ದೇಶಕ್ಕೆ ವಿಶ್ವೇಶ್ವರಯ್ಯ ಕೊಡುಗೆ ಅಪಾರ
Team Udayavani, Sep 16, 2018, 4:31 PM IST
ಕುಷ್ಟಗಿ: ಉದಾರೀಕರಣ, ಖಾಸಗೀಕರಣದ ಸಂದರ್ಭದಲ್ಲಿ ವೈಜ್ಞಾನಿಕ ಚಿಂತನೆಗಳು ರೂಢಿಸಿಕೊಂಡು ಮುಂದುವರಿದಾಗ ಮಾತ್ರ ವಿದ್ಯಾರ್ಥಿಯ ಬದುಕು ಸಾರ್ಥಕವಾಗುತ್ತದೆ ಪ್ರಾಚಾರ್ಯರಾದ ಬಿ.ಎಂ. ಕಂಬಳಿ ಹೇಳಿದರು. ಇಲ್ಲಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸರ್.ಎಂ ವಿಶ್ವೇಶ್ವರಯ್ಯ ಅವರ ಜನ್ಮದಿನಾಚರಣೆ ಹಾಗೂ ಪ್ರಥಮ ವರ್ಷದ ಬಿಎ. ಬಿಕಾಂ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ಅವರು ಮಾತನಾಡಿದರು. ಒಬ್ಬ ವ್ಯಕ್ತಿಯನ್ನು ಹಾಳು ಮಾಡಲು ಅಥವಾ ಅವನತಿ ಹೊಂದಲು ನೂರಾರು ಜನ ಬೇಕಾಗಿಲ್ಲ. ಅವನ ಕೈಯಲ್ಲಿರುವ ವಸ್ತುವೇ ಸಾಕು. ಸರ್. ಎಂ. ವಿಶ್ವೇಶ್ವರಯ್ಯನವರು ದೇಶ ಕಂಡಂತಹ ಅಪರೂಪದ ವ್ಯಕ್ತಿ. ಸಾಧಕ, ದೇಶ ಪ್ರೇಮಿ, ಛಲಗಾರ, ಕ್ರಿಯಾಶೀಲ ಅಭಿಯಂತರರು ಅವರಂತೆ ಮತ್ತೊಬ್ಬರಿಲ್ಲ ಎಂದು ಹೇಳಿದರು.
ಕನ್ನಡ ಉಪನ್ಯಾಸಕ ಡಾ| ಈರಣ್ಣ ಹುರಳಿ ಮಾತನಾಡಿ, ಗುರುಶಿಷ್ಯರ ಪರಂಪರೆ ನೀರು ಲವಣದಂತಿರಬೇಕು. ಸರ್. ಎಂ. ವಿಶ್ವೇಶ್ವರಯ್ಯರ ಜನ್ಮದಿನಾಚರಣೆ ಸಂದರ್ಭದಲ್ಲಿಯೇ ಸಂಸ್ಥೆಗೆ ಪ್ರವೇಶ ಪಡೆದ ಕಿರಿಯ ವಿದ್ಯಾರ್ಥಿಗಳನ್ನು ಹಿರಿಯ ವಿದ್ಯಾರ್ಥಿಗಳು ಸ್ವಾಗತಿಸುವ ಸಂಪ್ರದಾಯ ಮುಂದುವರಿಯಲಿ ಎಂದರು. ವಿದ್ಯಾರ್ಥಿ ಗುರುವಿನಲ್ಲಿ ಲೀನವಾದಾಗ ಅವನ ಬದುಕು ಶ್ರೇಷ್ಠವಾಗುತ್ತದೆ ಎಂದರು.
ಉಪನ್ಯಾಸಕರಾದ ಎಂ. ಗವಾರಿ, ರತ್ನಾ ಬೆದವಟ್ಟಿ, ಭೀಮಣ್ಣ, ಫಕೀರಪ್ಪ, ಅಮರೇಶ ಕುಂಬಾರ, ವಿಶ್ವನಾಥ ತೊಂಡಿಹಾಳ, ಶಿಲ್ಪಾ ಪಾಟೀಲ, ಮಂಜುನಾಥ ಕಮ್ಮಾರ, ಮುತ್ತಣ್ಣ ಪಾಟೀಲ ಸಭೆಯಲ್ಲಿ ಉಪಸ್ಥಿತರಿದ್ದರು. ಪೂಜಾ ಮತ್ತು ಶೋಭಾ ಹಿರೇಮನಿ ಪ್ರಾರ್ಥಿಸಿದರು. ಭೀಮವ್ವ ಮತ್ತು ಸುನೀಲಕುಮಾರ ಮಡಿವಾಳರ ಕಾರ್ಯಕ್ರಮ ನಿರ್ವಹಿಸಿದರು. ಅಂಬಣ್ಣ ಚೂರಿ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಕ್ರಿಕೆಟ್ ಬಗ್ಗೆ ಕಿಂಚಿತ್ತೂ ಜ್ಞಾನವಿಲ್ಲದ ವ್ಯಕ್ತಿಗೆ ಡ್ರೀಮ್11ನಲ್ಲಿ ಒಲಿಯಿತು 1.5 ಕೋಟಿ
IPL; ಸ್ಟಾಯಿನಿಸ್ ಏಟಿಗೆ ತವರಲ್ಲೆ ಚಾಂಪಿಯನ್ ಚೆನ್ನೈ ಠುಸ್!
Congress vs BJP; ಬ್ರಹ್ಮಾವರದಲ್ಲಿ ಶಕ್ತಿ ಪ್ರದರ್ಶನದ ವೇದಿಕೆ!
Shikaripur; ಸಂಭ್ರಮದ ಹುಚ್ಚರಾಯಸ್ವಾಮಿ ಬ್ರಹ್ಮ ರಥೋತ್ಸವ:ಯಡಿಯೂರಪ್ಪ ಕುಟುಂಬ ಭಾಗಿ
Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