ಗಂಡ ದುಡಿಯಲಿಲ್ಲ ಎಂದು ಹೆತ್ತ ಮಗನನ್ನೆ ಕೊಂದ ತಾಯಿ
Team Udayavani, Sep 10, 2019, 10:39 AM IST
ಕೊಪ್ಪಳ : ಗಂಡ ದುಡಿಯಲಿಲ್ಲ ಎಂದು ಹೆತ್ತ ಮಗನನ್ನೇ ತಾಯಿಯೋರ್ವಳು ಕೊಂದ ಹೃದಯವಿದ್ರಾವಕ ಘಟನೆ ಜಿಲ್ಲೆಯ ಕಾರಟಗಿ ತಾಲೂಕಿನ ಸೋಮನಾಳ ಗ್ರಾಮದಲ್ಲಿ ನಡೆದಿದೆ.
ಕವಿತಾ ಅಲಿಯಾಸ್ ಪ್ರತಿಮಾ ಮಗನನ್ನು ಕೊಂದ ತಾಯಿ. ಅಭಿನವ ಮೃತಪಟ್ಟ 16 ತಿಂಗಳ ಕಂದಮ್ಮ.
ಗಂಡ ದುಡಿಯಲಿಲ್ಲ ಎಂಬ ಸಿಟ್ಟಿಗೆ ಈಕೆ ತಾನು ಹೆತ್ತ ಮಗನನ್ನೇ ಉಸಿರುಗಟ್ಟಿಸಿ ಕೊಂದು ಹಾಕಿದ್ದಾಳೆ. ಸೋಮವಾರ ಗಂಡ ಪೆಟ್ರೋಲ್ ಬಂಕ್ಗೆ ತೆರಳಿದಾಗ ಈ ಘಟನೆ ನಡೆದಿದೆ.
ಬೆಳಿಗ್ಗೆ ಮಗನ ಕೊಲೆ ಮಾಡಿ ಸಂಜೆವರೆಗೂ ಕಣ್ಣೀರು ಹಾಕದೆ ಕವಿತಾ ಕುಳಿತಿದ್ದಳು ಎನ್ನಲಾಗಿದೆ. ಗಂಡ ಸಂಜೆ ಮನೆಗೆ ಬಂದಾಗಲೇ ಆತನಿಗೆ ಮಗ ಸತ್ತಿರುವ ವಿಷಯ ತಿಳಿದಿತ್ತು.
ಕವಿತಾ ಈ ಹಿಂದೆ ಎರಡು ಮೂರು ಬಾರಿ ಕವಿತಾ ಆತ್ಮಹತ್ಯೆಗೆ ಯತ್ನಿಸಿದ್ದರು ಎಂದು ತಿಳಿದುಬಂದಿದೆ.
ಕಾರಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಕವಿತಾಳನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.