ಪ್ರಚಾರ ಆರ್ಭಟ, ಕೇಳಲಿಲ್ಲ ಗೋಳಾಟ


Team Udayavani, Apr 23, 2019, 2:22 PM IST

hav-3

ಕೊಪ್ಪಳ: ನೀರು, ನೀರಾವರಿ ಇಲ್ಲದೆ ಗೋಳಾಡುತ್ತಿರುವ ಇಲ್ಲಿನ ಜನತೆಗೆ ಜನ ನಾಯಕರಿಂದ ನೀರಾವರಿಗೆ ಸಂಬಂಧಿಸಿದ ಭರವಸೆಗಳು ಪುನಾವರ್ತಿತಗೊಂಡಿವೆ. ಒಂದು ತಿಂಗಳಿಂದ ಚುನಾವಣೆ ಭರಾಟೆಯಲ್ಲಿ ತೊಡಗಿದ್ದ ಕಾಂಗ್ರೆಸ್‌, ಬಿಜೆಪಿ ನಾಯಕರು ಸ್ಥಳೀಯ ಹಲವು ಸಮಸ್ಯೆಗಳಿಗಿಂತ ರಾಷ್ಟ್ರ ರಾಜಕಾರಣದ ಮಾತುಗಳನ್ನಾಡಿಯೇ ಮತ ಕೇಳಿದ್ದಾರೆ.

ಹೌದು.. ಕೊಪ್ಪಳ ಲೋಕಸಭಾ ಕ್ಷೇತ್ರ ನೀರಾವರಿ ಸಮಸ್ಯೆಯಿಂದ ತೊಳಾಡುತ್ತಿದೆ. ಕೊಪ್ಪಳ ಏತ ನೀರಾವರಿ ಯೋಜನೆ ಪೂರ್ಣಗೊಳಿಸುವೆವು ಎನ್ನುವ ಮಾತಿಗೇನೂ ಕಡಿಮೆ ಇಲ್ಲ. ಆದರೆ ಹನಿ ನೀರು ರೈತನ ಭೂಮಿಗೆ ಬರುತ್ತಿಲ್ಲ. ಕೃಷ್ಣಾ ಬಿ ಸ್ಕಿಂ, ಸಿಂಗಟಾಲೂರು ಏತ ನೀರಾವರಿಯು, ತುಂಗಭದ್ರಾ ಜಲಾಶಯ, ಡ್ಯಾಂನಲ್ಲಿನ ಹೂಳು, ಸಮನಾಂತರ ಜಲಾಶಯದ ಮಾತುಗಳು ಜನರಿಗೆ ಖುಷಿ ತಂದಿವೆ. ಆದರೆ ಈ ಹಿಂದಿನ ಚುನಾವಣೆಗಳಲ್ಲೂ ಇದೇ ಭರವಸೆಗಳು ವ್ಯಕ್ತವಾಗಿದ್ದವು.

ಸ್ಥಳೀಯವಾಗಿ ಸಾಕಷ್ಟು ಸಮಸ್ಯೆಗಳಿವೆ ಆದರು ಕಾಂಗ್ರೆಸ್‌-ಬಿಜೆಪಿಯವರು ಇಲ್ಲಿನ ಸಮಸ್ಯೆಗಳಿಗೆ ಒತ್ತು ನೀಡದೇ ರಾಷ್ಟ್ರ ರಾಜಕಾರಣದ ಮಾತನ್ನಾಡಿದ್ದಾರೆ. ದೇಶದ ರಕ್ಷಣೆ, ಅಭಿವೃದ್ಧಿಗೆ ಮೋದಿ ಬೆಂಬಲಿಸಿ, ಮೋದಿ ಅಧಿಕಾರಕ್ಕೆ ಬಂದ ಮೇಲೆ ಐದು ವರ್ಷದಲ್ಲಿ ಇಡೀ ವಿಶ್ವವೇ ನಮ್ಮತ್ತ ತಿರುಗಿ ನೋಡುವಂತಾಗಿದೆ. ವಿಶ್ವದ ನಾಯಕನಾದ ಮೋದಿ ಅಭಿವೃದ್ಧಿಯನ್ನು ಗಮನಿಸಿ ಸ್ಥಳೀಯ ಅಭ್ಯರ್ಥಿಗಳಿಗೆ ಮತ ನೀಡಿ ಎಂದು ಬಿಜೆಪಿ ನಾಯಕರು ಮೋದಿ ಜಪ ಮಾಡಿದರೆ, ಕಾಂಗ್ರೆಸ್‌ ನಾಯಕರಂತೂ ಮೋದಿ, ಬಿಜೆಪಿಯನ್ನು ತರಾಟೆ ತಗೆದುಕೊಂಡು ಐದು ವರ್ಷದಲ್ಲಿ ಮೋದಿ ಏನೂ ಮಾಡಿಲ್ಲ. ಸುಳ್ಳಿನ ಮನೆ ಕಟ್ಟಿ ಜನರಿಗೆ ಮೋಸ ಮಾಡಿದ್ದಾರೆ. ರೈತ ಸಮುದಾಯಕ್ಕೆ ಯಾವುದೇ ಕೊಡುಗೆಯಿಲ್ಲ. 15 ಲಕ್ಷ ರೂ. ಪ್ರತಿಯೊಬ್ಬರ ಖಾತೆಗೆ ಹಾಕುವ ಮಾತನ್ನಾಡಿದ್ದರು. ಯಾರಿಗೂ ನಯಾಪೈಸೆ ಹಣ ಬಂದಿಲ್ಲ. ನೀರಾವರಿ ಯೋಜನೆಗಳಂತೂ ಗಗನ ಕುಸುಮವಾಗಿವೆ ಎಂದು ಹಳ್ಳಿ ಹಳ್ಳಿಯ ಪ್ರಚಾರದಲ್ಲೂ ಆರ್ಭಟಿಸಿದ್ದಾರೆ.

