ಸಮುದಾಯ ಭವನ ಕಾಮಗಾರಿಗೆ ಚಾಲನೆ
Team Udayavani, Oct 20, 2019, 4:09 PM IST
ದೋಟಿಹಾಳ: ಗ್ರಾಮದ ದೇವಲ ಮಹರ್ಷಿ ಸಾಂಸ್ಕೃತಿಕ ಸಮುದಾಯ ಭವನದ ಕಟ್ಟಡದ ಮುಂದುವರಿದ ಕಾಮಗಾರಿಗೆ ಶನಿವಾರ ಸಂಸದ ಕರಡಿ ಸಂಗಣ್ಣ ಅವರು ಭೂಮಿಪೂಜೆ ಮಾಡಿ ಚಾಲನೆ ನೀಡಿದರು.
ಈ ವೇಳೆ ಗ್ರಾಮದ ದೇವಾಂಗ ಸಮಾಜದ ಗುರು-ಹಿರಿಯರು ನಮ್ಮ ಸಮಾಜ ಬಡಕುಟುಂಬಗಳ ಸಮಾಜವಾಗಿದೆ. ನೇಕಾರಿಕೆ ನಮ್ಮ ಕಸುಬುವಾಗಿದೆ. ಸಮಾಜದ ಸಮುದಾಯ ಭವನದ ಕಟ್ಟಡದ ಅರ್ಧಕ್ಕೆ ನಿಂತಿದೆ. ಸಮಾಜದವರು ಮದುವೆ ಸಮಾರಂಭ ಮಾಡಲು ತೊಂದರೆ ಆಗುತ್ತಿದೆ. ಹೀಗಾಗಿ ತಮ್ಮ ಕ್ಷೇತ್ರಾಭಿವೃದ್ಧಿ ಅನುದಾನದಲ್ಲಿ ಹಣ ನೀಡಬೇಕು ಎಂದು ಸಮಾಜದ ಗುರು-ಹಿರಿಯರು ಸಂಸದ ಕರಡಿ ಸಂಗಣ್ಣ ಅವರಿಗೆ ಮನವಿ ಸಲ್ಲಿಸಿದರು.
ಮನವಿ ಸ್ವೀಕರಿ ಮಾತನಾಡಿದ ಸಂಸದರು, ಈ ಸಮುದಾಯ ಭವನಕ್ಕೆ ಐದು ಲಕ್ಷ ರೂ. ಅನುದಾನ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಆದರೆ ಯಾವುದೇ ತೊಂದರೆಗಳಿಂದ ಸದ್ಯ ಮೂರು ಲಕ್ಷ ರೂ. ಹಣ ಬಿಡುಗಡೆಯಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಹಣ ನೀಡುತ್ತೇನೆ ಎಂದು ಸಮಾಜದ ಹಿರಿಯರಿಗೆ ಭರವಸೆ ನೀಡಿದರು.
ಮಾಜಿ ಶಾಸಕ ದೊಡ್ಡನಗೌಡ ಪಾಟೀಲ್, ಜಿಪಂ ಸದಸ್ಯರಾದ ಕೆ. ಮಹೇಶ, ವಿಜಯ ನಾಯ್ಕ, ನೇಮಣ್ಣ ಮೆಲಸಕ್ರಿ, ತಾಪಂ ಸದಸ್ಯ ಮಹಾಂತೇಶ ಬಾದವಿ, ವೇದಮೂರ್ತಿ ಶ್ರೀ ವಿವೇಕಾನಂದ ಸ್ವಾಮಿಗಳು, ಸಮಾಜದ ಮುಖಂಡರಾದ ಬಾಳಪ್ಪ ಅರಳಿಕಟ್ಟಿ, ಶಿವಪ್ಪ ಮಾಳಗಿ, ನಾರಾಯಣಪ್ಪ ಕೊಳ್ಳಿ, ರಾಮನಗೌಡ ಬಿಜ್ಜಲ್, ಅಮರೇಗೌಡ ಬಿಜ್ಜಲ್, ಮಲ್ಲಪ್ಪ ಮೆದಿಕೇರಿ, ಮಹೇಶ ಕಾಳಗಿ, ಚನ್ನಪ್ಪ ಸಕ್ರಿ, ಹಿರಣಯ್ಯ ಸಕ್ರಿ, ಮಾರುತಿ ಹುಬ್ಬಳ್ಳಿ ಸೇರಿದಂತೆ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Raids: ಕೊಪ್ಪಳ ಕೃಷಿ ಇಲಾಖೆ ಉಪ ನಿರ್ದೇಶಕ ಸಹದೇವ ಯರಗುಪ್ಪಾ ಮನೆ ಮೇಲೆ ಲೋಕಾಯುಕ್ತ ದಾಳಿ
Koppala; ಶಿವರಾಜ ತಂಗಡಗಿ ಹೇಳಿಕೆಯನ್ನು ಬಿಜೆಪಿ ತಿರುಚಿದೆ: ಕೃಷ್ಣಾ ಇಟ್ಟಂಗಿ
Koppal Lok Sabha constituency; ಲಿಂಗಾಯತ, ಅಹಿಂದ ಮತಗಳೇ ಇಲ್ಲಿ ನಿರ್ಣಾಯಕ
Koppala: ಮೋದಿ ಮೋದಿ ಎಂದರೆ ಕಪಾಳಕ್ಕೆ ಹೊಡಿಯಿರಿ ಎಂದ ಸಚಿವ ತಂಗಡಗಿ ವಿರುದ್ಧ ಪ್ರಕರಣ ದಾಖಲು
“Modi ಜಪಿಸುವ ವಿದ್ಯಾರ್ಥಿಗಳ ಕಪಾಳಕ್ಕೆ ಹೊಡೆಯಿರಿ’: ಶಿವರಾಜ ತಂಗಡಗಿ
MUST WATCH
ಹೊಸ ಸೇರ್ಪಡೆ
Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ
Kannada Cinema; ಸ್ನೇಹಿತರ ಸುತ್ತ ‘ಪಾರ್ಟ್ನರ್’: ಟ್ರೇಲರ್, ಆಡಿಯೋದಲ್ಲಿ ಹೊಸಬರ ಚಿತ್ರ
Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್
ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು
Congress ಬಳಿಕ ಸಿಪಿಐಗೂ 11 ಕೋಟಿ ರೂ.ಬಾಕಿಗಾಗಿ ಐಟಿ ನೋಟಿಸ್