ಮಧ್ಯಾಹ್ನದ ಮಳೆ ತಂದ ಪಜೀತಿ: ಸೂರ್ಯಕಾಂತಿ ಚರಂಡಿ ಪಾಲು
Team Udayavani, Sep 5, 2022, 4:58 PM IST
ಕುಷ್ಟಗಿ: ಸ್ಥಳೀಯ ಎಪಿಎಂಸಿ ಮಾರುಕಟ್ಟೆಗೆ ತಂದು ಒಣಗಲು ಹಾಕಿದ್ದ ಸೂರ್ಯಕಾಂತಿ ಉತ್ಪನ್ನ ಏಕಾಏಕಿ ಮಳೆಗೆ ಚರಂಡಿ ಪಾಲಾದ ಪ್ರಸಂಗ ಸೋಮವಾರ ನಡೆದಿದೆ.
ಕುಷ್ಟಗಿ ಎಪಿಎಂಸಿ ಯಾರ್ಡ್ ನಲ್ಲಿ ಸೂರ್ಯಕಾಂತಿ ಉತ್ಪನ್ನವನ್ನು ರೈತರು ತಂದಿದ್ದರು. ರೈತರು ತಂದ ಉತ್ಪನ್ನ ತೇವಾಂಶದಿಂದ ಕೂಡಿದ್ದರಿಂದ ದಲ್ಲಾಳಿ ಅಂಗಡಿಯವರು ತೂಕ ಮಾಡಿರಲಿಲ್ಲ. ಅದೇ ವೇಳೆ ಪ್ರಖರ ಬಿಸಿಲು ವಾತವರಣದ ಹಿನ್ನೆಲೆಯಲ್ಲಿ ರೈತರು, ರಾಶಿ ಕಟ್ಟೆ, ಸಿಸಿ ರಸ್ತೆಯಲ್ಲಿ ಸೂರ್ಯಕಾಂತಿ ಉತ್ಪನ್ನವನ್ನು ಒಣಗಲು ಬಿಟ್ಟಿದ್ದರು.
ಮಧ್ಯಾಹ್ನ 3 ಗಂಟೆಯ ವೇಳೆ ಏಕಾಏಕಿ ಮಳೆ ಸುರಿದಿದ್ದು, ರೈತರ ಉತ್ಪನ್ನ ನೀರಿನ ಹರಿವಿನಿಂದ ಚರಂಡಿ ಸೇರಿದೆ. ಆದಾಗ್ಯೂ ರೈತರು ಚರಂಡಿಗೆ ಇಳಿದು ಸೂರ್ಯಕಾಂತಿ ಉತ್ಪನ್ನ ತುಂಬಿಕೊಳ್ಳುತ್ತಿರುವುದು ಕಂಡು ಬಂತು. ಶರಣಪ್ಪ ಚೂರಿ, ಕಂಠೆಪ್ಪ ಚೂರಿ, ದೇವಪ್ಪ ಕೊರಡಕೇರ, ಸಂಗವ್ವ ಮಾಟಲದಿನ್ನಿ, ಸಂಗಪ್ಪ ಈ ರೈತರ ನಾಲ್ಕೈದು ಚೀಲ ಸೂರ್ಯಕಾಂತಿ ಉತ್ಪನ್ನ ಚರಂಡಿ ಸೇರಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Raids: ಕೊಪ್ಪಳ ಕೃಷಿ ಇಲಾಖೆ ಉಪ ನಿರ್ದೇಶಕ ಸಹದೇವ ಯರಗುಪ್ಪಾ ಮನೆ ಮೇಲೆ ಲೋಕಾಯುಕ್ತ ದಾಳಿ
Koppala; ಶಿವರಾಜ ತಂಗಡಗಿ ಹೇಳಿಕೆಯನ್ನು ಬಿಜೆಪಿ ತಿರುಚಿದೆ: ಕೃಷ್ಣಾ ಇಟ್ಟಂಗಿ
Koppal Lok Sabha constituency; ಲಿಂಗಾಯತ, ಅಹಿಂದ ಮತಗಳೇ ಇಲ್ಲಿ ನಿರ್ಣಾಯಕ
Koppala: ಮೋದಿ ಮೋದಿ ಎಂದರೆ ಕಪಾಳಕ್ಕೆ ಹೊಡಿಯಿರಿ ಎಂದ ಸಚಿವ ತಂಗಡಗಿ ವಿರುದ್ಧ ಪ್ರಕರಣ ದಾಖಲು
“Modi ಜಪಿಸುವ ವಿದ್ಯಾರ್ಥಿಗಳ ಕಪಾಳಕ್ಕೆ ಹೊಡೆಯಿರಿ’: ಶಿವರಾಜ ತಂಗಡಗಿ
MUST WATCH
ಹೊಸ ಸೇರ್ಪಡೆ
Yathindra Siddaramaiah ಗೂಂಡಾ, ರೌಡಿ ಹೇಳಿಕೆ : EC ಗೆ ದೂರು ನೀಡಿದ ಬಿಜೆಪಿ
AAP ‘ಮಹಾರ್ಯಾಲಿ’ಯಲ್ಲಿ ಭಾಗಿಯಾಗಲಿರುವ ರಾಹುಲ್,ಖರ್ಗೆ,ಪವಾರ್, ಅಖಿಲೇಶ್
Lok Sabha Election: ಮಹಿಳೆ ಅಡುಗೆ ಮನೆಗಷ್ಟೇ ಸೀಮಿತವಲ್ಲ: ಗಾಯತ್ರಿ ಸಿದ್ದೇಶ್ವರ
Kannada Cinema; ಚಿತ್ರೀಕರಣ ಮುಗಿಸಿದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’
ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ್ ನಾಯ್ಕ ಸೋನಿ ?