ಗೌಡ್ರಿಗೆ ಕೃಷ್ಣೆ ನೀರು ಹರಿಸುವುದೇ ಸವಾಲ್‌: ಒಂಟಿ ಸಲಗದಂತೆ ಏಕಾಂಗಿ ಹೋರಾಡಬೇಕಿದೆ


Team Udayavani, May 21, 2023, 3:52 PM IST

ಗೌಡ್ರಿಗೆ ಕೃಷ್ಣೆ ನೀರು ಹರಿಸುವುದೇ ಸವಾಲ್‌: ಒಂಟಿ ಸಲಗದಂತೆ ಏಕಾಂಗಿ ಹೋರಾಡಬೇಕಿದೆ

ಕೊಪ್ಪಳ: ಬಹುಪಾಲು ಒಣ ಬೇಸಾಯ ಪ್ರದೇಶವನ್ನೇ ಹೊಂದಿರುವ ಜಿಲ್ಲೆಯ ಕುಷ್ಟಗಿ ವಿಧಾನ ಸಭಾ ಕ್ಷೇತ್ರದಲ್ಲಿ ಬಾಯ್ದೆರೆದ ಭೂಮಿಗೆ ಕೃಷ್ಣೆಯ ನೀರು ಹರಿಯಬೇಕಿದೆ. ಕ್ಷೇತ್ರದ ನೀರಾವರಿಗಾಗಿ ದಶಕಗಳ ಹೋರಾಟವೇ ನಡೆದಿವೆ. ಆದರೂ ಕೃಷ್ಣೆಯು ಕೃಪೆ ತೋರಿಲ್ಲ. ಮೂರನೇ ಬಾರಿಗೆ ಗೆಲುವು ಕಂಡಿರುವ ಕ್ಷೇತ್ರ ಶಾಸಕ ದೊಡ್ಡನಗೌಡ ಪಾಟೀಲರು ಕೃಷ್ಣೆಯ ನೀರು ಹರಿಸುವುದೇ ಸವಾಲ್‌ ಆಗಿದೆ.

ಕುಷ್ಟಗಿ ಕ್ಷೇತ್ರ ಮೊದಲೇ ಬರಪೀಡಿತ ಪ್ರದೇಶ. ಮಳೆಯ ಮೇಲೆಯೇ ಇಲ್ಲಿನ ರೈತಾಪಿ ಕುಟುಂಬಗಳು ಜೀವನ ನಡೆಸಬೇಕಾಗಿವೆ. ಮಳೆಯಾಗದಿದ್ದರೆ ದುಡಿಮೆ ಹರಸಿ ಗುಳೆ ಹೋಗುವುದು ಪ್ರತಿ ವರ್ಷವೂ ನಡೆಯುತ್ತದೆ. ಈ ಕ್ಷೇತ್ರದಲ್ಲಿ ಕೃಷ್ಣಾ ಬಿ ಸ್ಕೀಂ ಯೋಜನೆ ಜಾರಿಗೊಳಿಸಿ ರೈತರ ಭೂಮಿಗೆ ನೀರು ಹರಿಸಿ ಎಂದು ಹಿಂದೆ ಬಹುದೊಡ್ಡ ಹೋರಾಟಗಳೇ ನಡೆದಿವೆ. ಹೋರಾಟಗಾರರಿಗೆ ವಯಸ್ಸಾಗಿದೆಯೇವಿನಃ ನೀರಾವರಿ ಯೋಜನೆಯು ಪೂರ್ಣ
ಕಾರ್ಯಗತವಾಗಿಲ್ಲ.

