ಕೈಕೊಟ್ಟ ಪ್ರೇಮಿಗಾಗಿ ಧರಣಿ
Team Udayavani, Sep 11, 2019, 11:02 AM IST
ಕೊಪ್ಪಳ: ಕುಕನೂರಿನ ದೇವಸ್ಥಾನದಲ್ಲಿ ಹಾರ ಬದಲಾಯಿಸಿಕೊಂಡಿರುವ ಜೋಡಿ.
ಕೊಪ್ಪಳ: ಪ್ರಿಯತಮ ಕೈಕೊಟ್ಟ ಎಂದು ಮನನೊಂದು ಪ್ರೇಯಸಿ ಹುಡುಗನ ಮನೆಯ ಮುಂದೆ ಸೋಮವಾರ ಇಡೀ ರಾತ್ರಿ ಧರಣಿ ನಡೆಸಿದ ಪ್ರಸಂಗ ಕುಕನೂರು ತಾಲೂಕಿನ ಭಾನಾಪೂರ ಗ್ರಾಮದಲ್ಲಿ ನಡೆದಿದೆ.
ಹುಬ್ಬಳ್ಳಿಯಲ್ಲಿ ಪ್ಯಾರಾ ಮೆಡಿಕಲ್ ಅಭ್ಯಾಸ ಮಾಡುತ್ತಿರುವ ಭಾನಾಪೂರ ಗ್ರಾಮದ ಯುವತಿ ಶಕುಂತಲಾ ಕಳೆದ ಕೆಲವು ತಿಂಗಳ ಹಿಂದೆ ಅದೇ ಗ್ರಾಮದ ಯುವಕ ವಸಂತನನ್ನು ಪ್ರೀತಿ ಮಾಡಿದ್ದಾಳೆ. ಇಬ್ಬರ ನಡುವೆ ಪ್ರೇಮಾಂಕುರ ನಡೆದಿದೆ. ಯುವಕ ಹೆಚ್ಚಾಗಿ ಗಂಗಾವತಿಯ ಸಂಬಂಧಿಕರ ಮನೆಯಲ್ಲಿ ನೆಲೆಸಿದ್ದರಿಂದ ಅಲ್ಲಿಯೂ ಪಾರ್ಕ್ನಲ್ಲಿ ಇಬ್ಬರು ಸುತ್ತಾಡಿದ್ದಾರೆ.
ಆದರೆ ಕೆಲವು ದಿನಗಳ ಬಳಿಕ ಪ್ರಿಯಕರ ತನ್ನ ಪ್ರೇಯಸಿಯನ್ನು ನಿರಾಕರಿಸಿದ್ದರಿಂದ ಮನ ನೊಂದ ಪ್ರಿಯತಮೆ ನ್ಯಾಯಕ್ಕಾಗಿ ಕುಕನೂರು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಳು. ಪೊಲೀಸರ ಮಧ್ಯಸ್ಥಿಕೆಯಲ್ಲಿಯೇ ಸಂಧಾನ ಮಾತುಕತೆ ನಡೆದಿತ್ತು. ಪ್ರಿಯತಮನ ಜೊತೆ ಯುವತಿ ದೇವಸ್ಥಾನದಲ್ಲಿ ಹಾರ ಬದಲಿಸುವ ಮೂಲಕ ಮದುವೆ ಮಾಡಿಕೊಂಡಿದ್ದಳು. ಆದರೆ ನಾಲ್ಕು ದಿನ ಬಿಟ್ಟು ಗಂಡನ ಮನೆಗೆ ಬರುವಂತೆ ಹೇಳಿದ್ದ ಯುವಕನ ಸಂಬಂಧಿಕರು ಹೇಳಿದ್ದರು. ಆದರೆ ನಾಲ್ಕು ದಿನ ಬಿಟ್ಟು ಬಂದು ಪ್ರಿಯಕರ ಮನೆಯಲ್ಲಿ ಕೇಳಿದರೆ ಪ್ರೇಮಿ ನಾಪತ್ತೆಯಾಗಿದ್ದಾನೆ.
ಸೋಮವಾರ ಗ್ರಾಮದಲ್ಲಿ ನನ್ನ ಗಂಡ ಬರಬೇಕು. ನನ್ನನ್ನು ಮನೆಯ ಒಳಗೆ ಕರೆದುಕೊಂಡು ಹೋಗಬೇಕೆಂದು ಪ್ರಿಯತಮೆ ಶಕುಂತಲಾ ಮನೆಯ ಮುಂದೆ ಇಡೀ ರಾತ್ರಿ ಧರಣಿ ನಡೆಸಿದ ಪ್ರಸಂಗವೂ ನಡೆದಿದೆ. ಆದರೆ ಯುವಕ ಮಾತ್ರ ನಾಪತ್ತೆಯಾಗಿದ್ದಾನೆ. ಇದರ ಹಿಂದೆ ಪಾಲಕರ ಕೈವಾಡವಿದೆ ಎಂದು ಆಪಾದನೆ ಕೇಳಿ ಬಂದಿದ್ದರು. ಯುವತಿ ಮಾತ್ರ ಪೊಲೀಸರ ಮೇಲೆಯೇ ಆರೋಪ ಮಾಡುತ್ತಿದ್ದಾಳೆ. ಕುಕನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kushtagi:ವಿದ್ಯುತ್ದೀಪದ ಕಂಬಗಳಿಗೆ ಬಲ್ಬ್ ಅಳವಡಿಸುವ ವೇಳೆ ಅವಘಡ; ಪುರಸಭೆ ಸಿಬ್ಬಂದಿಗೆ ಗಾಯ
Kushtagi: ನಿರೀಕ್ಷಿತ ಫಲಿತಾಂಶ ಬಾರದ ಹಿನ್ನೆಲೆ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ
Koppala; ಬಿಜೆಪಿಯಲ್ಲಿ ಸೌಜನ್ಯತೆ ಇಲ್ಲವೆನಿಸಿ ಕಾಂಗ್ರೆಸ್ ಸೇರಿದೆ: ಸಂಗಣ್ಣ ಕರಡಿ
Janardhan Reddy; ಸಿದ್ದರಾಮಯ್ಯ ಮೈಸೂರಲ್ಲಿ ಭಿಕ್ಷೆ ಬೇಡುತ್ತಿದ್ದಾರೆ
Lok Sabha ಚುನಾವಣೆಯಲ್ಲಿ ಕಾಂಗ್ರೆಸ್ ಎರಡಂಕಿ ಸ್ಥಾನ ಗೆಲ್ಲಲ್ಲ: ಶ್ರೀರಾಮುಲು
MUST WATCH
ಹೊಸ ಸೇರ್ಪಡೆ
Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!
Kushtagi:ವಿದ್ಯುತ್ದೀಪದ ಕಂಬಗಳಿಗೆ ಬಲ್ಬ್ ಅಳವಡಿಸುವ ವೇಳೆ ಅವಘಡ; ಪುರಸಭೆ ಸಿಬ್ಬಂದಿಗೆ ಗಾಯ
Festivals: ಹಬ್ಬಗಳು ಮರೆಯಾಗುತ್ತಿವೆಯೇ?
Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್ರಿಂದ ಪರಿಶೀಲನೆ
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!