ಅಪ್ಪಟ ಅಭಿಮಾನಿ: ಪತ್ನಿ, ಐವರು ಮಕ್ಕಳೊಂದಿಗೆ ಅಪ್ಪು ಸ್ಮಾರಕಕ್ಕೆ ಪಾದಯಾತ್ರೆ ಹೊರಟ ವಕೀಲ
Team Udayavani, Mar 2, 2022, 2:58 PM IST
ಕುಷ್ಟಗಿ: ಪುನೀತ್ ರಾಜಕುಮಾರ್ ಅವರ ಅಪ್ಪಟ ಅಭಿಮಾನಿ ವಿಜಯಪುರದ ವಕೀಲರೊಬ್ಬರು ಪತ್ನಿ ಸೇರಿದಂತೆ ಐವರು ಮಕ್ಕಳೊಂದಿಗೆ ವಿಜಯಪುರದಿಂದ ಬೆಂಗಳೂರು ಅಪ್ಪು ಸ್ಮಾರಕಕ್ಕೆ ಪಾದಯಾತ್ರೆ ಕೈಗೊಂಡಿರುವುದು ಗಮನಾರ್ಹ ಎನಿಸಿದೆ.
ವಕೀಲ ವೃತ್ತಿಯಲ್ಲಿರುವ ಧರೆಯಪ್ಪ ಅರ್ದಾವೂರ ತಮ್ಮ ಸಂಸಾರ ಸಮೇತ ಕಳೆದ ಫೆ.25ರಿಂದ ವಿಜಯಪುರದಿಂದ ಬೆಂಗಳೂರಿಗೆ ಪಾದಯಾತ್ರೆ ಆರಂಭಿಸಿದ್ದಾರೆ. ಈಗಾಗಲೇ ಐದು ದಿನ ಕ್ರಮಿಸಿದ್ದು, ಬೇಸಿಗೆ ಬಿಸಿಲ ತಾಪಮಾನದ ಹಿನ್ನೆಲೆಯಲ್ಲಿ ಆದಷ್ಟು ಬೆಳಗ್ಗೆ, ಸಂಜೆ ಪಾದಯಾತ್ರೆ ನಡೆಯುತ್ತಿದ್ದಾರೆ ಪ್ರತಿ ದಿನ 25ಕಿ.ಮೀ ದಿಂದ 30 ಕಿ.ಮೀ. ನಿಗದಿಗೊಳಿಸಿದ್ದಾರೆ. ಬುಧವಾರ ಬೆಳಗ್ಗೆ ಕುಷ್ಟಗಿಯ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಮಾರ್ಗವಾಗಿ ಹೋಗುವಾಗ ಅಪ್ಪು ಅಭಿಮಾನಿಗಳು ಪಾದಯಾತ್ರಿಗಳನ್ನು ಸನ್ಮಾನಿಸಿ, ಹಣ್ಣು, ಎಳೆನೀರು ನೀಡಿ ಸತ್ಕರಿಸಿದರು. ನಂತರ ಅವರೊಂದಿಗೆ ಸಂಗೊಳ್ಳಿ ರಾಯಣ್ಣ ಯುವ ಸೇನೆಯ ಮಂಜು ನಾಲಗಾರ, ದೊಡ್ಮನೆ ಅಭಿಮಾನಿ ಬಳಗದ ಅಧ್ಯಕ್ಷ ಮುತ್ತಣ್ಣ ಬಾಚಲಾಪೂರ, ಅಪ್ಪು ಅಭಿಮಾನಿ ಸಂಘದ ಶಂಕರ್ ಮಿಸ್ಕೀನ್, ಪ್ರಮೋದ್ ಬಡಿಗೇರ, ಅಮರೇಶ ತಳವಗೇರಾ ಮೊದಲಾದವರು ಹೆಜ್ಜೆ ಹಾಕಿ ಪ್ರೋತ್ಸಾಹಿಸಿದರು.
