ಗ್ರಂಥಪಾಲಕಿ ಮನೆ ಸೇರಿದ ಪುಸ್ತಕ
Team Udayavani, Oct 25, 2019, 2:36 PM IST
ದೋಟಿಹಾಳ: ಜುಮಲಾಪೂರದಲ್ಲಿ ಸಮುದಾಯ ಭವನದಲ್ಲೇ ಕಾರ್ಯ ನಿರ್ವಹಿಸುತ್ತಿದ್ದ ಗ್ರಂಥಾಲಯ ಶಿಥಿಲಗೊಂಡಿದ್ದರಿಂದ ಪುಸ್ತಕಗಳು ಸೇರಿದಂತೆ ಸಾಮಗ್ರಿಗಳು ಗ್ರಂಥಪಾಲಕಿಯ ಮನೆ ಸೇರಿವೆ.
ಗ್ರಂಥಾಲಯಕ್ಕೆ ಸ್ವಂತ ಕಟ್ಟಡವಿಲ್ಲದ್ದರಿಂದ 2007-08ರಿಂದ ಸಮುದಾಯ ಭವನದಲ್ಲೇ ಕಾರ್ಯ ನಿರ್ವಹಿಸುತ್ತಿತ್ತು. ಸಮುದಾಯ ಭವನ ಈಗ ಶಿಥಿಲಗೊಂಡಿದ್ದು, ಮೇಲ್ಛಾವಣಿ ಇಂದೆಯೋ, ನಾಳೆಯೋ ಬೀಳುವ ಸ್ಥಿತಿಯಲ್ಲಿದೆ. ಮಳೆ ಬಂದರೆ ನೀರು ಕೇಂದ್ರದೊಳಗೆ ಬರುತ್ತವೆ. ಮಳೆ ಬಂದರೆ ಪುಸ್ತಕಗಳು ಹಾಳಾಗಿ ಹೋಗುತ್ತವೆ ಎಂಬ ಕಾರಣದಿಂದ ಪುಸ್ತಕ ಹಾಗೂ ಇತರೆ ಸಾಮಗ್ರಿಗಳು ಗ್ರಂಥಪಾಲಕರ ಮನೆ ಸೇರಿವೆ. ಹೀಗಾಗಿ ಗ್ರಂಥಾಲಯ ಬಂದಾಗಿ ಮೂರ್ನಾಲ್ಕು ತಿಂಗಳುಗಳು ಕಳೆದಿವೆ.
ಅದು ಅಲ್ಲದೇ ತಿಪ್ಪೆಗಳ ಮಧ್ಯೆಯೇ ಗ್ರಂಥಾಲಯವಿದ್ದಿದ್ದರಿಂದ ಓದುಗರು ವಾಸನೆ ಸಹಿಸಲಾಗದೇ ದೂರ ಹೋಗುವಂಥ ಸ್ಥಿತಿ ನಿರ್ಮಾಣವಾಗಿತ್ತು. ಸಾರ್ವಜನಿಕರು ದನಕರುಗಳ ಸೆಗಣಿ, ಮೂತ್ರ, ಕಸಕಡ್ಡಿ ಮತ್ತು ಇನ್ನಿತರ ನಿರುಪಯುಕ್ತ ವಸ್ತುಗಳನ್ನು ಹಾಕುತ್ತಿದ್ದರಿಂದ ಓದುಗರಿಗೆ ಗಬ್ಬು ವಾಸನೆ ಉಂಟಾಗಿ ಕಿರಿಕಿರಿಯಾಗಿತ್ತು. ಸುಮಾರು 2500 ಜನಸಂಖ್ಯೆ ಹೊಂದಿರುವ ಈ ಗ್ರಾಮದಲ್ಲಿ ಕೇವಲ 50 ಜನ ಮಾತ್ರ ಗ್ರಂಥಾಲಯ ಸದಸ್ಯತ್ವ ಹೊಂದಿದ್ದು, ಎರಡು ಪತ್ರಿಕೆ, ಮೂರು ಮಾಸಪತ್ರಿಕೆ ಬರುತ್ತಿದ್ದವು. 2152 ಪುಸ್ತಕಗಳು ಈ ಗ್ರಂಥಾಲಯದಲ್ಲಿ ಇವೆ. ಆದರೆ ಅವು ಸಹ ಈಗ ಉಪಯೋಗಕ್ಕೆ ಬಾರದಂತಾಗಿವೆ.
