ಕ್ಷೀಣಿಸುತ್ತಿದೆ ಗುರುವಿಗೆ ಗೌರವ ನೀಡುವ ಮನೋಭಾವ


Team Udayavani, Apr 8, 2019, 1:58 PM IST

kopp-1
ಯಲಬುರ್ಗಾ: ಗುರುವಿಗೆ ಗೌರವ ನೀಡುವ ಮನೋಭಾವ ಕಡಿಮೆಯಾಗುತ್ತಿದೆ. ಜತೆಗೆ ಯವಕರಲ್ಲಿ ದೇಶ, ಭಾಷೆ, ನೆಲ, ಜಲದ ಬಗ್ಗೆ ಅಭಿಮಾನ ಕಡಿಮೆಯಾಗುತ್ತಿದ್ದು, ಇಂತಹ ಅಂಶಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯವನ್ನು ಮಠ,
ಮಂದಿರಗಳಲ್ಲಿ ನಡೆಯುವ ಶಿವಾನುಭವ ಗೋಷ್ಠಿ ಕಾರ್ಯಕ್ರಮಗಳಿಂದ ಮಾಡಿದರೇ ಸಾಮಾಜಿಕ ಬದಲಾವಣೆ ಸಾಧ್ಯವಾಗುತ್ತದೆ ಎಂದು ತೊಳಲಿ ಕುಮಾರಸ್ವಾಮಿ ಶಾಸ್ತ್ರಿಗಳು ಹೇಳಿದರು.
ತಾಲೂಕಿನ ದಮ್ಮೂರು ಗ್ರಾಮದ ಶ್ರೀಭೀಮಾಂಬಿಕಾದೇವಿ ದೇವಸ್ಥಾನದ ಸಭಾಭವನದಲ್ಲಿ ನಡೆದ 299ನೇ ಮಾಸಿಕ
ಶಿವಾನುಭವಗೋಷ್ಠಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ರಾಜರು ಮಣ್ಣನು ಆಳಿದರೆ, ಮಹಾತ್ಮರು ಮನಸ್ಸನ್ನು ಆಳುತ್ತಾರೆ. ಮನುಷ್ಯ ಹೂವಿನ ಹಾಗೆ ಸುಂದರ ಬದುಕು ಸಾಗಿಸಿ ಸತ್ಕಾರ್ಯಗಳ ಮೂಲಕ ಸಾರ್ಥಕತೆ ಪಡೆಯಬೇಕು. ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ ಆಗಿದೆ. ಕೆರೆ ಹೂಳೆತ್ತುವ, ಇಂಗು ಗುಂಡಿಗಳ ನಿರ್ಮಾಣ, ಚೆಕ್‌ ಡ್ಯಾಂಗಳ ನಿರ್ಮಾಣದ ಮೂಲಕ ಜಲಕ್ಷಾಮದ ನಿವಾರಣೆಗೆ ಪ್ರಯತ್ನಿಸಬೇಕಾದ ಅವಶ್ಯಕತೆ ಇದೆ. ಆ ದಿಸೆಯಲ್ಲಿ ಸರ್ವರು ಕಾರ್ಯ ಪ್ರವೃತ್ತರಾಗಿ ನಮ್ಮ ಪರಿಸರ ನೆಲ, ಜಲ, ಸಂರಕ್ಷಿಸುವಲ್ಲಿ ಪಾಲುದಾರರಾಗಬೇಕೆಂದು ಹೇಳಿದರು.
