec 22, 2022, 7:50 PM IST
ಸುವರ್ಣ ವಿಧಾನಸೌಧ: ಕೊಪ್ಪಳ ಜಿಲ್ಲೆಯಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ ನಡೆಯುತ್ತಿರುವ 122 ಕೆರೆಗಳ ಅಭಿವೃದ್ಧಿ ಕಾಮಗಾರಿಗಳನ್ನು ಖುದ್ದು ಭೇಟಿಕೊಟ್ಟು ಪರಿಶೀಲನೆ ನಡೆಸಲಾಗವುದು ಎಂದು ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.
ಗುರುವಾರ ವಿಧಾನ ಪರಿಷತ್ತಿನಲ್ಲಿ ಪ್ರಶ್ನೋತ್ತರ ವೇಳೆ ಸದಸ್ಯೆ ಹೇಮಲತಾ ನಾಯಕ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಕೊಪ್ಪಳ ಜಿಲ್ಲೆಯಲ್ಲಿ 122 ಕೆರೆಗಳು ಮತ್ತು 39 ಕೆರೆಗಳನ್ನು ಏತ ನೀರಾವರಿ ಮೂಲಕ ತುಂಬಿಸಲು ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಆದರಲ್ಲೂ ಬಳೂಟಗಿ ಕೆರೆಗೆ ಒಂದು ಕೋಟಿ ರೂ. ಮತ್ತು ತಳಕಲ್ ಕೆರೆಗೆ 65 ಲಕ್ಷ ರೂ. ಕಾಮಗಾರಿ ಇನ್ನೇನು ಅರಂಭವಾಗಲಿದೆ. ಜಿಲ್ಲೆಯಲ್ಲಿನ ಚೆಕ್ ಡ್ಯಾಂಗಳ ಆಭಿವೃದ್ಧಿಗೆ 6.42 ಕೋಟಿ ರೂ. ಅನುದಾನ ವಿನಿಯೋಗಿಸಲಾಗಿದೆ ಎಂದರು.
ಸದಸ್ಯೆ ಹೇಮಲತಾ ನಾಯಕ ಅವರು, ಸಚಿವರು ಖುದ್ದು ಭೇಟಿಕೊಟ್ಟು ಪರಿಶಿಲನೆ ನಡೆಸುವುದು ಸೂಕ್ತ. ಅಲ್ಲಿ ತಾವು ಹೇಳಿದಂತೆ ಕಾಮಗಾರಿಗಳು ಅಚ್ಚುಕಟ್ಟಾಗಿ ನಡೆದಿಲ್ಲ ಎಂದು. ಆದಕ್ಕೆ ಉತ್ತರಿಸಿದ ಸಚಿವರು, ಸದನ ಮುಗಿದ ಮೇಲೆ ಖುದ್ದು ಭೇಟಿಕೊಟ್ಟು ಪರಿಶೀಲನೆ ನಡೆಸುವುದಾಗಿ ಹೇಳಿದರು.