ಭಾಷಣಕಾರನಿಗೆ ಆತ್ಮ ವಿಶ್ವಾಸ ಮುಖ್ಯ: ಅಂಡಗಿ


Team Udayavani, Nov 7, 2020, 9:09 PM IST

KOPALA-TDY-1

ಕೊಪ್ಪಳ: ಆತ್ಮವಿಶ್ವಾಸವಿಲ್ಲದ ಭಾಷಣಕಾರನಿಗೆ ಯಶಸ್ಸು ಸಿಗದು. ಆತನಿಗೆ ಆತ್ಮವಿಶ್ವಾಸ ಮುಖ್ಯ. ಅನೇಕ ದಿನಗಳ ಸಾಧನೆ, ನಿರಂತರ ಪ್ರಯತ್ನದಿಂದ ಭಾಷಣ ಕಲೆ ಕರಗತವಾಗಲಿದೆ. ಭಾಷಣಕಾರನಲ್ಲಿ ಕೇವಲ ಧ್ವನಿಶಕ್ತಿಯೊಂದಿದ್ದರೆ ಸಾಲದು, ಮಾತಿನಲ್ಲೊಂದು ಆಕರ್ಷಕ ಶೈಲಿ ಇರಬೇಕು ಎಂದು ಚುಸಾಪ ಅಧ್ಯಕ್ಷ ಹನುಮಂತಪ್ಪ ಅಂಡಗಿ ಹೇಳಿದರು.

ಕೊಪ್ಪಳದ ಪ್ರಧಾನ ಅಂಚೆ ಕಚೇರಿಯಲ್ಲಿ “ಜಾಗರೂಕತೆ ಜಾಗೃತಿ ವಾರ’ದ ಅಂಗ ವಾಗಿ ಹಮ್ಮಿಕೊಂಡ ಭಾಷಣ ಸ್ಪರ್ಧೆ ನಿರ್ಣಾಯಕರಾಗಿ ಭಾಗವಹಿಸಿ ಅವರು ಮಾತನಾಡಿದರು. ಭಾಷಣಕಾರ ತನ್ನ ಮಾತಿನ ಮೂಲಕ ಕೇಳುಗರನ್ನು ಆಕರ್ಷಿಸಿ, ಅವರಲ್ಲಿ ಮುಂದಿನ ಮಾತು ಕೇಳಬೇಕೆನ್ನುವ ಕುತೂಹಲ ಹುಟ್ಟಿಸುತ್ತಾ, ಆಸಕ್ತಿ ಕೆರಳಿಸುತ್ತಾ ತನ್ನ ವಿಚಾರಗಳತ್ತ ಗಮನಸೆಳೆಯುವ ಪ್ರಯತ್ನ ಮಾಡಬೇಕು. ಭಾಷಣಕಾರ ಹೆದರದೇ, ಬೆದರದೇ, ಕಂಪಿಸದೇ, ಕಂಠಪಾಠಮಾಡದೇ ಮಾತಾಡುವ ಹವ್ಯಾಸ ರೂಢಿಸಿಕೊಳ್ಳಬೇಕು. ಮಾತೃಭಾಷೆಯಿಂದ ಮಾತ್ರ ತಮ್ಮ ಭಾವನೆಗಳನ್ನು ನಿರ್ಭಯದಿಂದ, ನಿರರ್ಗಳ, ನಿರ್ಭೀತಿಯಿಂದ ವ್ಯಕ್ತಪಡಿಸಲು ಸಾಧ್ಯ ಎಂದರು.

ಭಾಷಣಕಾರನು ನಿತ್ಯ ಅಧ್ಯಯನ, ನಿರಂತರ ಓದು, ಬರಹ ಮಾಡುತ್ತಿರಬೇಕು. ಈ ಮೂರು ಕಾರ್ಯ ನಿಂತರೆ ಮಾತಿಗೆ ಹೊಸತನಬರದು. ಭಾಷಣಕಾರನ ವೇಷಭೂಷಣವೂ ಆಕರ್ಷಕವಾಗಿರಬೇಕು. ಭಾಷಣ ಸಂಕ್ಷಿಪ್ತ ಮತ್ತು ಹೃದಯಸ್ಪರ್ಶಿಯಾಗಿರಬೇಕು ಎಂದರು. ಮತ್ತೋರ್ವ ನಿರ್ಣಾಯಕ ರವಿ ಕಾಂತನವರ ಮಾತನಾಡಿ, ವಿದ್ಯಾರ್ಥಿಗಳು ಈಗಾಗಲೇ ಪ್ರಸಿದ್ಧರಾಗಿರುವ ಭಾಷಣಕಾರರ ಭಾಷಣಗಳನ್ನು ಕೇಳಿ ಅವುಗಳ ಅಧ್ಯಯನ ಮಾಡಬೇಕು. ಭಾಷಣಕಾರನಿಗೆ ಪ್ರಚಲಿತ ವಿದ್ಯಮಾನಗಳ ಜ್ಞಾನ, ವಿಷಯಜ್ಞಾನವಿರಬೇಕು ಎಂದರು.

