ನದಿ, ಕೆರೆಕಟ್ಟೆ ಸುತ್ತಲೂ ನೆಡುತೋಪು ಬೆಳೆಸುವ ರೋಟರಿ ಇಚ್ಛಾಶಕ್ತಿ ಶ್ಲಾಘನೀಯ
Team Udayavani, Aug 20, 2021, 10:58 AM IST
ಗಂಗಾವತಿ: ನದಿ ಕೆರೆ ಕಟ್ಟೆ ಹಳ್ಳ ಕೊಳ್ಳ ಸುತ್ತಲೂ ಡಿಸೈನರ್ ಸೂರಜ್ ಗೆ ನೆಡುತೋಪು ಬೆಳೆಸುವ ರೋಟರಿ ಕ್ಲಬ್ ನ ಕಾರ್ಯ ಶ್ಲಾಘನೀಯ ಎಂದು ಮಾಜಿ ಸಂಸದ ಶಿವರಾಮಗೌಡ ಹೇಳಿದರು.
ಅವರು ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ನಿಮಿತ್ತ ರೋಟರಿ ಕ್ಲಬ್ ಸೆಂಟ್ರಲ್ ವತಿಯಿಂದ ತಾಲ್ಲೂಕಿನ ಕೋಟಯ್ಯಕ್ಯಾಂಪ್ ನ ಕುಡಿಯುವ ನೀರಿನ ಕೆರೆ ಸುತ್ತಲೂ ಸಾರ್ವತ್ರಿಕ ನೆಡುತೋಪು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ನೈಸರ್ಗಿಕ ಸಂಪತ್ತು ಕಾಪಾಡುವುದು ಅವಶ್ಯವಾಗಿದೆ. ನೈಸರ್ಗಿಕವಾಗಿರುವ ಗಿಡ-ಮರ,ಗುಡ್ಡ-ಬೆಟ್ಟ,ನೀರು-ಗಾಳಿ ಇವುಗಳನ್ನು ಕಾಪಾಡುವುದು ಅವಶ್ಯಕತೆಯಿದೆ. ಗಿಡ ಮರಗಳಿಂದ ಶುದ್ದ ಗಾಳಿ, ಮಳೆ-ಬೆಳೆ ಪ್ರಾಕೃತಿಕ ಆಮ್ಲಜನಕ ಉತ್ಪತ್ತಿ ಆಗಿ ನಮಗೆಲ್ಲಾ ತುಂಬಾ ಉಪಯುಕ್ತವಾಗಿದೆ. ಕಾರಣ ಎಲ್ಲರೂ ಪ್ರಕೃತಿಯ ಆರಾಧಕರಾಗಬೇಕು. ನೈಸರ್ಗಿಕ ಸಂಪತ್ತು ಹಾಳು ಮಾಡದೇ ಕಾಪಾಡುವ ಅವಶ್ಯಕತೆ ಇದೆ ಎಂದರು.
ರೋಟರಿ ಸಂಸ್ಥೆಯ ಅಧ್ಯಕ್ಷ ಮಹೇಶ ಸಾಗರ ಮಾತನಾಡಿ ರೋಟರಿ ಸಂಸ್ಥೆಯು ಸಾಮಾಜಿಕ ಶೈಕ್ಷಣಿಕ ಮತ್ತು ಆರೋಗ್ಯ ಸೇವೆ ನೀಡುತ್ತಿದೆ. ಪರಿಸರ ಕಾಳಜಿ ಗ್ರಾಮೀಣ ಭಾಗದಲ್ಲಿ ರೋಟರಿ ತನ್ನ ಸೇವೆ ವಿಸ್ತರಿಸಿದ್ಧು ಕೋಟಯ್ಯ ಕ್ಯಾಂಪಿನ 8 ಎಕರೆ ಪ್ರದೇಶದ ಕುಡಿಯುವ ನೀರಿನ ಕೆರೆ ದಂಡೆ ಆವರಣದಲ್ಲಿ ಗಿಡ ಮರ ನೆಡುವುದರ ಜೊತೆಗೆ ರೈತರಿಗೆ ಸಸಿ ವಿತರಣೆ ಮಾಡಿ ಹಸಿರು ಹಬ್ಬ ಕಾರ್ಯಕ್ರಮ ಏರ್ಪಡಿಸಿ ರೋಟರಿ ಪರಿಸರ ಕಾಳಜಿ ಮಾಡುತ್ತಿದೆ ಎಂದರು.