ಇದೇ ವೇಳೆ ಮಾತನಾಡಿದ ಪಾದಯಾತ್ರಿ ಧರಿಯಪ್ಪ ಅರ್ದಾವೂರ ನಮ್ಮ ನೆಚ್ಚಿನ ಕಣ್ಮಣಿ ಪುನೀತ್ ರಾಜಕುಮಾರ್ ಅವರು 46ನೇ ವರ್ಷದಲ್ಲಿ ಇಹಲೋಕ ತ್ಯಜಿಸಿರುವುದು ನಮಗೆ ನೋವುಂಟು ಮಾಡಿದೆ. ಅಪ್ಪು ಅವರು ಮಾಡಿರುವ ಸಮಾಜಮುಖಿ ಸೇವೆಯನ್ನು ಸ್ಮರಿಸಿದ ಅವರು ಸರ್ಕಾರಿ ಶಾಲೆಗಳ ಸಬಲೀಕರಣ, ನೇತ್ರದಾನ, ಮೃತ ನಂತರ ಅಂಗಾಂಗ ದಾನದ ಮಹತ್ವ ಹಾಗೂ ಮಾರ್ಚ 17 ರಂದು ಬಿಡುಗಡೆಯಾಗುವ ಜೇಮ್ಸ್ ಚಲನ ಚಿತ್ರ ಶುಭ ಹಾರೈಸಿ ಈ ಪಾದಯಾತ್ರೆ ಕೈಗೊಂಡಿದ್ದು ಸಾಧ್ಯವಾದಷ್ಟು ಮಾ.17 ಕ್ಕೆ ಬೆಂಗಳೂರು ತಲುಪುವ ಉದ್ದೇಶವಿದೆ. ನನ್ನೊಂದಿಗೆ ಪತ್ನಿ ವಿದ್ಯಾರಾಣಿ ಮಕ್ಕಳಾದ ಲಕ್ಷ್ಮೀಕಾಂತ, ಸಮರ್ಥ, ಸೌಜನ್ಯ, ಸೋನಾಲಿ, ಶ್ರಾವಣಿ ಹೆಜ್ಜೆ ಹಾಕಿದ್ದು, ಗೆಳೆಯ ಸಾಬಣ್ಣ ಜೊತೆಗೆ ಇದ್ದಾರೆ.
ಅಪ್ಪು ಕೊಟ್ಟ ಆ… 11 ಸಾವಿರ:
ಕಳೆದ ನವೆಂಬರ್ 11, 2011ಕ್ಕೆ ಧರೆಯಪ್ಪ ಅರ್ದಾವೂರ ಹಾಗೂ ವಿದ್ಯಾರಾಣಿ ಮದುವೆಯಾಗಿ ಬೆಂಗಳೂರಿನ ಅಪ್ಪು ನಿವಾಸಕ್ಕೆ ಹೋಗಿದ್ದರು. ಆಗ ಅಪ್ಪು ಆತ್ಮೀಯವಾಗಿ ಮಾತನಾಡಿ ಕಾಣಿಕೆಯ ಪ್ಯಾಕ್ ನೀಡಿ ಅದನ್ನು ಇಲ್ಲಿ ತೆರೆಯಬೇಡಿ ನಿಮ್ಮ ಊರಲ್ಲಿ ತೆರೆಯಿರಿ ಎಂದು ಹೇಳಿದ್ದರು. ಆಗ ಅಪ್ಪು ಹೇಳಿದಂತೆ ಮಾಡಿದ್ದ ಧರೆಯಪ್ಪ ದಂಪತಿ ಕಾಣಿಕೆ ಪ್ಯಾಕ್ ಬಿಚ್ಚಿದಾಗ ಅಪ್ಪು ಅವರ ಭಾವಚಿತ್ರ ಹಾಗೂ 11 ಸಾವಿರ ರೂ.ಗಳಿದ್ದವು. ಆಗ ನಮ್ಮಿಬ್ಬರ ಕಣ್ಣಾಲೆಗಳು ನೀರಾಗಿದ್ದವು.
ಇಂತಹ ಮಾನವೀಯ ಮೌಲ್ಯವುಳ್ಳ ನಟ ನಮ್ಮಿಂದ ಅಗಲಿರುವುದು ನಮ್ಮ ಮನೆಯ ಸದಸ್ಯರನ್ನು ಕಳೆದುಕೊಂಡಷ್ಟು ದುಃಖವಾಗಿದೆ ಧರಿಯಪ್ಪ ಅರ್ದಾವೂರ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕೊಪ್ಪಳ: ಮಗ ರಾಜಶೇಖರ ವಿರುದ್ಧ ತಂದೆ ನಾಮಪತ್ರ ಸಲ್ಲಿಕೆ!
Kushtagi:ವಿದ್ಯುತ್ದೀಪದ ಕಂಬಗಳಿಗೆ ಬಲ್ಬ್ ಅಳವಡಿಸುವ ವೇಳೆ ಅವಘಡ; ಪುರಸಭೆ ಸಿಬ್ಬಂದಿಗೆ ಗಾಯ
Kushtagi: ನಿರೀಕ್ಷಿತ ಫಲಿತಾಂಶ ಬಾರದ ಹಿನ್ನೆಲೆ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ
Koppala; ಬಿಜೆಪಿಯಲ್ಲಿ ಸೌಜನ್ಯತೆ ಇಲ್ಲವೆನಿಸಿ ಕಾಂಗ್ರೆಸ್ ಸೇರಿದೆ: ಸಂಗಣ್ಣ ಕರಡಿ
Janardhan Reddy; ಸಿದ್ದರಾಮಯ್ಯ ಮೈಸೂರಲ್ಲಿ ಭಿಕ್ಷೆ ಬೇಡುತ್ತಿದ್ದಾರೆ