ಸಾಮಾಜಿಕ ಕ್ರಾಂತಿಗೆ ಮುಂದಾದ ಮಹಿಳೆಯರು


Team Udayavani, Mar 8, 2021, 5:49 PM IST

ಸಾಮಾಜಿಕ ಕ್ರಾಂತಿಗೆ ಮುಂದಾದ ಮಹಿಳೆಯರು

ಕುಷ್ಟಗಿ: ಸರ್ಕಾರದ ಮುಖ್ಯ ಕಾರ್ಯದರ್ಶಿಯನ್ನು ಭೇಟಿ ಮಾಡಿರುವ ಪಡಿಯಮ್ಮ (ಸಂಗ್ರಹ ಚಿತ್ರ).

ಕುಷ್ಟಗಿ: ಸಮಾಜದಲ್ಲಿ ಬೇರೂರಿದ್ದ ದೇವದಾಸಿಯಂತಹ ಅನಿಷ್ಠ ಪದ್ಧತಿ ಅಳಿಸಿ ಹಾಕುವ ನಿಟ್ಟಿನಲ್ಲಿ ಇಬ್ಬರು ಮಹಿಳೆಯರು ಮನಃ ಪರಿವರ್ತನೆ ಹೋರಾಟದ ಮೂಲಕ ಸಾಮಾಜಿಕ ಜವಾಬ್ದಾರಿ ಮೆರೆದಿದ್ದಾರೆ.

ತಾಲೂಕಿನ ಕ್ಯಾದಗುಂಪ ಗ್ರಾಮದ ಪಡಿಯಮ್ಮ ಕರಿಯಪ್ಪ, ದೋಟಿಹಾಳ ಗ್ರಾಮದ ದುಗ್ಗಮ್ಮ ಅವರು, ತಮ್ಮದಲ್ಲದ ತಪ್ಪಿಗೆ ದೇವದಾಸಿ ಪದ್ಧತಿಗೆ ಸಿಲುಕಿದ್ದರು. ಈಗ ಅನಿಷ್ಟ ಪದ್ಧತಿಯಿಂದ ಹೊರಬಂದಿದ್ದಾರೆ. ಕಿತ್ತು ತಿನ್ನುವ ಬಡತನದ ಹಿನ್ನೆಲೆಯಲ್ಲಿ ಸಾಮಾಜಿಕ ಮೌಡ್ಯತೆ ಒಳಗಾಗಿ ಶೋಚನೀಯ ಬದುಕು ಸವೆಸಿದ್ದಾರೆ. ಈ ಮಹಿಳೆಯರು ತಾವು ತಮ್ಮ ಜೀವನ ಎಂದು ಸುಮ್ಮನಿರದೇ ಯಾವೂದೇ ಕಾರಣಕ್ಕೂ ದಲಿತ ಸಮುದಾಯದ ಮಹಿಳೆಯರು ಸಾಮಾಜಿಕ ಅನಿಷ್ಠಕ್ಕೆ ಜಾರದಂತೆ, ಬೆಂಗಾವಲಾಗಿ ವಿಮುಕ್ತ ದೇವದಾಸಿ ಮಹಿಳಾ ಸಂಘಟನೆ ಕಟ್ಟಿಕೊಂಡು ಕಾರ್ಯೋನ್ಮುಖರಾಗಿದ್ದಾರೆ.

ವಿಮುಕ್ತ ಮಹಿಳಾ ಸಂಘಟನೆಯ ಅಧ್ಯಕ್ಷೆ ಪಡಿಯಮ್ಮ, ದುಗ್ಗಮ್ಮ ಹಾಗೂ ಚಂದಾಲಿಂಗಪ್ಪ ಕಲಾಲಬಂಡಿ ನೇತೃತ್ವದಲ್ಲಿ ಸರ್ಕಾರದ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ತಾಲೂಕಿನಲ್ಲಿ671 ದೇವದಾಸಿ ಮಹಿಳೆಯರನ್ನುಗುರುತಿಸಲಾಗಿದೆ. ಈ ಎಲ್ಲಾ ಮಹಿಳೆಯರು ಸಮಾಜದ ಮುಖ್ಯವಾಹಿನಿಗೆ ಬರಲು ಸ್ವಉದ್ಯೋಗ ಸಾಲ ಸೌಲಭ್ಯ ಹಾಗೂ ಈ ಪೈಕಿ 18 ಜನರಿಗೆ ತಲಾ 3 ಎಕರೆಯಂತೆ ಜಮೀನು ಖರೀ ದಿಸಲಾಗಿದೆ. ಇನ್ನೂ 30 ಜನ ದೇವದಾಸಿ ಮಹಿಳೆಯರಿಗೆ ಸರ್ಕಾರದ ಮಂಜೂರಾತಿ ಹಂತದಲ್ಲಿದೆ.