ಕೃಷ್ಣಾ ನ್ಯಾಯಾಧೀಕರಣದ-2 ತೀರ್ಪಿನ ಅನುಸಾರ ಕರ್ನಾಟಕದ ಪಾಲಿಗೆ ಹಂಚಿಕೆಯಾದ ನೀರಿನಲ್ಲಿ ಕೊಪ್ಪಳ ಏತ ನೀರಾವರಿಗೆ 12 ಟಿಎಂಸಿ ನೀರು ಹಂಚಿಕೆಯಾಗಿದೆ. ಇದು ಸೂಕ್ಷ್ಮ  ನೀರಾವರಿಯಾಗಿದೆ. ವಿಶೇಷವೆಂಬಂತೆ ಆಲಮಟ್ಟಿ ಡ್ಯಾಂನ ಮಟ್ಟವನ್ನು 519ಮೀ. ನಿಂದ 524 ಮೀ.ಗೆ ಎತ್ತರಿಸಿದಾಗ ಮಾತ್ರ ಈ ನೀರು ಕೊಪ್ಪಳ ಏತ ನೀರಾವರಿಗೆ ದೊರೆಯಲಿದೆ. ಈ ಡ್ಯಾಂ ಮಟ್ಟ ಎತ್ತರಿಸುವ ವಾಜ್ಯ ಸುಪ್ರೀಂ ಕೋರ್ಟ್ ನಲ್ಲಿದೆ. ಅಂತಿಮ ಅಧಿಸೂಚನೆ ಹೊರಡಿಸದಂತೆ ತಡೆಯಾಜ್ಞೆಯೂ ಇದೆ. ಈ ತಡೆಯಾಜ್ಞೆ ತೆರವು ಮಾಡಲು ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಸಹಯೋಗದಲ್ಲಿ ಪ್ರಯತ್ನ ಮಾಡಬೇಕಾಗಿದೆ. ಅಂದರೆ ಮಾತ್ರ ಕೊಪ್ಪಳ ಏತ ನೀರಾವರಿ ಸೇರಿ 9 ಯೋಜನೆಗಳಿಗೆ ನೀರು ಲಭ್ಯವಾಗಿದೆ. ಅಲ್ಲಿಯವರೆಗೂ ವ್ಯರ್ಥವಾಗಿ ಹರಿಯುವ ನೀರನ್ನು ಕೆರೆ ತುಂಬಿಸುವ ಯೋಜನೆಯ ಹೆಸರಲ್ಲಿ ಕರ್ನಾಟಕವು ಬಳಕೆ ಮಾಡಬೇಕಾಗಿದೆ.

ಹಿಂದೆ 2013ರಲ್ಲಿ ಜಗದೀಶ ಶೆಟ್ಟರ್‌ ಸಿಎಂ ಆಗಿದ್ದ ವೇಳೆ ಕೊಪ್ಪಳ ಏತ ನೀರಾವರಿಗೆ ಚಾಲನೆಯನ್ನ
ನೀಡಿದ್ದರು. ಆಗ ದೊಡ್ಡನಗೌಡರು ಶಾಸಕರಾಗಿದ್ದರು. ಈಗ ಮತ್ತೆ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಕಳೆದ
2013ರಲ್ಲಿಯೂ ದೊಡ್ಡನಗೌಡರು ಜಿಲ್ಲೆಯಲ್ಲಿ ಏಕೈಕ ಬಿಜೆಪಿ ಶಾಸಕರಾಗಿದ್ದರು. ಈಗಲೂ ಬಿಜೆಪಿಯ ಏಕೈಕ
ಶಾಸಕರಾಗಿದ್ದಾರೆ. ಹಾಗಾಗಿ ಇವರು ಏಕಾಂಗಿಯಾಗಿ ಒಂಟಿ ಸಲಗದಂತೆ ಕೃಷ್ಣೆಯ ನೀರು ಹರಿಸಲು ಸರ್ಕಾರದ ಮಟ್ಟದಲ್ಲಿ ಹೋರಾಟ ಮಾಡಬೇಕಿದೆ. ಇದು ಅವರಿಗೆ ಬಹುದೊಡ್ಡ ಸವಾಲಿನ ವಿಷಯವಾಗಿದೆ. ಇದಲ್ಲದೇ ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರವಿದೆ. ಹಿಂದೆ ಕಾಂಗ್ರೆಸ್‌ ನಾಯಕರೂ ಕೃಷ್ಣೆಯ ಕಡೆಗೆ ನಮ್ಮ ನಡೆಗೆ ಎಂದು ಪಾದಯಾತ್ರೆ ಮಾಡಿ ಕೃಷ್ಣೆಯ ಜಪ ಮಾಡಿದ್ದರು. ಸರ್ಕಾರದ ಮಟ್ಟದಲ್ಲಿ ಗೌಡ್ರು ದೊಡ್ಡ ಹೋರಾಟ
ಮಾಡಬೇಕಾಗಿದೆ. ಸದನದಲ್ಲಿ ಧ್ವನಿ ಎತ್ತಬೇಕಿದೆ. ಸುಪ್ರೀಂ ಕೋರ್ಟ್‌ ತಡೆಯಾಜ್ಞೆ ತೆರವಿಗೆ ಪ್ರಯತ್ನಿಸಬೇಕಿದೆ. ಅಲ್ಲದೇ, ಕೇಂದ್ರದಲ್ಲಿ ಬಿಜೆಪಿ ಸರ್ಕಾರವೇ ಇರುವುದರಿಂದ ಕೇಂದ್ರ ಮಟ್ಟದಲ್ಲಿ ಪ್ರಯತ್ನ ನಡೆಸಬೇಕಾಗಿದೆ.