ದಮ್ಮೂರು ಶ್ರೀಮಠದ ಒಡೆಯರಾದ ಹನುಮಂತಪ್ಪಜ್ಜ ಧರ್ಮರಮಠ ಮಾತನಾಡಿ, ತಂದೆ ತಾಯಿ, ಗುರು-ಹಿರಿಯರನ್ನು, ವೃದ್ಧರನ್ನು, ಅನಾಥರನ್ನು ಪ್ರೀತಿಯಿಂದ ಕಾಣುವ ಮನುಷ್ಯರಿದ್ದ ಗ್ರಾಮ ಸುಭಿಕ್ಷೆಯಿಂದ ಇರುತ್ತದೆ. ಇಂದಿನ ಆಧುನಿಕತೆಯ ಜಗತ್ತು, ಕಾಯಕವು ಆಡಂಬರದಿಂದ ಕೂಡಿದ್ದು, ಭಕ್ತಿ, ಪೂಜೆ, ಪ್ರಸಾದ ಡಾಂಬಿಕತೆಯಿಂದ ಕೂಡಿವೆ. ತಾವು ಮಾಡುವ ಕೆಲಸವನ್ನು ಪೂಜೆ ಎಂದು, ಊಟವನ್ನು ಪ್ರಸಾದವೆಂದು ಸ್ವೀಕರಿಸಬೇಕು. ಅಂದಾಗ ನಾಡಿನ ಬಡತನ, ಧಾರಿದ್ರ್ಯ, ಮೂಢನಂಬಿಕೆ ದೂರವಾಗಿ ಆಡಂಬರದ ಬದಕು ಕೊನೆಯಾಗುತ್ತದೆ.
ಹಬ್ಬ-ಹರಿದಿನಗಳಲ್ಲಿ ಅನಾವಶ್ಯಕ ಹಣ ಖರ್ಚು ಮಾಡಿ ತಿನ್ನುವ ಆಹಾರವನ್ನು ಚೆಲ್ಲುವುದು ಸೂಕ್ತವಲ್ಲ. ಇದರ ಬದಲಾಗಿ ಬಡವರಿಗೆ ದಾನ ಮಾಡಬೇಕು ಎಂದರು. ಕಣ್ಣಿಗೆ ಕಾಣದ ಹೃದಯದಲ್ಲಿ ನೆಲೆಸಿರುವ ಜ್ಞಾನ ಪ್ರತೀಕವೇ ಗುರು, ಹೃದಯಪೂರ್ವಕವಾಗಿ ಯಾರು ಆತನನ್ನು ಆರಾಧಿಸಿ ಪೂಜಿಸುತ್ತಾರೊ ಅವರಿಗೆ ಗುರು ಕೃಪೆಯಾಗುತ್ತದೆ. ಕಾಲದ ಮೀತಿ ಅರಿತುಕೊಂಡು ಬಾಳುವ ಮೂಲಕ ಜೀವನವನ್ನು ಉನ್ನತೀಕರಿಸಿಕೊಳ್ಳಬೇಕು ಎಂದರು. ಶರಣಯ್ಯ ಹಿರೇಮಠ, ರಮೇಶ ಪೂಜಾರ್‌, ಬಾಲಪ್ಪ ಜರಕುಂಟಿ, ಬಸವರಾಜ ಮೇಲಸಕ್ರಿ, ಮೌನೇಶ ಬಡಿಗೇರ, ಸಂತೋಷ ಹಿರೇಮಠ, ಈರಪ್ಪ ರ್ಯಾವಣಕಿ, ಭೀಮಪ್ಪ ಜರಕುಂಟಿ, ವೀರಭದ್ರಪ್ಪ ಬಡಿಗೇರ ಇತರರಿದ್ದರು.

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

ಗಂಗಾವತಿ: ನೇಮಕಾತಿ ಪರೀಕ್ಷೆಗೆ ವೆಬ್‌ ಕಾಸ್ಟಿಂಗ್‌ ಜಾರಿಯಾಗಲಿ

ಗಂಗಾವತಿ: ನೇಮಕಾತಿ ಪರೀಕ್ಷೆಗೆ ವೆಬ್‌ ಕಾಸ್ಟಿಂಗ್‌ ಜಾರಿಯಾಗಲಿ

Parameshwar

Dr.G. Parameshwara ಅವರ ಜಾತಿ ನಿಂದನೆ; ಬೀದರ್ ವ್ಯಕ್ತಿ ವಿರುದ್ಧ ಕೇಸ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.