ಟಿಸಿ ಸ್ಥಳಾಂತರ ಜಟಾಪಟಿ: ಭಯದಲ್ಲಿ ಸಾರ್ವಜನಿಕರು
Team Udayavani, May 15, 2019, 1:02 PM IST
ಕುಷ್ಟಗಿ ಗುಮಗೇರಾದಲ್ಲಿ ಟಿಸಿ ಮತ್ತು ನೀರಿನ ತೊಟ್ಟಿ ಅಕ್ಕಪಕ್ಕದಲ್ಲಿರುವ ಅಪಾಯಕಾರಿ ಸ್ಥಿತಿ.
ಕುಷ್ಟಗಿ:ತಾಲೂಕಿನ ಗುಮಗೇರಾ ಗ್ರಾಮದ ಹೊರವಲಯದಲ್ಲಿ ನೀರಿನ ತೊಟ್ಟಿ, ವಿದ್ಯುತ ಪರಿವರ್ತಕ (ಟಿಸಿ) ಎರಡು ಅಕ್ಕಪಕ್ಕದಲ್ಲಿದ್ದು ಅಪಾಯಕಾರಿ ಎನ್ನುವುದು ಅರಿವಿದ್ದರೂ ಗ್ರಾಪಂ ಹಾಗೂ ಜೆಸ್ಕಾಂ ಇವೆರಡನ್ನು ಸ್ಥಳಾಂತರಿಸದೇ ನಿರ್ಲಕ್ಷಿಸಿದೆ.
ಕುಷ್ಟಗಿ-ತಾವರಗೇರಾ ರಾಜ್ಯ ಹೆದ್ದಾರಿಯಲ್ಲಿರುವ ನೀರಿನ ತೊಟ್ಟಿ ಹಾಗೂ ಟಿಸಿ ಎರಡು ಅಕ್ಕಪಕ್ಕದಲ್ಲಿವೆ. ಇವುಗಳನ್ನು ಯಾವುದು ಮೊದಲು ಅಳವಡಿಸಿದೆ ಎನ್ನುವುದು ಇಲ್ಲಿ ಇನ್ನೂ ಗೊಂದಲವಿದೆ. ಹೀಗಾಗಿ ಗ್ರಾಪಂ ನೀರಿನ ತೊಟ್ಟಿಯನ್ನು, ಜೆಸ್ಕಾಂ ಟಿಸಿಯನ್ನು ಸ್ಥಳಾಂತರಿಸಲು ಹಿಂದೇಟು ಹಾಕುತ್ತಿದೆ. ಟಿಸಿಯನ್ನು ಸ್ಥಳಾಂತರಿಸಲು ಸ್ಥಳೀಯ ಗ್ರಾಮ ಪಂಚಾಯಿತಿ ಅರ್ಜಿ ಸಲ್ಲಿಸಿದಲ್ಲಿ ಜೆಸ್ಕಾಂ ಸ್ಥಳಾಂತರ ಖರ್ಚು ವೆಚ್ಚದಲ್ಲಿ ಶೇ. 10ರಷ್ಟು ಪಾವತಿಸಿದಲ್ಲಿ ಕ್ರಮ ಕೈಗೊಳ್ಳಲಿದೆ. ಇಲ್ಲವೇ ತೀರ ಅಪಾಯಕಾರಿಯಾಗಿದ್ದರೆ ಜೆಸ್ಕಾಂ ಸ್ಥಾನಿಕ ಪರಿಸ್ಥಿತಿ ಅವಲೋಕಿಸಿ ಸ್ಥಳಾಂತರಿಸಬೇಕು. ಆದರೆ ಜೆಸ್ಕಾಂ ಹಾಗೂ ಗ್ರಾಪಂ ಯಾವುದೇ ಕ್ರಮ ಕೈಗೊಂಡಿಲ್ಲ.
ನೀರು ಪೂರೈಸಿದ ವೇಳೆ ನೀರು ಭರ್ತಿಯಾಗಿ ಹರಿಯುವ ಸಂದರ್ಭದಲ್ಲಿ ನೀರು ಟಿಸಿಗೆ ಸಿಂಪರಣೆಯಾಗುತ್ತಿದ್ದು, ವಿದ್ಯುತ್ ಪ್ರವಹಿಸುವ ಸಾಧ್ಯತೆಗಳಿವೆ.ದುರದೃಷ್ಟವಶಾತ್ ಇದುವರೆಗೂ ಯಾವುದೇ ಅಹಿತಕರ ಘಟನೆ ಘಟಿಸಿಲ್ಲ. ಅಪಯಕಾರಿ ಘಟನೆ ಸಂಭವಿಸುವ ಮೊದಲೇ ಗ್ರಾಪಂ ಹಾಗೂ ಜೆಸ್ಕಾಂ ಎಚ್ಚೆತ್ತು ಕೊಳ್ಳಬೇಕಿದೆ. ದಿನವೂ ನೀರಿನ ತೊಟ್ಟಿಗೆ ನೀರು ಪೂರೈಸಿದ ವೇಳೆ ಪಕ್ಕದ ಟಿಸಿ ಬಳಿ ನಿಲ್ಲಬೇಕಾದ ಅನಿವಾರ್ಯತೆ ಎದುರಾಗಿದ್ದು, ನೀರಿಗಾಗಿ ಮಕ್ಕಳನ್ನು ಕಳಿಸುವುದಕ್ಕೆ ಸ್ಥಳೀಯರು ಹಿಂಜರಿಯುತ್ತಿದ್ದಾರೆ ಎಂದು ಸುಖಮುನಿ ಗಡಗಿ ಅಸಮಧಾನ ವ್ಯಕ್ತಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗಂಗಾವತಿ: ನೇಮಕಾತಿ ಪರೀಕ್ಷೆಗೆ ವೆಬ್ ಕಾಸ್ಟಿಂಗ್ ಜಾರಿಯಾಗಲಿ
Dr.G. Parameshwara ಅವರ ಜಾತಿ ನಿಂದನೆ; ಬೀದರ್ ವ್ಯಕ್ತಿ ವಿರುದ್ಧ ಕೇಸ್
Rain; ಬೀದರ್,ಕೊಪ್ಪಳದಲ್ಲಿ ಸಿಡಿಲಿನ ಆರ್ಭಟಕ್ಕೆ ಇಬ್ಬರು ಮೃತ್ಯು
Neha Hiremath Case; ಬಿಜೆಪಿ-ಜೆಡಿಎಸ್-ಎಬಿವಿಪಿಯಿಂದ ರಾಜ್ಯದೆಲ್ಲೆಡೆ ಪ್ರತಿಭಟನೆ
Gangavathi; ಪರಾರಿಯಾಯ್ತು ಮೇಕೆ ಹಿಡಿಯಲು ಬಂದು ಸೆರೆಯಾಗಿದ್ದ ಚಿರತೆ
MUST WATCH
ಹೊಸ ಸೇರ್ಪಡೆ
Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?
ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