ಹಲವು ಕೆರೆಗೆ ನೀರು ತುಂಬಿಸುವ ಭರವಸೆ
ಹಿಂದೆ ಕಾಂಗ್ರೆಸ್‌ ಶಾಸಕರಾಗಿದ್ದ ಅಮರೆಗೌಡರು ಕ್ಷೇತ್ರದಲ್ಲಿ ಕೆರೆ ತುಂಬಿಸುವ ಯೋಜನೆಗೆ ಅನುದಾನ
ತಂದಿದ್ದಲ್ಲದೇ, 7 ಕೆರೆಗಳಿಗೆ ನೀರು ತುಂಬಿಸಿದ್ದರು. ಆದರೆ ದೊಡ್ಡನಗೌಡರು ಈಚೆಗೆ ಚುನಾವಣೆಯಲ್ಲಿ 35
ಕೆರೆಗಳಿಗೆ ನೀರು ತುಂಬಿಸುವ ವಾಗ್ಧಾನ ಮಾಡಿದ್ದಾರೆ. ವಾಗ್ಧಾನದಂತೆ ಕೃಷ್ಣೆಯ ನೀರನ್ನೇ ಹರಿಸಿ ಜನರ ನೀರಿನ
ದಾಹ ನೀಗಿಸಬೇಕಾಗಿದೆ. ಬಯಲು ಸೀಮೆಯ ನಾಡಿನ ಕೆರೆಗಳಿಗೆ ನೀರು ಹರಿದಾಗ ಅಂತರ್ಜಲ ಮಟ್ಟ
ಹೆಚ್ಚಳವಾಗಿ ಸುತ್ತಲಿನ ರೈತರ ಬದುಕು ಹಸನಾಗಲಿದೆ. ಕ್ಷೇತ್ರದಲ್ಲಿ ರಸ್ತೆಗಳ ದುರಸ್ತಿಗೂ ದೊಡ್ಡನಗೌಡರು
ಒತ್ತು ಕೊಡಬೇಕಾಗಿದೆ. ಜಿಲ್ಲೆಯಲ್ಲಿ ಇವರೊಬ್ಬರೇ ಬಿಜೆಪಿ ಶಾಸಕರಾಗಿರುವುದರಿಂದ ಎಲ್ಲದಕ್ಕೂ ಏಕಾಂಗಿ
ಹೋರಾಟ ನಡೆಸಬೇಕಾಗಿದೆ. ಕೇಂದ್ರದಲ್ಲಿ ಮೋದಿ ಸರ್ಕಾರ ಅಧಿಕಾರದಲ್ಲಿದ್ದು, ಕೇಂದ್ರ ನಾಯಕರೊಂದಿಗೂ
ಪ್ರಯತ್ನ ನಡೆಸುವ ಉತ್ಸಾಹವನ್ನು ತೋರಬೇಕಾಗಿದೆ.

-ದತ್ತು ಕಮ್ಮಾರ

ಟಾಪ್ ನ್ಯೂಸ್

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

18

ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸುವಂತಹ ನೀಚತನಕ್ಕೆ ಬಿಜೆಪಿ ಇಳಿದಿದೆ-ಚನ್ನರಾಜ ಹಟ್ಟಿಹೊಳಿ

Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ

Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ

ತಾಳಿಭಾಗ್ಯ ಯೋಜನೆ ತಂದ ಕಾಂಗ್ರೆಸ್ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil

ತಾಳಿಭಾಗ್ಯ ಯೋಜನೆ ತಂದ ‘ಕಾಂಗ್ರೆಸ್’ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil

Mumbai Airport: ನ್ಯೂಡಲ್ಸ್‌ ಪ್ಯಾಕೇಟ್‌ ನೊಳಗೆ ಕೋಟ್ಯಂತರ ಮೌಲ್ಯದ ವಜ್ರ ಕಳ್ಳಸಾಗಣೆ!

