ಚೌತಿಯ ಮರುದಿವಸ ಇವರೆಲ್ಲಾ ಮೂಷಿಕ ಪೂಜೆ ನಡೆಸುವುದೇಕೆ ಗೊತ್ತೇ?

ಜಾತಿ ಮತಗಳ ಹಂಗು ತೊರೆದು ಇಲ್ಲಿ ಗಣಪತಿಯ ವಾಹನಕ್ಕೆ ನಡೆಯುತ್ತದೆ ವಿಶೇಷ ಪೂಜೆ

Team Udayavani, Sep 3, 2019, 8:20 PM IST

q-8

ಕೊಪ್ಪಳ: ದೇಶದೆಲ್ಲೆಡೆ ಚೌತಿಯಂದು ಗಣೇಶನಿಗೆ ವಿಶೇಷ ಪೂಜೆ ಮಾಡುವುದು ಸಂಪ್ರದಾಯ. ಆದರೆ ಇಲ್ಲೊಂದು ಪಟ್ಟಣದಲ್ಲಿ ಗಣೇಶನ ವಾಹನವಾದ ಮೂಷಿಕನಿಗೆ ವಿಶೇಷ ಪೂಜೆ ಸಲ್ಲಿಸಿ ಭಕ್ತಿ ಭಾವದಿಂದ ಬೇಡಿಕೊಳ್ಳುವ ಸಂಪ್ರದಾಯ ಪೂರ್ವಜರಿಂದ ನಡೆದು ಬಂದಿದೆ.

ಹೌದು.. ನಗರ ಸಮೀಪದ ಭಾಗ್ಯನಗರದಲ್ಲಿ ಗಣೇಶ ಚತುರ್ಥಿ ಮರು ದಿನ ಇಲಿಗಳಿಗೆ ಪೂಜೆ ಸಲ್ಲಿಸಲಾಗುತ್ತಿದೆ. ಈ ಪಟ್ಟಣದಲ್ಲಿ ಬಟ್ಟೆ ತಯಾರುವ ಮಾಡುವ ವಿವಿಧ ಬಗೆಯ ಮಗ್ಗಗಳಿವೆ. ಈ ವೇಳೆ ಇಲಿಗಳು ನಮ್ಮ ಮಗ್ಗಗಳಲ್ಲಿ ದಾರಗಳನ್ನು ಕಡಿಯದಿರಲಿ. ನಮ್ಮ ಉದ್ಯಮಕ್ಕೆ ಯಾವುದೇ ಕುತ್ತು ಬಾರದಿರಲಿ ಎಂದು ಪೂಜೆ ಮಾಡುವುದು ವಾಡಿಕೆ.

ಭಾಗ್ಯನಗರದಲ್ಲಿ ಸುಮಾರು 2 ಸಾವಿರಕ್ಕೂ ಹೆಚ್ಚು ಮಗ್ಗಗಳಿವೆ. ಈ ಮಗ್ಗಳಿಂದಲೇ ಇಲ್ಲಿ ಸಾವಿರಾರು ಕುಟುಂಬಗಳು ಜೀವನೋಪಾಯ ನಡೆಸುತ್ತಿವೆ. ಆಧುನಿಕತೆಯ ಭರಾಟೆಯಲ್ಲೂ ಮಗ್ಗಗಳ ಉಳಿಸಿಕೊಂಡು ಜೀವನಕ್ಕೆ ದಾರಿ ಮಾಡಿಕೊಂಡಿದ್ದಾರೆ. ಈ ಮೊದಲು ಕೈಮಗ್ಗ ಇದ್ದ ಸಂದರ್ಭದಲ್ಲಿ ಪೂರ್ವಜರು ಮನೆಗಳಲ್ಲಿ ಮಗ್ಗಗಳಲ್ಲಿ ಅಳವಡಿಕೆ ಮಾಡುವ ದಾರಗಳನ್ನು ಕಡಿದರೆ ನಮ್ಮ ಜೀವನೋಪಾಯ ನಡೆಯುವುದು ಕಷ್ಟವಾಗಲಿದೆ. ದೇವರು ನಮಗೆ ರಕ್ಷಣೆ ಮಾಡಲಿ. ಗಣೇಶನ ವಾಹನ ನಮಗೆ ಯಾವುದೇ ತೊಂದರೆ ಮಾಡದಿರಲಿ ಎಂದು ಭಕ್ತಿಯಿಂದ ಪೂಜೆ ಸಲ್ಲಿಸುತ್ತಿದ್ದರು.

ಅದರಂತೆ, ಮಂಗಳವಾರ ಭಾಗ್ಯನಗರದಲ್ಲಿ ವಿವಿಧ ಮಗ್ಗಗಳಲ್ಲಿ ಕುಟುಂಬಸ್ಥರು ಪೂರ್ವಜರ ಸಂಪ್ರದಾಯ ಮುನ್ನಡೆಸಿದರು. ಚೌತಿ ದಿನದಂದು ಮಗ್ಗದ ಕೊಠಡಿಗಳನ್ನು ಸ್ವಚ್ಛಗೊಳಿಸಿ ಯಂತ್ರಗಳನ್ನು ತೊಳೆದು ಮಣ್ಣಿನಿಂದ ಸಿದ್ದ ಪಡಿಸಿದ ಇಲಿಗಳಿಗೆ ವಿಶೇಷ ಪೂಜೆ ಕಾಯಿ ಕರ್ಪೂರ ಸಮರ್ಪಕಿಸಲಾಯಿತು. ಇಲಿಗಳಿಗೆ ಕರಿಗಡಬು, ಬದ್ನೆಕಾಯಿ ಪಲ್ಲೆ, ಅನ್ನ ಸಾಂಬಾರು ಸೇರಿದಂತೆ ಅವರವರ ಭಕ್ತಿಯ ಅನುಸಾರ ನೈವೇದ್ಯ ಅರ್ಪಿಸಿ ಪೂಜೆ ಸಲ್ಲಿಸಿ ನಮ್ರತೆಯಿಂದ ಬೇಡಿಕೊಂಡರು.

