ಕಾಂಗ್ರೆಸ್, ಬಿಜೆಪಿ ಬಗ್ಗೆ ಕ್ಷೇತ್ರದಲ್ಲಿ ಬೇಸರವಿದೆ : ಕುಷ್ಟಗಿ ಜೆಡಿಎಸ್ ಅಭ್ಯರ್ಥಿ ತುಕಾರಾಮ್
Team Udayavani, Dec 19, 2022, 7:51 PM IST
ಕುಷ್ಟಗಿ:ಕುಷ್ಟಗಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್, ಬಿಜೆಪಿ ಬಗ್ಗೆ ಬೇಸರವಿದೆ ಆದರೂ ತೋರಿಸಿಕೊಂಡು ನಿಷ್ಟುರ ಕಟ್ಟಿಕೊಳ್ಳುತ್ತಿಲ್ಲ ಎಂದು ಕುಷ್ಟಗಿ ವಿಧಾಸಭೆ ಜೆಡಿಎಸ್ ಅಧಿಕೃತ ಅಭ್ಯರ್ಥಿ ತುಕಾರಾಮ್ ಸುರ್ವೆ ಹೇಳಿದರು.
ಜೆಡಿಎಸ್ ಪಕ್ಷದ ಶಾಸಕಾಂಗ ಪಕ್ಷದ ನಾಯಕ ವಿಧಾನಸಭಾ ಕ್ಷೇತ್ರವಾರು ಪ್ರಕಟಿಸಿದ ಅಧಿಕೃತ 93 ಅಭ್ಯರ್ಥಿಗಳ ಪಟ್ಟಿಯಲ್ಲಿ, ಕುಷ್ಟಗಿ ಕ್ಷೇತ್ರದಿಂದ ತುಕಾರಾಮ್ ಸುರ್ವೆ ಅವರಿಗೆ ಅವಕಾಶ ಸಿಕ್ಕಿರುವ ಹಿನ್ನೆಲೆಯಲ್ಲಿ ಸಂತಸ ಹಂಚಿಕೊಂಡರು. ನಾನು 1994ರಿಂದಲೂ ಜನತಾ ಪರವಾರದಿಂದ ಇದ್ದೇನೆ. ಆಗ ನನಗೆ ರಾಜಕೀಯ ಗುರು ಮಾಜಿ ಶಾಸಕ ಕೆ.ಶರಣಪ್ಪ ಆಗಿದ್ದು, ಅವರು ಜೆಡಿಎಸ್ ಬಿಟ್ಟು ಬಿಜೆಪಿ ಸೇರಿದ್ದರೂ, ನಾನೂ ಜೆಡಿಎಸ್ ನಲ್ಲಿ ಇದ್ದೇನೆ. ಈ ಬಾರಿ ಕುಷ್ಟಗಿ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದು, ಮಾಜಿ ಸಿಎಂ ನನಗೆ ಪಕ್ಷದ ಟಿಕೆಟ್ ನೀಡುವುದು ಖಾತ್ರಿಯಾಗಿತ್ತು. ಅಂತೆಯೇ ಕುಷ್ಟಗಿ ವಿಧಾನಸಭೆಗೆ ನನ್ನನ್ನು ಅಧಿಕೃತ ಅಭ್ಯರ್ಥಿ ಎಂದು ಪ್ರಕಟಿಸಿದ್ದಾರೆ. ಈಗಾಗಲೇ ಕಳೆದ 23 ದಿನಗಳಿಂದ ಕುಷ್ಟಗಿ ತಾಲೂಕಿನಾದ್ಯಂತ ಪಂಚರತ್ನ ರಥಯಾತ್ರೆ 130 ಗ್ರಾಮಗಳಲ್ಲಿ ಸಂಚರಿಸಿದೆ. ಇನ್ನೂ 8ರಿಂದ 10ಗ್ರಾಮಗಳು ಉಳಿದಿವೆ ಎಂದರು.
ರಥಯಾತ್ರೆಯ ಸಂಚಾರದ ವೇಳೆ ಜನರು, ಕುಮಾರಸ್ವಾಮಿ ಸರ್ಕಾರದ ಸಾಲಮನ್ನಾ ಯೋಜನೆಗಳ ಬಗ್ಗೆ ಪ್ರಸ್ತಾಪಿಸುತ್ತಿದ್ದಾರೆ. ಜನರಿಗೆ ಬಿಜೆಪಿ, ಕಾಂಗ್ರೆಸ್ ಬಗ್ಗೆ ಬೇಸರ ವ್ಯಕ್ತವಾಗಿದ್ದು, ಹಣ, ಜಾತಿ ಪ್ರಭಾವ, ಪ್ರಾಬಲ್ಯ ದ ರಾಷ್ಟ್ರೀಯ ಪಕ್ಷಗಳ ಪೈಪೋಟಿಯಲ್ಲಿ ಮೂರನೇಯವರಿಗೆ ಮನ್ನಣೆ ನೀಡುವ ವಿಶ್ವಾಸದಿಂದಲೇ ಸ್ಪರ್ಧಿಸಿರುವೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರಾಜ್ಯ ದಿವಾಳಿ ಮಾಡಿ ಚೊಂಬು ತೋರಿಸುತ್ತಿದ್ದಾರೆ: ಬಸವರಾಜ ಬೊಮ್ಮಾಯಿ
Shiv sena ಪಕ್ಷದ ಗೀತೆಯಿಂದ ‘ಹಿಂದೂ’, ‘ಜೈ ಭವಾನಿ’ ಪದ ಕೈಬಿಡಲ್ಲ: ಉದ್ಧವ್
Protest; ಕೇಜ್ರಿವಾಲ್ ಸಕ್ಕರೆ ಮಟ್ಟ 300 ದಾಟಿದೆ.. ; ಆಮ್ ಆದ್ಮಿ ಪಕ್ಷ ಆಕ್ರೋಶ
Ram Navami: ಅಯೋಧ್ಯೆಯಲ್ಲಿ ಬಾಲರಾಮನ ಹಣೆಯನ್ನು ಸ್ಪರ್ಶಿಸಿದ ಸೂರ್ಯರಶ್ಮಿ!
Udupi: ರಾಜ್ಯದಲ್ಲಿ ಕಾಂಗ್ರೆಸ್ 20 ಸ್ಥಾನ ಗೆಲ್ಲುವುದು ಖಚಿತ – ಡಾ. ಆರತಿ ಕೃಷ್ಣ