ಹುಳು ಬಾಧೆ ನಿಯಂತ್ರಣಕೆ ಮೋಹಕ ಬಲೆ
Team Udayavani, Aug 3, 2020, 1:00 PM IST
ಕುಷ್ಟಗಿ: ಮೆಕ್ಕೆಜೋಳ ಬೆಳೆಯಲ್ಲಿ ಹುಸಿ ಸೈನಿಕ ಹುಳುವಿನ ಬಾಧೆ ನಿಯಂತ್ರಿಸಲು ಲಿಂಗಾಕರ್ಷಕ ಮೋಹಕ ಬಲೆಗಳನ್ನು ಪ್ರಾಯೋಗಿಕವಾಗಿ ಅಳವಡಿಸಲಾಯಿತು.
ಕೃಷಿ ಅಧಿಕಾರಿ ರಾಘವೇಂದ್ರ ಕೊಂಡಗುರಿ ಅವರು ಮಾತನಾಡಿ, ರೈತ ಚನ್ನಬಸಪ್ಪ ನಾಯಕವಾಡಿ ಅವರ 20 ದಿನ ಮೆಕ್ಕೆಜೋಳದ ಬೆಳೆಗೆ ಹುಸಿ ಸೈನಿಕ ಹುಳುವಿನ ಬಾಧೆ ಕಾಣಿಸಿಕೊಂಡಿದೆ. ಕೀಟಬಾಧೆ ನಿಯಂತ್ರಿಸಲು ಗಂಡು ಪತಂಗ ಆಕರ್ಷಿಸಲು ಎಕರೆಗೆ 5 ರಿಂದ 6 ಲಿಂಗಾಕರ್ಷಕ ಮೋಹಕ ಬಲೆ ಅಳವಡಿಸಿದರೆ ಆಕರ್ಷಿತಗೊಂಡು ತಕ್ಷಣ ಸಾಯುತ್ತವೆ. ಹೀಗಾಗಿ ಗಂಡು ಪತಂಗಗಳ ಸಂಖ್ಯೆ ಕ್ಷೀಣಿಸುತ್ತದೆ. ಪ್ರತಿ ಹೆಣ್ಣು ಪತಂಗ 1500ರಿಂದ 2000 ಮೊಟ್ಟೆ ಇಡುತ್ತಿದ್ದು, ಈ ಮೊಟ್ಟೆಯಿಂದ ಬರುವ ಮರಿಹುಳಗಳನ್ನು ತಪ್ಪಿಸಬಹುದಾಗಿದೆ ಎಂದರು.
ರೈತ ಸಂಕರ್ಪ ಕೇಂದ್ರದಲ್ಲಿ ಮೋಹಕ ಬೆಲೆ ಕಡಿಮೆ ಬೆಲೆಗೆ ಲಭ್ಯವಿದ್ದು ರೈತರು ಖರೀದಿ ಸಿ, ಈ ಕೀಟ ಬಾಧೆ ನಿಯಂತ್ರಿಸಬಹುದು ಎಂದರು. ಕೃಷಿ ಅಧಿಕಾರಿಗಳಾದ ಶೇಖರಯ್ಯ ಹಿರೇಮಠ, ಬಾಲಪ್ಪ ಜಲಗೇರಿ, ಆತ್ಮ ಯೋಜನೆ ತಾಲೂಕು ತಾಂತ್ರಿಕ ವ್ಯವಸ್ಥಾಪಕ ಬಸವರಾಜ ಪಾಟೀಲ ಇದ್ದರು.