ಭಾವೈಕ್ಯತೆಯ ಸಂಕೇತ :
ವಿಶೇಷವೆಂಬಂತೆ ಇಲ್ಲಿನ ಮುಸ್ಲಿಂ ಕುಟುಂಬವೂ ಮಗ್ಗಗಳನ್ನು ಹೊಂದಿದ್ದು, ಮಹ್ಮದ್‌ಸಾಬ್ ಭೈರಾಪೂರ ಕುಟುಂಬದ ಫಕೀರಸಾಬ, ಪೀರಸಾಬ, ರಾಜಾಸಾಬ ಅವರ ಕುಟುಂಬವು ಕಳೆದ 12 ವರ್ಷಗಳಿಂದ ಮಗ್ಗದ ಉದ್ಯಮ ನಡೆಸಿಕೊಂಡು ಬಂದಿದೆ. ಅವರೂ ಸಹಿತ ಭಾವೈಕ್ಯತೆಯಿಂದ ಮಗ್ಗಗಳಲ್ಲಿ ಇಲಿಗಳಿಗೆ ಪೂಜೆ ಸಲ್ಲಿಸಿ ನೈವೇದ್ಯ ಅರ್ಪಿಸಿದರು. ಪೂಜಾ ವಿಧಾನ, ಆಚರಣೆಯಲ್ಲಿ ಯಾವುದೇ ಬೇಧ, ಭಾವ ತೋರದೆ ಸರ್ವ ಧರ್ಮದಂತೆ ಪೂಜೆ ಸಲ್ಲಿಸಿದರು. ಈ ಕುಟುಂಬವು ದೀಪಾವಳಿ ಸಂದರ್ಭದಲ್ಲೂ ಲಕ್ಷ್ಮೀ ದೇವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುತ್ತಾರೆ.

ಒಟ್ಟಿನಲ್ಲಿ ದೇಶದೆಲ್ಲೆಡೆ ಗಣೇಶನಿಗೆ ಪೂಜೆ ಸಲ್ಲಿಸಿದರೆ ಬಟ್ಟೆ ತಯಾರಿಸುವ, ನೇಕಾರಿಕೆ ಮಾಡುವ ಕುಟುಂಬಗಳು ಚೌತಿ ಮರುದಿನದಂದು ವಿಘ್ನೇಶ್ವರನ ವಾಹನ ಇಲಿರಾಯನಿಗೆ ಪೂಜೆ ಸಲ್ಲಿಸಿ ರಕ್ಷಣೆ ಹಾಗೂ ಉದ್ಯಮ ಬೆಳೆಸುವಂತೆ ಬೇಡಿಕೊಳ್ಳುವ ಸಂಪ್ರದಾಯ ಬೆಳೆದು ಬಂದಿದೆ.

ಮಗ್ಗಗಳು ಇರುವ ಪ್ರತಿಯೊಂದು ಕುಟುಂಬವು ಗಣೇಶ ಹಬ್ಬದ ಮರು ದಿನ ಮಗ್ಗಗಳಲ್ಲಿ ಇಲಿಗಳಿಗೆ ಪೂಜೆ ಸಲ್ಲಿಸುವುದು ಈ ಹಿಂದಿನಿಂದಲೂ ನಡೆದು ಸಂಪ್ರದಾಯವಾಗಿದೆ. ನಾವು ಸಹಿತ ಇಲಿಗಳಿಗೆ ನೈವೇದ್ಯ ಅರ್ಪಿಸಿ ಪೂಜೆ ಸಲ್ಲಿಸಿದೆವು. ನಮ್ಮ ಮಗ್ಗಗಳಲ್ಲಿ ಇಲಿಗಳು ದಾರ ಕಡಿದು ತೊಂದರೆ ಮಾಡದಿರಲಿ ಎಂದು ಬೇಡಿಕೊಂಡೆವು.
ಹೊನ್ನೂರಸಾಬ ಭೈರಾಪೂರ, ಮಗ್ಗದ ಮುಖ್ಯಸ್ಥ.

ಟಾಪ್ ನ್ಯೂಸ್

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

7-bng

Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್‌ ಆತ್ಮಹತ್ಯೆ

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

6-bng-crime

Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ

ಬೊಮ್ಮಾಯಿ

Hubli; ಕಾನೂನು ವ್ಯವಸ್ಥೆ ಹೀಗೆ ಮುಂದುವರಿದರೆ ರಾಜ್ಯ ಬಿಹಾರವಾಗುತ್ತದೆ: ಬಸವರಾಜ ಬೊಮ್ಮಾಯಿ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Stones Pelted: ಪಶ್ಚಿಮ ಬಂಗಾಳ: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ

Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯಿತಿ ಸಿದ್ದೇಶ್ವರ

Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ

4-gadaga

Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್‌ಪಿ

3-gadaga

Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

Ls Polls: ಕಾಂಗ್ರೆಸ್‌ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್‌

Ls Polls: ಕಾಂಗ್ರೆಸ್‌ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

jagadish shettar

Belagavi; ಕಾಂಗ್ರೆಸ್ ಸರ್ಕಾರದ ಓಲೈಕೆಯಿಂದ ಜಿಹಾದಿ ಕೃತ್ಯಗಳು ಹೆಚ್ಚುತ್ತಿದೆ: ಶೆಟ್ಟರ್

7-bng

Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್‌ ಆತ್ಮಹತ್ಯೆ

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

6-bng-crime

Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.