ಉದಯವಾಣಿ ವರದಿಗೆ ಸ್ಪಂದನೆ: ಅಂಧ ಸಹೋದರಿಯರನ್ನು ಕರೆಸಿ ಕುಶಲೋಪರಿ ವಿಚಾರಿಸಿದ ಪವರ್ ಸ್ಟಾರ್
Team Udayavani, Oct 20, 2020, 6:23 PM IST
ಗಂಗಾವತಿ: ಡಾ.ರಾಜಕುಮಾರ್ ಹಾಗೂ ಕುಟುಂಬದ ಅಭಿಮಾನಿಗಳಾಗಿರುವ ತಾಲೂಕಿನ ಮಲ್ಲಾಪೂರ ಗ್ರಾಮದ ನಾಲ್ವರು ಅಂಧ ಸಹೋದರಿಯರನ್ನು ‘ಜೇಮ್ಸ್ ಸಿನೆಮಾ’ ಶೂಟಿಂಗ್ ಸೆಟ್ ಗೆ ಕರೆಯಿಸಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕುಶಲೋಪರಿ ವಿಚಾರಿಸಿದ್ದಾರೆ.
‘ಪವರ್ ಸ್ಟಾರ್ ಆಗಮನದ ನಿರೀಕ್ಷೆಯಲ್ಲಿ ಅಂಧಸಹೋದರಿಯರು’ ಎನ್ನುವ ಉದಯವಾಣಿ ವೆಬ್ ವರದಿಗೆ ಸ್ಪಂದನೆ ನೀಡಿದ ಅಪ್ಪು ಸ್ವತಃ ತಮ್ಮ ಕಾರನ್ನು ಕಳುಹಿಸಿ ಅಂಧ ಸಹೋದರಿಯರನ್ನು ಶೂಟಿಂಗ್ ಸ್ಥಳಕ್ಕೆ ಕರೆಯಿಸಿದ್ದಾರೆ. ಮಾತ್ರವಲ್ಲದೆ ಅರ್ಧ ಗಂಟೆಗೂ ಹೆಚ್ಚು ಕಾಲ ಅಂಧ ಸಹೋದರಿಯರಾದ ರೇಣುಕಾ, ಶಾಂತಮ್ಮ, ಬೆಳ್ಳೇಶ್ವರಿ ಹಾಗೂ ಪ್ರಮೀಳಾ ಇವರ ಜತೆ ಮಾತುಕತೆ ನಡೆಸಿ, ಊಟ ಮಾಡಿಸಿ ತಮ್ಮ ಕುಟುಂಬದ ಬಗ್ಗೆ ಇಟ್ಟಿರುವ ಅಭಿಮಾನಕ್ಕೆ ಅಭಿನಂದನೆಗಳನ್ನು ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಹೊಸಪೇಟೆಯ ಅಂಗವಿಕಲ ಸಂಘದವರು ಪುನೀತ್ ರಾಜಕುಮಾರ್ ಅವರನ್ನು ಸನ್ಮಾನಿಸಿ ತ್ರಿಚಕ್ರ ಬೈಕ್ ಕೊಡಿಸುವಂತೆ ಮನವಿ ಮಾಡಿದರು.
ಇದನ್ನೂ ಓದಿ: ಕೋವಿಡ್ 19: ಮೈಮರೆಯಬೇಡಿ…ಲಾಕ್ ಡೌನ್ ತೆರವುಗೊಂಡಿದೆ, ವೈರಸ್ ಇನ್ನೂ ಇದೆ: ಮೋದಿ
ರಾಜಕುಮಾರ್ ಕುಟುಂಬದ ಅಭಿಮಾನಿಗಳಾದ ಅಂಧ ಸಹೋದರಿಯರ ಭೇಟಿಯಾಗುವ ಕನಸು ನನಸು ಮಾಡುವರೇ ಪುನೀತ್ ರಾಜಕುಮಾರ್ ಎಂಬ ಶಿರೋನಾಮೆಯಡಿ ಉದಯವಾಣಿ ಪತ್ರಿಕೆಯಲ್ಲೂ ವರದಿ ಪ್ರಕಟವಾಗಿತ್ತು.