Mumbai Airport: ನ್ಯೂಡಲ್ಸ್‌ ಪ್ಯಾಕೇಟ್‌ ನೊಳಗೆ ಕೋಟ್ಯಂತರ ಮೌಲ್ಯದ ವಜ್ರ ಕಳ್ಳಸಾಗಣೆ!

ʼದುರ್ಗಿʼಯಾಗಿ ಚಂದನವನಕ್ಕೆ ಕಾಲಿಟ್ಟ ಕಾಲಿವುಡ್‌ ಬೆಡಗಿ: ಡಾಲಿ ಜೊತೆ ರೊಮ್ಯಾನ್ಸ್

ʼದುರ್ಗಿʼಯಾಗಿ ಚಂದನವನಕ್ಕೆ ಕಾಲಿಟ್ಟ ಕಾಲಿವುಡ್‌ ಬೆಡಗಿ: ಡಾಲಿ ಜೊತೆ ರೊಮ್ಯಾನ್ಸ್

ಮಗಳ ಪ್ರಕರಣ ದಿಕ್ಕು ತಪ್ಪುತ್ತಿದೆ ಎಂದಿದ್ದ ನೇಹಾಳ ತಂದೆ ರಾಜ್ಯ ಸರಕಾರದ ಕ್ಷಮೆ ಕೇಳಿದ್ದೇಕೆ?

ಮಗಳ ಪ್ರಕರಣ ದಿಕ್ಕು ತಪ್ಪುತ್ತಿದೆ ಎಂದಿದ್ದ ನೇಹಾಳ ತಂದೆ ರಾಜ್ಯ ಸರಕಾರದ ಕ್ಷಮೆ ಕೇಳಿದ್ದೇಕೆ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Parameshwar

Dr.G. Parameshwara ಅವರ ಜಾತಿ ನಿಂದನೆ; ಬೀದರ್ ವ್ಯಕ್ತಿ ವಿರುದ್ಧ ಕೇಸ್

Minchu

Rain; ಬೀದರ್,ಕೊಪ್ಪಳದಲ್ಲಿ ಸಿಡಿಲಿನ ಆರ್ಭಟಕ್ಕೆ ಇಬ್ಬರು ಮೃತ್ಯು

Neha Hiremath Case; Protest by BJP-JDS-ABVP across the state

Neha Hiremath Case; ಬಿಜೆಪಿ-ಜೆಡಿಎಸ್-ಎಬಿವಿಪಿಯಿಂದ ರಾಜ್ಯದೆಲ್ಲೆಡೆ ಪ್ರತಿಭಟನೆ

Gangavathi; ಪರಾರಿಯಾಯ್ತು ಮೇಕೆ ಹಿಡಿಯಲು ಬಂದು ಸೆರೆಯಾಗಿದ್ದ ಚಿರತೆ

Gangavathi; ಪರಾರಿಯಾಯ್ತು ಮೇಕೆ ಹಿಡಿಯಲು ಬಂದು ಸೆರೆಯಾಗಿದ್ದ ಚಿರತೆ

crime (2)

Koppal: ಕಾಣೆಯಾಗಿದ್ದ 7 ವರ್ಷದ ಬಾಲಕಿ ಶವವಾಗಿ ಪತ್ತೆ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

18

ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸುವಂತಹ ನೀಚತನಕ್ಕೆ ಬಿಜೆಪಿ ಇಳಿದಿದೆ-ಚನ್ನರಾಜ ಹಟ್ಟಿಹೊಳಿ

Belagavi Lok sabha: ಧರ್ಮಯುದ್ಧಕ್ಕಿಂತ ಮೊದಲೇ ದಿಂಗಾಲೇಶ್ವರ ಶ್ರೀ ಶಸ್ತ್ರತ್ಯಾಗ!

Belagavi Lok sabha: ಧರ್ಮಯುದ್ಧಕ್ಕಿಂತ ಮೊದಲೇ ದಿಂಗಾಲೇಶ್ವರ ಶ್ರೀ ಶಸ್ತ್ರತ್ಯಾಗ!

Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ

Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ

ತಾಳಿಭಾಗ್ಯ ಯೋಜನೆ ತಂದ ಕಾಂಗ್ರೆಸ್ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil

ತಾಳಿಭಾಗ್ಯ ಯೋಜನೆ ತಂದ ‘ಕಾಂಗ್ರೆಸ್’ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.