ಜಾತಿ ರಾಜಕಾರಣವೇ ಹೆಚ್ಚಾಗಿ ಕಂಡು ಬಂದಿದೆ. ಕಾಂಗ್ರೆಸ್‌ ಪಾಳಯದಲ್ಲಿ ಜಾತಿಗೊಬ್ಬರು ಮುಖಂಡರನ್ನು ಕರೆ ಪ್ರಚಾರ ನಡೆಸಲಾಯಿತು. ಕಮಲ ಪಾಳೆಯ ದೇಶ, ರಾಷ್ಟ್ರವಾದ ಸೇರಿದಂತೆ ಮುಸ್ಲಿಂ ನಮಗೆ ಬೆಂಬಲಿಸಲ್ಲ ಎನ್ನುವ ಮಾತನ್ನಾಡಿದೆ.

ಟೀಕೆಗಳಿಗೇನೂ ಕಡಿಮೆ ಇರಲಿಲ್ಲ: ಹಾಲಿ ಸಂಸದ ಸಂಗಣ್ಣ ಕರಡಿ ಜಿಲ್ಲೆಯಲ್ಲಿ 25 ವರ್ಷ ರಾಜಕೀಯದಲ್ಲಿದ್ದಾರೆ. ಅವರು ಏನೂ ಅಭಿವೃದ್ಧಿ ಮಾಡಿಲ್ಲ. ಕಳೆದ 5 ವರ್ಷದಲ್ಲಿ ನಾವು ಅಭಿವೃದ್ಧಿ ಮಾಡಿದ್ದೇವೆ ಎಂದು ಕಾಂಗ್ರೆಸ್‌ ಶಾಸಕ ರಾಘವೇಂದ್ರ ಹಿಟ್ನಾಳ ಟೀಕಾ ಪ್ರಹಾರ ನಡೆಸಿದರೆ, ಸಂಗಣ್ಣ ಕರಡಿ ಅಭಿವೃದ್ಧಿ ಮಾಡಿದ ಕುರಿತು ಪಟ್ಟಿ ಸಮೇತ ಮಾಹಿತಿ ನೀಡುವೆ ಬಹಿರಂಗ ಚರ್ಚೆಗೆ ಬರಲಿ ಎಂದು ಸವಾಲ್ ಎಸೆದಿದ್ದರು. ಅದರಲ್ಲೂ ಭಾಗ್ಯನಗರ ರೈಲ್ವೇ ಗೇಟ್ ವಿಚಾರದಲ್ಲಿ ಕರಡಿ-ಹಿಟ್ನಾಳ ನಡುವೆ ವಾಗ್ವಾದವೇ ನಡೆಯಿತು. ಅಚ್ಚರಿಯ ವಿಷಯವೆಂದರೆ, ಕರಡಿ ಎದುರಾಳಿ ಕಾಂಗ್ರೆಸ್‌ ಅಭ್ಯರ್ಥಿ ರಾಜಶೇಖರ ಹಿಟ್ನಾಳ ಅವರು, ಕರಡಿ ಮೇಲೆ ವೈಯಕ್ತಿಕ ಟೀಕೆ ಮಾಡುವುದಕ್ಕಿಂತ ಕೇಂದ್ರ ಸರ್ಕಾರದ ವೈಫಲ್ಯ ಕುರಿತು ಟೀಕಾ ಪ್ರಹಾರ ನಡೆಸಿದ್ದು, ಗಮನ ಸೆಳೆದಿದೆ.

