ವಿಪಕ್ಷಗಳ ವಿರುದ್ಧ ಎಸ್ಐಟಿ ಅಸ್ತ್ರ: ಎಚ್ಡಿಕೆ ಆಕ್ರೋಶ
Team Udayavani, Jan 22, 2018, 9:57 AM IST
ಕೊಪ್ಪಳ: ಕಾಂಗ್ರೆಸ್ ಸರ್ಕಾರವು ಮುಗಿದ ಕೇಸ್ಗಳನ್ನು ಪುನಃ ಓಪನ್ ಮಾಡಿಸಿ ವಿಪಕ್ಷಗಳ ವಿರುದ್ಧ ಎಸ್ಐಟಿ ಅಸ್ತ್ರ ಬಳಕೆ ಮಾಡಲು ಮುಂದಾಗಿದೆ. ಈ ದ್ವೇಷದ ರಾಜಕಾರಣ ನಮ್ಮ ಮುಂದೆ ನಡೆಯಲ್ಲ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ಸಿಬಿಐ ಮುಕ್ತಾಯ ಮಾಡಿದ್ದ ಅಕ್ರಮ ಗಣಿ ಹಗರಣವನ್ನು ರಾಜ್ಯ ಸರ್ಕಾರ ಪುನಃ ಎಸ್ಐಟಿ ಮೂಲಕ ಓಪನ್ ಮಾಡಿಸಿದೆ. ಸಿದ್ದರಾಮಯ್ಯರಿಂದ ಆಡಳಿತ ದುರುಪಯೋಗವಾಗುತ್ತಿದೆ. ಜಂತಕಲ್ ಮೈನಿಂಗ್ ಪ್ರಕರಣದಲ್ಲಿ ನಾನು ಯಾವುದೇ ತಪ್ಪೆಸಗಿಲ್ಲ. ಸಿಎಂಗೆ ಆಗದ ವಿಪಕ್ಷ ನಾಯಕರ ಮೇಲೆ ಎಸ್ ಐಟಿ ಮೂಲಕ ಪ್ರಕರಣ ಓಪನ್ ಮಾಡಿಸಿ ದ್ವೇಷದ
ರಾಜಕೀಯ ಮಾಡಲು ಹೊರಟಿದ್ದಾರೆ ಎಂದರು. ಕಾಂಗ್ರೆಸ್ ಸಚಿವರು ಹೈಕಮಾಂಡ್ಗೆ ಕಪ್ಪ ಕೊಟ್ಟ ಬಗ್ಗೆ ಸಮಯ ಬಂದಾಗ ಅವರ ಹೆಸರನ್ನು ಬಹಿರಂಗ ಪಡಿಸುತ್ತೇನೆ. ನಾನು ಹಿಟ್ ಆ್ಯಂಡ್ ರನ್ ಮಾಡಿಲ್ಲ. ಸಿಎಂ ಎಲ್ಲ ವಿಷಯಕ್ಕೂ ಹಾರಿಕೆ ಉತ್ತರ ನೀಡುತ್ತಿದ್ದಾರೆ. ಹಿಟ್ ಆ್ಯಂಡ್ ರನ್ ಅಂದರೇನು ಎನ್ನೋದನ್ನು ಅಧಿಕಾರಕ್ಕೆ ಬಂದಾಗ ತೋರಿಸುತ್ತೇನೆ ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Politics: ಸುಮಲತಾ – ನಾವು ಶಾಶ್ವತ ಶತ್ರುಗಳಲ್ಲ: ಕುಮಾರಸ್ವಾಮಿ
Bangaluru cafe ಸ್ಫೋಟದ ಸಂಚುಕೋರ ಎನ್ಐಎ ಬಲೆಗೆ: ಯಾರಿದು ಷರೀಫ್?
Lok Sabha Election: ಬಿಜೆಪಿ-ಜೆಡಿಎಸ್ “ಜಂಟಿ ಸಮರಾಭ್ಯಾಸ’
Congress; ಕೋಲಾರಕ್ಕೆ ಗೌತಮ್ ಅಚ್ಚರಿಯ ಅಭ್ಯರ್ಥಿ?: 3ನೇ ವ್ಯಕ್ತಿಗೆ ಲಾಭ!
Politics: ಟಿಕೆಟ್ ಹಂಚಿಕೆ ಮರುಪರಿಶೀಲಿಸಿ ಎಂದ ವೀಣಾ ಬೆಂಬಲಿಗರಿಗೆ ಸಿಎಂ ತಿರುಗೇಟು