ಅಂಚೆ ಪಾಲಕ ಬಿ.ವಿ. ಅಂಗಡಿ ಮಾತನಾಡಿದರು. ವಿವಿಧ ಅಂಚೆ ಪಾಲಕರಾದ ವೈ.ವೈ. ಕೋಳೂರು, ಹನುಮಂತರಾವ್‌ ಕುಲಕರ್ಣಿ, ಎಂ.ಡಿ. ಸುಭಾನ ಅಂಚೆ ಇಲಾಖೆಯ ವೀಣಾ ಅಬ್ಬಿಗೇರಿ, ಎಸ್‌.ಸಿ. ಚುಳಕಿ ಸೇರಿ ಇತರರು ಇದ್ದರು. ಭಾಷಣ ಸ್ಪರ್ಧೆಯಲ್ಲಿ ಶ್ರೀರûಾ ಹನುಮಂತರಾವ್‌ ಕುಲಕರ್ಣಿ ಪ್ರಥಮ, ಮಂಥನ ಕಿರಣ ಹೆಬ್ಬಳ್ಳಿ ದ್ವಿತೀಯ, ಶರಣ್ಯ ಸರ್ವೋತ್ತಮ ಉಪಾಧ್ಯಾಯ ತೃತೀಯ ಸ್ಥಾನ ಪಡೆದರು. ದಿವ್ಯಾ ವೀರಣ್ಣ ಪತ್ತಾರ, ಅನೀಷ ಕಿರಣ ಆಶ್ರಿತ, ಧರಣಿ ಉಷಾ ಆರ್‌., ಇಕಾಮಹಮ್ಮದ್‌ ಹುಸೇನ್‌ ಫಾತೀಮಾ, ಶ್ರೀನಿವಾಸಶಂಕರ ನಾಯಕ, ಉಮಾ ಬಸವರಾಜ ತಲೆಕಾನ, ಆಫìತಾ ಮಹಮ್ಮದಗೌಸ್‌ ತಾಡಪತ್ರಿ ಸಮಾಧಾನಕರ ಬಹುಮಾನ ಪಡೆದರು.

ಕೊಪ್ಪಳ ಬಜಾರ ಉಪ ಅಂಚೆಪಾಲಕ ಜಿ.ಎನ್‌. ಹಳ್ಳಿ ನಿರೂಪಿಸಿದರು. ಶಂಕರ ನಾಯಕ ಸ್ವಾಗತಿಸಿದರು. ಅಂಚೆ ಇಲಾಖೆ ಖಜಾಂಚಿ ಲಕ್ಷ್ಮೀ ನಾರಾಯಣ ಜಹಗೀರದಾರ ವಂದಿಸಿದರು.

ಟಾಪ್ ನ್ಯೂಸ್

Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ

Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ

ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ

ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ

OBC ವರ್ಗಕ್ಕೆ ಕಾಂಗ್ರೆಸ್‌ನಿಂದ ಅನ್ಯಾಯ: ಸುನಿಲ್‌ ಕುಮಾರ್‌

OBC ವರ್ಗಕ್ಕೆ ಕಾಂಗ್ರೆಸ್‌ನಿಂದ ಅನ್ಯಾಯ: ಸುನಿಲ್‌ ಕುಮಾರ್‌

ಸರಕಾರದ ಖಜಾನೆ ಖಾಲಿ, ರೈತರಿಗೆ ಪರಿಹಾರ ನೀಡಲು ಹಣವಿಲ್ಲ: ವಿಜಯೇಂದ್ರ

ಸರಕಾರದ ಖಜಾನೆ ಖಾಲಿ, ರೈತರಿಗೆ ಪರಿಹಾರ ನೀಡಲು ಹಣವಿಲ್ಲ: ವಿಜಯೇಂದ್ರ

ಬಿಜೆಪಿಗೆ ಅಭ್ಯರ್ಥಿ ಇರಲಿಲ್ಲ, ಎಚ್‌ಡಿಕೆಗೆ ಧೈರ್ಯ ಇರಲಿಲ್ಲ: ಡಿಕೆಶಿ

Bangalore Rural; ಬಿಜೆಪಿಗೆ ಅಭ್ಯರ್ಥಿ ಇರಲಿಲ್ಲ, ಎಚ್‌ಡಿಕೆಗೆ ಧೈರ್ಯ ಇರಲಿಲ್ಲ: ಡಿಕೆಶಿ

Mekedatu Dam ನಿರ್ಮಾಣಕ್ಕೆ ಕೇಂದ್ರMekedatu Dam ನಿರ್ಮಾಣಕ್ಕೆ ಕೇಂದ್ರದ ಅನುಮತಿ ಪಡೆಯುವೆ: ದೇವೇಗೌಡಯುವೆ: ದೇವೇಗೌಡ

