ನಗರಸಭೆ ನೌಕರರ ಕೈಗೆ ವಾಕಿ-ಟಾಕಿ

ಆಡಳಿತ ಚುರುಕುಗೊಳಿಸಲು ಹೊಸಯತ್ನ|ಮೇಲುಸ್ತುವಾರಿ 40 ನೌಕರರಿಗೆ ವಾಕಿ-ಟಾಕಿ

Team Udayavani, Mar 19, 2021, 9:25 PM IST

fgw

ಕೊಪ್ಪಳ: ಮೊದಲೆಲ್ಲಾ ಪೊಲೀಸರ ಕೈಯಲ್ಲಿ ಕಾಣುತ್ತಿದ್ದ ವೈಯರ್‌ಲೆಸ್‌ ವಾಕಿ-ಟಾಕಿ ಇನ್ಮುಂದೆ ನಗರಸಭೆ ನೌಕರರ ಕೈಯಲ್ಲೂ ಜನರು ಕಾಣಬಹುದಾಗಿದೆ.

ವಾರ್ಡಿನ ಸಮಸ್ಯೆ, ಕುಡಿಯುವ ನೀರಿನ ಸಮಸ್ಯೆ, ಕಡತಗಳ ಸಮಸ್ಯೆ, ಪೆಂಡಿಂಗ್‌ ವರ್ಕ್‌ ಸೇರಿ ಯಾವುದೇ ಸಮಸ್ಯೆಯಿದ್ದರೂ ಪೌರಾಯುಕ್ತರು ನೇರವಾಗಿಯೇ ನೌಕರರಿಗೆ ವಾಕಿ-ಟಾಕಿಯಲ್ಲಿ ಮಾಹಿತಿ ಪಡೆಯಬಹುದು. ಸಮಸ್ಯೆ ಇತ್ಯರ್ಥಕ್ಕೆ ಇದೊಂದು ಸುಲಲಿತ ಮಾರ್ಗವಾಗಿದೆ. ನಗರಸಭೆ ಆಡಳಿತ ಯಂತ್ರ ಚುರುಕುಗೊಳಿಸಲು, ಜನರಿಗೆ ಸಕಾಲಕ್ಕೆ ಸಮಸ್ಯೆ ನಿವಾರಣೆಗೆ ಮುಂದಾಗಲು ಪೌರಾಯುಕ್ತ ಮಂಜುನಾಥ ಅವರು ಹೊಸದೊಂದು ಪ್ರಯತ್ನಕ್ಕೆ ಮುಂದಾಗಿ ಎಲ್ಲರ ಗಮನ ಸೆಳೆದಿದ್ದಾರೆ.

ಇತ್ತೀಚೆಗೆ ದಿನದಲ್ಲಿ ಎಲ್ಲೆಡೆ ಆಡಳಿತ ವರ್ಗ ಜಿಡ್ಡುಗಟ್ಟಿದೆ. ಯಾವುದೇ ಕೆಲಸಗಳು ಸರಿಯಾಗಿ ನಡೆಯಲ್ಲ. ವಾರ್ಡಿನ ಸಮಸ್ಯೆಗಳನ್ನು ಕೇಳುವವರೇ ಇಲ್ಲ ಎನ್ನುವ ಆರೋಪ, ದೂರು ನಗರದಲ್ಲಿ ಸಹಜವಾಗಿ ಕೇಳಿ ಬರುತ್ತಿವೆ. ವಾರ್ಡ್‌ನಲ್ಲಿ ನಾಯಿ, ಹಂದಿ ಸತ್ತರೂ ಕಾರ್ಮಿಕರು ಅದನ್ನು ತೆಗೆದು ಹಾಕಲು ನಾಲ್ಕಾರು ದಿನ ತೆಗೆದುಕೊಳ್ಳುತ್ತಾರೆ. ಕುಡಿಯುವ ನೀರು ಪೂರೈಕೆಯಲ್ಲೂ ಇಂತಹ ಸಮಸ್ಯೆ ಇದೆ.

ಇನ್ನೂ ಮೇಲಾಧಿಕಾರಿಗಳು ತಮ್ಮ ಕಚೇರಿ ಸಿಬ್ಬಂದಿ, ಮೇಲುಸ್ತುವಾರಿಗೆ ಮೊಬೈಲ್‌ ಮೂಲಕ ಕರೆ ಮಾಡಿದರೆ ಒಂದಿಲ್ಲೊಂದು ಕಾರಣ ಹೇಳುವುದು. ಕೆಲವರು ಮೊಬೈಲ್‌ ಸ್ವಿಚ್‌ಆಫ್‌ ಮಾಡಿಕೊಳ್ಳುವುದು. ಇಲ್ಲವೇ ಮೊಬೈಲ್‌ ಬ್ಯೂಸಿ ಮಾಡಿಕೊಂಡು ಓಡಾಡುವ ಪ್ರಸಂಗಗಳು ನಡೆದಿವೆ. ಹಾಗಾಗಿ ಆಡಳಿತಕ್ಕೆ ವೇಗ ಸಿಗುತ್ತಿಲ್ಲ. ಹಿರಿಯ ಅ ಧಿಕಾರಿಗಳು ಕರೆ ಮಾಡಿದರೂ ಸ್ಪಂದನೆ ಇಲ್ಲದಂತ ಸ್ಥಿತಿ ನಿರ್ಮಾಣವಾಗಿದೆ. ಇದೆಲ್ಲವನ್ನು ದೂರ ಮಾಡಿ ಜನರಿಗೆ ಸುಲಲಿತವಾಗಿ ಸೇವೆ ಕೊಡಲು, ಜೊತೆಗೆ ವಾರ್ಡಿನ ಸಮಸ್ಯೆಯು ಅ ಧಿಕಾರಿಗಳ ಗಮನಕ್ಕೆ ಬಂದರೆ ತಕ್ಷಣ ಮೇಲುಸ್ತುವಾರಿಗಳಿಗೆ ಸಮಸ್ಯೆ ಗಮನಕ್ಕೆ ತಂದು ಅದನ್ನು ನಿವಾರಿಸಲು ವಾಕಿ-ಟಾಕಿ ಪ್ರಯೋಗ ಮಾಡಲಾಗಿದೆ.

