ರಾಜಕಾಲುವೆಗೆ ಅತಿಕ್ರಮ ಕಾಂಪೌಂಡ್ ಗೋಡೆ ತೆರವುಗೊಳಿಸಲು ಮನವಿ
Team Udayavani, Nov 30, 2021, 2:40 PM IST
ಕುಷ್ಟಗಿ: ಪಟ್ಟಣದ ಬಸವೇಶ್ವರ ವೃತ್ತದ ಬಳಿ ರಾಜಕಾಲುವೆಗೆ ಅತಿಕ್ರಮ ಕಾಂಪೌಂಡ್ ಗೋಡೆ ತೆರವುಗೊಳಿಸಿ ಎರಡನೇ ವಾರ್ಡ ಸಂಪರ್ಕ ರಸ್ತೆ ಕಲ್ಪಿಸಬೇಕೆಂದು ಆಗ್ರಹಿಸಿ ವಾರ್ಡಿನ ಸದಸ್ಯರು ಪುರಸಭೆ ಅಧ್ಯಕ್ಷ ಗಂಗಾಧರಸ್ವಾಮಿ ಹಿರೇಮಠ, ಮುಖ್ಯಾಧಿಕಾರಿ ಉಮೇಶ ಕೆ. ಹಿರೇಮಠ ಅವರಿಗೆ ಮನವಿ ಸಲ್ಲಿಸಿದರು.
ರಾಷ್ಟ್ರೀಯ ಹೆದ್ದಾರಿ ಮಾರ್ಗವಾಗಿ ಪೊಲೀಸ್ ಇಲಾಖೆ, ತೊಟಗಾರಿಕೆ ಇಲಾಖೆ ಮದ್ಯೆ ಇರುವ ರಾಜಕಾಲುವೆಗೆ ಹೊಂದಿಕೊಂಡು ಕಾಂಪೌಂಡ್ ಗೋಡೆ ನಿರ್ಮಿಸಲಾಗಿದೆ. ರಾಜಕಾಲುವೆಯಲ್ಲಿ ಚರಂಡಿ ನೀರು ಸುಗಮವಾಗಿ ಹರಿಯಲು ಆಸ್ಪದ ಇಲ್ಲ. ಸದರಿ ಚರಂಡಿಯಲ್ಲಿ ತ್ಯಾಜ್ಯ ತುಂಬಿದ್ದು ದುರ್ವಾಸನೆಗೆ ಕಾರಣವಾಗಿದೆ.
ಈಗಾಗಲೇ ಬಂದ್ ಆಗಿರುವ ರಾಜಕಾಲುವೆ ವ್ಯವಸ್ಥಿತವಾಗಿ ಹರಿಯಲು ಹಾಗೂ ಅದರ ಮೇಲೆ ರಸ್ತೆ ನಿರ್ಮಿಸಿ 2 ನೇ ವಾರ್ಡಗೆ ಸಂಪರ್ಕ ರಸ್ತೆ ಕಲ್ಪಿಸಲು ಪುರಸಭೆ ಯೋಜಿಸಿದೆ. ಪೊಲೀಸ್ ಹಾಗೂ ತೋಟಗಾರಿಕೆ ಇಲಾಖೆ ಕಾಂಪೌಂಡ್ ಗೋಡೆ ತೆರವುಗೊಳಿಸದೇ ವ್ಯವಸ್ಥಿತ ರಾಜಕಾಲುವೆ ಹಾಗೂ ಸಂಪರ್ಕ ರಸ್ತೆ ಸಾದ್ಯವಿಲ್ಲ. ಈ ಹಿನ್ನೆಲೆಯಲ್ಲಿ ತುರ್ತಾಗಿ ಅತಿಕ್ರಮ ಕಂಪೌಡ್ ತೆರವುಗೊಳಿಸಿ ಮುಂದಿನ ಕಾರ್ಯಯೋಜನೆಗೆ ಅನುಕೂಲ ಕಲ್ಪಿಸಬೇಕು. ಈ ವಿಷಯದಲ್ಲಿ ವಿಳಂಬ ಧೋರಣೆ ಅನುಸರಿಸಿದರೆ ಪುರಸಭೆಗೆ ಮುತ್ತಿಗೆ ಹಾಕುವುದಾಗಿ ಸ್ಥಳೀಯರು ಎಚ್ಚರಿಸಿದ್ದಾರೆ.
ವಾರ್ಡಿನ ಸದಸ್ಯ ರಾಜೇಶ ಪತ್ತಾರ, ವೀರೇಶಗೌಡ ಬೆದವಟ್ಟಿ ಅಮೀನುದ್ದೀನ್ ಮುಲ್ಲಾ, ಹುಲಗಪ್ಪ ಮೇದರ್ ರಮೇಶ ಮೇದರ್ ಮಹ್ಮದ್ ರಫಿ, ಅನ್ವರ್ ಅತ್ತಾರ, ಬಸವರಾಜ ಗಾಣಗೇರ, ಬಾವುದ್ದೀನ್, ರಮೇಶ ಚಲವಾದಿ, ರಾಮಣ್ಣ ನೆರೆಬೆಂಚಿ, ಹನುಮೇಶ ಕುಲಕರ್ಣಿ ಮೊದಲಾದವರು ಒತ್ತಾಯಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kanakagiri ದೇಗುಲಕ್ಕೆ ಬಂದಿದ್ದ ಕರಡಿ ಸೆರೆ ಹಿಡಿಯುವಾಗ ದಾಳಿ: ವೃದ್ಧ ಸಾವು
ಕೊಪ್ಪಳ: ಮಗ ರಾಜಶೇಖರ ವಿರುದ್ಧ ತಂದೆ ನಾಮಪತ್ರ ಸಲ್ಲಿಕೆ!
Kushtagi:ವಿದ್ಯುತ್ದೀಪದ ಕಂಬಗಳಿಗೆ ಬಲ್ಬ್ ಅಳವಡಿಸುವ ವೇಳೆ ಅವಘಡ; ಪುರಸಭೆ ಸಿಬ್ಬಂದಿಗೆ ಗಾಯ
Kushtagi: ನಿರೀಕ್ಷಿತ ಫಲಿತಾಂಶ ಬಾರದ ಹಿನ್ನೆಲೆ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ
Koppala; ಬಿಜೆಪಿಯಲ್ಲಿ ಸೌಜನ್ಯತೆ ಇಲ್ಲವೆನಿಸಿ ಕಾಂಗ್ರೆಸ್ ಸೇರಿದೆ: ಸಂಗಣ್ಣ ಕರಡಿ