Mekedatu Dam ನಿರ್ಮಾಣಕ್ಕೆ ಕೇಂದ್ರದ ಅನುಮತಿ ಪಡೆಯುವೆ: ದೇವೇಗೌಡ

Lok Sabha Election; ಕಾಂಗ್ರೆಸ್‌ ಗೆದ್ದರೆ ಸಿದ್ದರಾಮಯ್ಯ ಸ್ಥಾನ ಭದ್ರ

Lok Sabha Election; ಕಾಂಗ್ರೆಸ್‌ ಗೆದ್ದರೆ ಸಿದ್ದರಾಮಯ್ಯ ಸ್ಥಾನ ಭದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಂಗಾವತಿ: ನೇಮಕಾತಿ ಪರೀಕ್ಷೆಗೆ ವೆಬ್‌ ಕಾಸ್ಟಿಂಗ್‌ ಜಾರಿಯಾಗಲಿ

ಗಂಗಾವತಿ: ನೇಮಕಾತಿ ಪರೀಕ್ಷೆಗೆ ವೆಬ್‌ ಕಾಸ್ಟಿಂಗ್‌ ಜಾರಿಯಾಗಲಿ

Parameshwar

Dr.G. Parameshwara ಅವರ ಜಾತಿ ನಿಂದನೆ; ಬೀದರ್ ವ್ಯಕ್ತಿ ವಿರುದ್ಧ ಕೇಸ್

Minchu

Rain; ಬೀದರ್,ಕೊಪ್ಪಳದಲ್ಲಿ ಸಿಡಿಲಿನ ಆರ್ಭಟಕ್ಕೆ ಇಬ್ಬರು ಮೃತ್ಯು

Neha Hiremath Case; Protest by BJP-JDS-ABVP across the state

Neha Hiremath Case; ಬಿಜೆಪಿ-ಜೆಡಿಎಸ್-ಎಬಿವಿಪಿಯಿಂದ ರಾಜ್ಯದೆಲ್ಲೆಡೆ ಪ್ರತಿಭಟನೆ

Gangavathi; ಪರಾರಿಯಾಯ್ತು ಮೇಕೆ ಹಿಡಿಯಲು ಬಂದು ಸೆರೆಯಾಗಿದ್ದ ಚಿರತೆ

Gangavathi; ಪರಾರಿಯಾಯ್ತು ಮೇಕೆ ಹಿಡಿಯಲು ಬಂದು ಸೆರೆಯಾಗಿದ್ದ ಚಿರತೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ

Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ

ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ

ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ

OBC ವರ್ಗಕ್ಕೆ ಕಾಂಗ್ರೆಸ್‌ನಿಂದ ಅನ್ಯಾಯ: ಸುನಿಲ್‌ ಕುಮಾರ್‌

OBC ವರ್ಗಕ್ಕೆ ಕಾಂಗ್ರೆಸ್‌ನಿಂದ ಅನ್ಯಾಯ: ಸುನಿಲ್‌ ಕುಮಾರ್‌

ಸರಕಾರದ ಖಜಾನೆ ಖಾಲಿ, ರೈತರಿಗೆ ಪರಿಹಾರ ನೀಡಲು ಹಣವಿಲ್ಲ: ವಿಜಯೇಂದ್ರ

ಸರಕಾರದ ಖಜಾನೆ ಖಾಲಿ, ರೈತರಿಗೆ ಪರಿಹಾರ ನೀಡಲು ಹಣವಿಲ್ಲ: ವಿಜಯೇಂದ್ರ

ಬಿಜೆಪಿಗೆ ಅಭ್ಯರ್ಥಿ ಇರಲಿಲ್ಲ, ಎಚ್‌ಡಿಕೆಗೆ ಧೈರ್ಯ ಇರಲಿಲ್ಲ: ಡಿಕೆಶಿ

Bangalore Rural; ಬಿಜೆಪಿಗೆ ಅಭ್ಯರ್ಥಿ ಇರಲಿಲ್ಲ, ಎಚ್‌ಡಿಕೆಗೆ ಧೈರ್ಯ ಇರಲಿಲ್ಲ: ಡಿಕೆಶಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.