ಶ್ರೀಕೃಷ್ಣದೇವರಾಯ ವಿವಿ ಎಡವಟ್ಟು: ಶೇ. 30 ರಷ್ಟು ಬಿಎಸ್ಸಿ ವಿದ್ಯಾರ್ಥಿಗಳು ಪರೀಕ್ಷೆಗೆ ಗೈರು
ಮರು ಪರೀಕ್ಷೆಗೆ ಆಗ್ರಹ
Team Udayavani, Apr 9, 2022, 1:09 PM IST
ಗಂಗಾವತಿ: ಬಳ್ಳಾರಿಯ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ಒಂದಿಲ್ಲೊಂದು ಎಡವಟ್ಟಿನಿಂದ ಹೆಸರಾಗಿದೆ. ಇದೀಗ ಪದವಿ ಪರೀಕ್ಷೆ ನಡೆಸುವ ಸಂಬಂಧ ದಿನಾಂಕ ಅದಲು ಬದಲು ಮಾಡಿ ವಿದ್ಯಾರ್ಥಿಗಳಲ್ಲಿ ಗೊಂದಲ ಮೂಡಿಸಿದ್ದು ಶೇ.30 ರಷ್ಟು ವಿದ್ಯಾರ್ಥಿಗಳು ಬಿಎಸ್ಸಿ ಗಣಿತ ಪರೀಕ್ಷೆಯಿಂದ ಹೊರಗೆ ಉಳಿಯುವಂಥಾಗಿದೆ.
ಏಪ್ರಿಲ್ 09 ರಂದು ನಡೆಯಬೇಕಿದ್ದ ಬಿಎಸ್ಸಿ ಮೂರನೆಯ ಸೆಮಿಸ್ಟರ್ ಗಣಿತ ವಿಷಯವನ್ನು ಮುಂಚಿತವಾಗಿಯೇ ಏಪ್ರಿಲ್ ಎಂಟರಂದು ನಡೆಸಲಾಗಿದೆ ಈ ಕುರಿತು ವಿವಿಯವರು ಏ 04 ರಂದು ನೋಟಿಸ್ ಜಾರಿ ಮಾಡಿದ್ದು ಇದನ್ನು ವಿದ್ಯಾರ್ಥಿಗಳಿಗೆ ತಲುಪಿಸುವಲ್ಲಿ ವಿಫಲವಾಗಿದೆ . ಇದರಿಂದಾಗಿ ಏಪ್ರಿಲ್ 8ರಂದು ಬಿಎಸ್ಸಿ ಗಣಿತ ಮೂರನೆಯ ಸೆಮಿಸ್ಟರ್ ವಿಷಯದಲ್ಲಿ ಪರೀಕ್ಷೆ ಬರೆಯಬೇಕಿದ್ದ ವಿದ್ಯಾರ್ಥಿಗಳ ಪೈಕಿ ಶೇ.30 ರಷ್ಟು ವಿದ್ಯಾರ್ಥಿಗಳು ಗೈರಾಗಿದ್ದಾರೆ.
ಮೊಬೈಲ್ ಇಲ್ಲದ ಮತ್ತು ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಬಿಎಸ್ಸಿ ಗಣಿತ ಪರೀಕ್ಷೆಗೆ ಗೈರಾಗಿದ್ದಾರೆ ಇದರಿಂದ ಅವರ ಭವಿಷ್ಯದಲ್ಲಿ ಆತಂಕ ಮೂಡಿದೆ ವಿವಿಯವರು ಕೂಡಲೇ ವಿದ್ಯಾರ್ಥಿಗಳ ಗಮನಕ್ಕೆ ತಂದು ಮರು ಪರೀಕ್ಷೆ ನಡೆಸುವಂತೆ ಬಳ್ಳಾರಿ ಶ್ರೀಕೃಷ್ಣದೇವರಾಯ ವಿವಿಯ ವಿದ್ಯಾ ವಿಷಯಕ ಪರಿಷತ್ ಸದಸ್ಯ ಹಾಗೂ ಉಪನ್ಯಾಸಕ ಶಿವಾನಂದ ಮೇಟಿ ಒತ್ತಾಯಿಸಿದ್ದಾರೆ .
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗಂಗಾವತಿ: ನೇಮಕಾತಿ ಪರೀಕ್ಷೆಗೆ ವೆಬ್ ಕಾಸ್ಟಿಂಗ್ ಜಾರಿಯಾಗಲಿ
Dr.G. Parameshwara ಅವರ ಜಾತಿ ನಿಂದನೆ; ಬೀದರ್ ವ್ಯಕ್ತಿ ವಿರುದ್ಧ ಕೇಸ್
Rain; ಬೀದರ್,ಕೊಪ್ಪಳದಲ್ಲಿ ಸಿಡಿಲಿನ ಆರ್ಭಟಕ್ಕೆ ಇಬ್ಬರು ಮೃತ್ಯು
Neha Hiremath Case; ಬಿಜೆಪಿ-ಜೆಡಿಎಸ್-ಎಬಿವಿಪಿಯಿಂದ ರಾಜ್ಯದೆಲ್ಲೆಡೆ ಪ್ರತಿಭಟನೆ
Gangavathi; ಪರಾರಿಯಾಯ್ತು ಮೇಕೆ ಹಿಡಿಯಲು ಬಂದು ಸೆರೆಯಾಗಿದ್ದ ಚಿರತೆ