ಗ್ರಾಮದ ಸಮುದಾಯ ಭವನದಲ್ಲಿ ಕಳೆದ 7-8 ವರ್ಷಗಳಿಂದ ನಡೆಯುತ್ತಿದ ಗ್ರಂಥಾಲಯ ಕಟ್ಟಡ ಶಿಥಿಲಗೊಂಡಿದೆ. ಮಳೆ ಬಂದರೆ ನೀರು ಕೇಂದ್ರದೊಳಗೆ ನೀರು ಬರುತ್ತವೆ. ಬೇರೆ ಕಟ್ಟಡ ವ್ಯವಸ್ಥೆ ಮಾಡಿಕೊಡಲು ಗ್ರಾಪಂ ಅವರಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಹೀಗಾಗಿ ಅನಿವಾರ್ಯವಾಗಿ ಮೂರು ತಿಂಗಳಿಂದ ನಮ್ಮ ಮನೆಯಲ್ಲೇ ಗ್ರಂಥಾಲಯ ಸಾಮಗ್ರಿ ಇಟ್ಟುಕೊಂಡಿದ್ದೇವೆ –ಅಕ್ಕಮಹಾದೇವಿ, ಗ್ರಂಥಪಾಲಕಿ.
-ಮಲ್ಲಿಕಾರ್ಜುನ ಮೆದಿಕೇರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Raids: ಕೊಪ್ಪಳ ಕೃಷಿ ಇಲಾಖೆ ಉಪ ನಿರ್ದೇಶಕ ಸಹದೇವ ಯರಗುಪ್ಪಾ ಮನೆ ಮೇಲೆ ಲೋಕಾಯುಕ್ತ ದಾಳಿ
Koppala; ಶಿವರಾಜ ತಂಗಡಗಿ ಹೇಳಿಕೆಯನ್ನು ಬಿಜೆಪಿ ತಿರುಚಿದೆ: ಕೃಷ್ಣಾ ಇಟ್ಟಂಗಿ
Koppal Lok Sabha constituency; ಲಿಂಗಾಯತ, ಅಹಿಂದ ಮತಗಳೇ ಇಲ್ಲಿ ನಿರ್ಣಾಯಕ
Koppala: ಮೋದಿ ಮೋದಿ ಎಂದರೆ ಕಪಾಳಕ್ಕೆ ಹೊಡಿಯಿರಿ ಎಂದ ಸಚಿವ ತಂಗಡಗಿ ವಿರುದ್ಧ ಪ್ರಕರಣ ದಾಖಲು
“Modi ಜಪಿಸುವ ವಿದ್ಯಾರ್ಥಿಗಳ ಕಪಾಳಕ್ಕೆ ಹೊಡೆಯಿರಿ’: ಶಿವರಾಜ ತಂಗಡಗಿ
MUST WATCH
ಹೊಸ ಸೇರ್ಪಡೆ
ಲೋಕಸಭೆ ಅಖಾಡ 2024: ಸವಾಲು ಗೆದ್ದ ಶೆಟ್ಟರ್ ಮುಂದಿದೆ ಅಗ್ನಿ ಪರೀಕ್ಷೆ
ಬಾಗಲಕೋಟೆ: ಕೋಟೆ ನಾಡಿನ ದಾಹ ತೀರಿಸುವ ದಾನಿಗಳು!
D.K. Suresh ಅವರದ್ದು ಹೃದಯವಂತಿಕೆಯಲ್ಲವೇ?: ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ
Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ
Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