ಜನರಿಗೆ ನೀರಾವರಿ ಯೋಜನೆಗಳ ಬಗ್ಗೆ ಪ್ರತಿ ಚುನಾವಣೆಯಲ್ಲಿ ಭರವಸೆಗಳ ಸುರಿ ಮಳೆ ಸಿಗುತ್ತಿವೆ. ಆದರೆ ಗೆದ್ದ ಬಳಿಕ ಯಾವುದೇ ಯೋಜನೆಗಳು ಸಕಾಲಕ್ಕೆ ಕಾರ್ಯಗತವಾಗಲ್ಲ ಎನ್ನುವುದು ಜನಸಾಮಾನ್ಯರ ಪ್ರಶ್ನೆಯಾಗಿದೆ. ನಾವು ಅಂದುಕೊಂಡಂತೆ ಅಭಿವೃದ್ಧಿ ಕೆಲಸ ಮಾಡಲ್ಲ. ಬರಿ ಜಾತಿ, ಹಣದ ರಾಜಕಾರಣವೇ ಹೆಚ್ಚಾಗಿದೆ. ಬರದ ನಿವಾರಣೆ, ಜನರು ದುಡಿಮೆ ಇಲ್ಲದೆ ಗುಳೆ ಹೋಗುವುದು ಇವರ ಕಣ್ಣಿಗೆ ಕಾಣಲ್ಲ. ನಮ್ಮದು ಗೋಳಾಟ ಅವರಿಗೆ ಚುನಾವಣಾ ಪ್ರಚಾರದ ಆರ್ಭಟ ಎನ್ನುತ್ತಿದೆ ಜನತೆ.

ದತ್ತು ಕಮ್ಮಾರ

ಟಾಪ್ ನ್ಯೂಸ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19-kushtagi

Kushtagi:ವಿದ್ಯುತ್‌ದೀಪದ ಕಂಬಗಳಿಗೆ ಬಲ್ಬ್ ಅಳವಡಿಸುವ ವೇಳೆ ಅವಘಡ; ಪುರಸಭೆ ಸಿಬ್ಬಂದಿಗೆ ಗಾಯ

11-

Kushtagi: ನಿರೀಕ್ಷಿತ ಫಲಿತಾಂಶ ಬಾರದ ಹಿನ್ನೆಲೆ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ  

Koppala; ಬಿಜೆಪಿಯಲ್ಲಿ ಸೌಜನ್ಯತೆ ಇಲ್ಲವೆನಿಸಿ ಕಾಂಗ್ರೆಸ್ ಸೇರಿದೆ: ಸಂಗಣ್ಣ ಕರಡಿ

Koppala; ಬಿಜೆಪಿಯಲ್ಲಿ ಸೌಜನ್ಯತೆ ಇಲ್ಲವೆನಿಸಿ ಕಾಂಗ್ರೆಸ್ ಸೇರಿದೆ: ಸಂಗಣ್ಣ ಕರಡಿ

Janardhan Reddy; ಸಿದ್ದರಾಮಯ್ಯ ಮೈಸೂರಲ್ಲಿ ಭಿಕ್ಷೆ ಬೇಡುತ್ತಿದ್ದಾರೆ

Janardhan Reddy; ಸಿದ್ದರಾಮಯ್ಯ ಮೈಸೂರಲ್ಲಿ ಭಿಕ್ಷೆ ಬೇಡುತ್ತಿದ್ದಾರೆ

Lok Sabha ಚುನಾವಣೆಯಲ್ಲಿ ಕಾಂಗ್ರೆಸ್ ಎರಡಂಕಿ ಸ್ಥಾನ ಗೆಲ್ಲಲ್ಲ: ಶ್ರೀರಾಮುಲು

Lok Sabha ಚುನಾವಣೆಯಲ್ಲಿ ಕಾಂಗ್ರೆಸ್ ಎರಡಂಕಿ ಸ್ಥಾನ ಗೆಲ್ಲಲ್ಲ: ಶ್ರೀರಾಮುಲು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Davanagere; ಮುಖ್ಯಮಂತ್ರಿ ಜವಾಬ್ದಾರಿಯಿಂದ ಹೇಳಿಕೆ ನೀಡಬೇಕು: ಎಂ.ಪಿ. ರೇಣುಕಾಚಾರ್ಯ

Davanagere; ಮುಖ್ಯಮಂತ್ರಿ ಜವಾಬ್ದಾರಿಯಿಂದ ಹೇಳಿಕೆ ನೀಡಬೇಕು: ಎಂ.ಪಿ. ರೇಣುಕಾಚಾರ್ಯ

ತಂತ್ರಜ್ಞಾನದಿಂದ ಮಾನವ ಜೀವನ ಸುಲಭ: ಸ್ಮಾರ್ಟ್‌ ಸಿಟಿ ಅಧಿಕಾರಿ ಶ್ರೀನಿವಾಸ

ತಂತ್ರಜ್ಞಾನದಿಂದ ಮಾನವ ಜೀವನ ಸುಲಭ: ಸ್ಮಾರ್ಟ್‌ ಸಿಟಿ ಅಧಿಕಾರಿ ಶ್ರೀನಿವಾಸ

Vijayapura; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ : ಸಂಸದ ಜಿಗಜಿಣಗಿ

Vijayapura; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ : ಸಂಸದ ಜಿಗಜಿಣಗಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.