 40 ನೌಕರರಿಗೆ ವಾಕಿ-ಟಾಕಿ:

ಕೊಪ್ಪಳ ನಗರಸಭೆಯ ಪ್ರಮುಖ 40 ನೌಕರರಿಗೆ ವಾಕಿ-ಟಾಕಿ ವಿತರಣೆ ಮಾಡಲಾಗಿದೆ. ಇಲ್ಲಿ ಪೌರಾಯುಕ್ತರು ಕಚೇರಿಯಲ್ಲಿಯೇ ಕುಳಿತು ಯಾವುದೇ ಕಡತದ ವಿಷಯಕ್ಕೆ ಸಂಬಂ ಧಿಸಿದಂತೆ ವಾಕಿಯಲ್ಲಿ ನೇರವಾಗಿ ತಮ್ಮ ಸಿಬ್ಬಂದಿಯಿಂದ ಮಾಹಿತಿ ಪಡೆಯಲು ನೆರವಾಗಲಿದೆ. ಇನ್ನೂ ಕುಡಿಯುವ ನೀರಿನ μಲ್ಟರ್‌ ಇರುವ ಸ್ಥಳದಲ್ಲಿ, ಕಾತರಕಿ ಬಳಿಯ ಜಾಕ್‌ವೆಲ್‌ ಪಾಯಿಂಟ್‌ನಲ್ಲಿ, ಕಸ ವಿಲೇವಾರಿ ಘಟಕ, ಮುನಿರಾಬಾದ್‌ ಪಾಯಿಂಟ್‌ನಲ್ಲಿ ವಾಕಿ ವ್ಯವಸ್ಥೆ ಮಾಡಲಾಗಿದೆ. ಕುಡಿಯುವ ನೀರಿನ ಸಮಸ್ಯೆ ಉಲ್ಬಣವಾದರೆ ತಕ್ಷಣವೇ ವಾಕಿ ಮೂಲಕ ಅಲ್ಲಿನ ಸಿಬ್ಬಂದಿಗೆ ಮಾಹಿತಿ ತಿಳಿಸಿ, ಯಾವ ಸಮಸ್ಯೆ ಇದೆ. ಅದಕ್ಕೆ ಪರಿಹಾರವೇನು ಎನ್ನುವುದನ್ನು ಕಂಡುಕೊಳ್ಳಲು ಈ ವಾಕಿ ನೆರವಾಗಲಿದೆ.

ನಗರದ ಯಾವುದೇ ವಾರ್ಡ್‌ನಲ್ಲಿ ಕುಡಿಯುವ ನೀರು, ವಿದ್ಯುತ್‌ ಸಮಸ್ಯೆ, ಚರಂಡಿ ಸ್ವತ್ಛಗೊಳಿಸುವುದು, ಕಸದ ಸಮಸ್ಯೆಯ ಕುರಿತು ಆ ವಾರ್ಡಿನ ಜನತೆ ನಗರಸಭೆ ಅಧಿ ಕಾರಿಗಳ ಗಮನಕ್ಕೆ ತಂದರೆ ತಕ್ಷಣವೇ ಆಯಾ ವಾರ್ಡಿನ ಮೇಲುಸ್ತುವಾರಿಗೆ ವಾಕಿ ಮೂಲಕ ಸಮಸ್ಯೆ ಗಮನಕ್ಕೆ ತಂದು ತಕ್ಷಣವೇ ಪರಿಹಾರ ಮಾಡಲಿದ್ದಾರೆ. ಈ ವಾಕಿ-ಟಾಕಿಯು ಕನಿಷ್ಠ 5 ಕಿಲೋ ಮೀಟರ್‌ ವ್ಯಾಪ್ತಿಯಲ್ಲಿ ಸಂಪರ್ಕ ಸಾ ಧಿಸಲಿದೆ. ಇಲ್ಲಿ ಯಾವುದೇ ಅಧಿಕಾರಿಗಳು ಸುಳ್ಳು ಹೇಳುವಂತಿಲ್ಲ. ಕಾರಣವನ್ನೂ ಹೇಳುವಂತಿಲ್ಲ.

ದತ್ತು ಕಮ್ಮಾರ 

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

1-MB

Note Ban ವೇಳೆ ಮಹಿಳೆಯರು ಮಂಗಳಸೂತ್ರ ಅಡವಿಟ್ಟಾಗ ಮೋದಿ ಮೌನ: ಭಂಡಾರಿ

Exam

Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ

IMD

Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.