ಗ್ರಾಮದ ಮುಖಂಡರಾದ ನೆಕ್ಕಂಟಿ ರಾಮಕೃಷ್ಣ, ರೋಟರಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ಅಜಿತ್ ರಾಜ ಸುರಾನ ಮತ್ತು ಗ್ರಾ. ಪಂ. ಅಧ್ಯಕ್ಷ, ಉಪಾಧ್ಯಕ್ಷರು, ಸದಸ್ಯರು,ಪಿ ಡಿ ಓ ಹಾಗೂ ರೋಟರಿಯ ಪಧಾಧಿಕಾರಿಗಳಾದ ಟಿ. ಆಂಜನೇಯ, ವಾಸು ಕೊಳಗದ, ಜೆ ನಾಗರಾಜ, ಪ್ರಕಾಶ ಛೋಪ್ರ, ದೊಡ್ಡಯ್ಯ, ಉಗಮರಾಜ, ನಾಗರಾಜ ಗುತ್ತೇದಾರ, ಗುರುರಾಜ, ಸದಾನಂದ ಶೇಠ್, ಸುರೇಶ, ಅಶೋಕ, ಶ್ರೀನಿವಾಸ, ಗಂಗಾಧರ, ಸೋಮಶೇಖರ, ವೆಂಕಟೇಶ, ಬಸವರಾಜ, ರುದ್ರಗೌಡ್ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗಂಗಾವತಿ: ನೇಮಕಾತಿ ಪರೀಕ್ಷೆಗೆ ವೆಬ್ ಕಾಸ್ಟಿಂಗ್ ಜಾರಿಯಾಗಲಿ
Dr.G. Parameshwara ಅವರ ಜಾತಿ ನಿಂದನೆ; ಬೀದರ್ ವ್ಯಕ್ತಿ ವಿರುದ್ಧ ಕೇಸ್
Rain; ಬೀದರ್,ಕೊಪ್ಪಳದಲ್ಲಿ ಸಿಡಿಲಿನ ಆರ್ಭಟಕ್ಕೆ ಇಬ್ಬರು ಮೃತ್ಯು
Neha Hiremath Case; ಬಿಜೆಪಿ-ಜೆಡಿಎಸ್-ಎಬಿವಿಪಿಯಿಂದ ರಾಜ್ಯದೆಲ್ಲೆಡೆ ಪ್ರತಿಭಟನೆ
Gangavathi; ಪರಾರಿಯಾಯ್ತು ಮೇಕೆ ಹಿಡಿಯಲು ಬಂದು ಸೆರೆಯಾಗಿದ್ದ ಚಿರತೆ
MUST WATCH
ಹೊಸ ಸೇರ್ಪಡೆ
90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ
ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್ ಶೆಟ್ಟಿ ಬೆಳ್ಳಾರೆ
ಮೂಡುಬೆಳ್ಳೆ ಶ್ರೀಮಹಾಲಿಂಗೇಶ್ವರ, ಶ್ರೀ ಮಹಾಗಣಪತಿ, ಶ್ರೀ ಸೂರ್ಯನಾರಾಯಣ ದೇಗುಲ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
LS Polls: ರಾಜ್ಯದ ಜನರಿಗೆ ಈಶ್ವರಪ್ಪ ಸ್ಪರ್ಧೆ ವಿಷಯ ಈಗ ಖಚಿತ: ಈಶ್ವರಪ್ಪ