ಪೈಪ್ಲೈನ್ ವಾಲ್ವ್ ಒಡೆದು ಅಪಾರ ಹಾನಿ
Team Udayavani, Sep 6, 2019, 12:17 PM IST
ಕುಷ್ಟಗಿ: ಗುರಪ್ಪ ಕೋತ್ನಿ ಅವರ ಜಮೀನಿನಲ್ಲಿ ಜಿಂದಾಲ್ ಕೊಳವೆ ಮಾರ್ಗದ ವಾಲ್ವ್ ಒಡೆದು ಆಳೆತ್ತರಕ್ಕೆ ಚಿಮ್ಮಿದ ನೀರು.
ಕುಷ್ಟಗಿ: ಆಲಮಟ್ಟಿ ಜಲಾಶಯದಿಂದ ಕೃಷ್ಣಾ ನದಿ ನೀರು ಜಿಂದಾಲ್ ಕೈಗಾರಿಕೆ ಸಮೂಹಕ್ಕೆ ಸರಬರಾಜಾಗಿರುವ ಬೃಹತ್ ಕೊಳವೆ ಮಾರ್ಗದ ವಾಲ್ವ್ ಒಡೆದ ಪರಿಣಾಮ ಅಪಾರ ಪ್ರಮಾಣದಲ್ಲಿ ನೀರು ಪೋಲಾಗುತ್ತಿದ್ದು, ಜಮೀನಿನ ಫಲವತ್ತಾದ ಮಣ್ಣು ಹಳ್ಳ ಸೇರಿದೆ.
ಜಿಂದಾಲ್ ಕೊಳವೆ ಮಾರ್ಗದ ವಾಲ್ವ್ ಒಡೆಯುವಿಕೆ ತಿಂಗಳಲ್ಲಿ ಇದು ಎರಡನೇ ಬಾರಿ. ಜುಲೈ 9ರಂದು ಇದೇ ಮಾರ್ಗದ ಮುಂದಿನ ಭಾಗದ ರೇಣಮ್ಮ ಕಂದಗಲ್ ಅವರ ಜಮೀನಿನಲ್ಲಿದ್ದ ವಾಲ್ವ್ ಒಡೆದು, ಅಪಾರ ಪ್ರಮಾಣದಲ್ಲಿ ನೀರು ಹಳ್ಳಕ್ಕೆ ಹರಿದಿತ್ತು. ಆ ಘಟನೆ ಮಾಸುವ ಮುನ್ನವೇ ಬುಧವಾರ ತಡರಾತ್ರಿ 12ಕ್ಕೆ ಪಟ್ಟಣದ ಹೊರವಲಯದ ಟೆಂಗುಂಟಿ ರಸ್ತೆಯ ಗುರಪ್ಪ ಕೋತ್ನಿ ಅವರ ಜಮೀನಿನಲ್ಲಿ ವಾಲ್ವ್ ಒಡೆದಿದ್ದು, ಸುಮಾರು 10 ಅಡಿವರೆಗೂ ನೀರು ಚಿಮ್ಮಿ, ಅಪಾರ ಪ್ರಮಾಣ ನೀರು ಪೋಲಾಗಿದೆ. ರೈತರಿಗೆ ವಾಲ್ವ್ ಒಡೆದಿರುವ ಕುರಿತು ಜಿಂದಾಲ್ ಪೈಪ್ಲೈನ್ ಉಸ್ತುವಾರಿ ಸಿಬ್ಬಂದಿ ಗಮನಕ್ಕೆ ತಂದರು.
ವಾಲ್ವ್ ಬಂದ್ಗೆ ತಡೆದು ಆಕ್ರೋಶ: ಕುಷ್ಟಗಿ ಸೀಮಾದ ಗುರಪ್ಪ ಕೋತ್ನಿ ಅವರ ಜಮೀನಿಗೆ ದೌಡಾಯಿಸಿದ ಜಿಂದಾಲ್ ಪೈಪ್ಲೈನ್ ಮೇಲುಸ್ತುವಾರಿ ಸಿಬ್ಬಂದಿ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದರು. ನಂತರ ಜಿಂದಾಲ್ ಪೈಪ್ಲೈನ್ ನಿರ್ವಹಣೆ ಸಿಬ್ಬಂದಿ ಮೇಲಾಧಿಕಾರಿಗಳೊಂದಿಗೆ ಚರ್ಚಿಸಿ, ರೈತರ ಬೇಡಿಕೆಗೆ ಅನುಗುಣವಾಗಿ ಪರಿಹಾರ, ಜೊತೆಗೆ ಕೊಚ್ಚಿ ಹೋದ ಮಣ್ಣು ತಂದು ಹಾಕುವ ಹಾಗೂ ಜಮೀನು ದಾರಿ, ಬೆಳೆ ಪರಿಹಾರದ ಭರವಸೆ ನಂತರ ವಾಲ್ವ್ ಬಂದ್ ಮಾಡಲು ಅವಕಾಶ ಕಲ್ಪಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Raids: ಕೊಪ್ಪಳ ಕೃಷಿ ಇಲಾಖೆ ಉಪ ನಿರ್ದೇಶಕ ಸಹದೇವ ಯರಗುಪ್ಪಾ ಮನೆ ಮೇಲೆ ಲೋಕಾಯುಕ್ತ ದಾಳಿ
Koppala; ಶಿವರಾಜ ತಂಗಡಗಿ ಹೇಳಿಕೆಯನ್ನು ಬಿಜೆಪಿ ತಿರುಚಿದೆ: ಕೃಷ್ಣಾ ಇಟ್ಟಂಗಿ
Koppal Lok Sabha constituency; ಲಿಂಗಾಯತ, ಅಹಿಂದ ಮತಗಳೇ ಇಲ್ಲಿ ನಿರ್ಣಾಯಕ
Koppala: ಮೋದಿ ಮೋದಿ ಎಂದರೆ ಕಪಾಳಕ್ಕೆ ಹೊಡಿಯಿರಿ ಎಂದ ಸಚಿವ ತಂಗಡಗಿ ವಿರುದ್ಧ ಪ್ರಕರಣ ದಾಖಲು
“Modi ಜಪಿಸುವ ವಿದ್ಯಾರ್ಥಿಗಳ ಕಪಾಳಕ್ಕೆ ಹೊಡೆಯಿರಿ’: ಶಿವರಾಜ ತಂಗಡಗಿ
MUST WATCH
ಹೊಸ ಸೇರ್ಪಡೆ
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ
Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು
Politics: ಚಿತ್ರದುರ್ಗ ರಾಜಕೀಯ ನಿರಾಶ್ರಿತರ ಕೇಂದ್ರವೇ?: ರಘುಚಂದನ್
PSI re-examination: ಪಿಎಸ್ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