ಸಾಮಾಜಿಕ ಕ್ರಾಂತಿ: ದೇವದಾಸಿ ಮಕ್ಕಳನ್ನುಯಾರು ಮದುವೆಯಾಗುತ್ತಾರೆ ಹೀಗೆ ಬಿಟ್ಟರೆ ಅನಿಷ್ಠ ಪದ್ಧತಿ ಮುಂದುವರಿಸುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಕುಷ್ಟಗಿಯಲ್ಲಿ ರಾಜ್ಯದಲ್ಲಿ ಮೊದಲ ಬಾರಿಗೆ 2018ರಲ್ಲಿ 32 ಜೋಡಿ ದೇವದಾಸಿ ಮಹಿಳೆ ಮಕ್ಕಳ ವಿವಾಹ ಮಹೋತ್ಸವ ನಡೆಸಿರುವುದು ಸಾಮಾಜಿಕ ಜವಾಬ್ದಾರಿಯ ದೃಢ ಹೆಜ್ಜೆಯಾಯಿತು. ಈ ಸಾಮಾಜಿಕ ಬದಲಾವಣೆಯಕ್ರಾಂತಿಯ ಯಶಸ್ವಿನ ಬೆನ್ನಲ್ಲೇ 2019ರಲ್ಲಿ 25 ಜೋಡಿ ದೇವದಾಸಿ ಮಕ್ಕಳ ವಿವಾಹ ಮಹೋತ್ಸವ ನಡೆಸಿರುವುದು ಸಾಮಾಜಿಕ ಜವಾಬ್ದಾರಿಯ ದೃಢ ಹೆಜ್ಜೆಯಾಯಿತು. ಈ ಸಾಮಾಜಿಕ ಬದಲಾವಣೆಯ ಕ್ರಾಂತಿಯ ಯಶಸ್ವಿನ ಬೆನ್ನಲ್ಲೇ 2019ರಲ್ಲಿ 25 ಜೋಡಿ ದೇವದಾಸಿ ಮಕ್ಕಳ ವಿವಾಹ ಮಹೋತ್ಸವ ಜರುಗಿತ್ತು. ಇದಕ್ಕೆಲ್ಲ ಇಳಿವಯಸ್ಸಿನ ಪಡಿಯಮ್ಮ ಹಾಗೂ ಅಂಗವಿಕಲೆಯಾಗಿದ್ದರೂ, ಸಾಮಾಜಿಕಕಾರ್ಯಕ್ಕೆ ಜಗ್ಗದ ದುಗ್ಗಮ್ಮ ಎನ್ನುವ ಮಹಿಳಾ ಶಕ್ತಿ ಕಾರಣ.

ಸರ್ಕಾರದಿಂದ ಹಾಗೂ ಬ್ಯಾಂಕ್‌ ಗಳಿಂದ ಸಿಗುವ ಸೌಲಭ್ಯಗಳನ್ನು ಆದ್ಯತೆಯಾಗಿ ಸಿಗುವಂತೆ ಸರ್ಕಾರ ಮಟ್ಟದಲ್ಲಿ ಹೋರಾಟ ನಡೆಸಿದ್ದೇವೆ. ದೇವದಾಸಿ ಮಹಿಳೆಯರಿಗೆ ಹಾಗೂ ಮಕ್ಕಳಿಗೆಉತ್ತಮ ಭವಿಷ್ಯ ಕಲ್ಪಿಸಿ ಸ್ವಾಭಿಮಾನದ ಜೀವನ ಕಟ್ಟಿಕೊಳ್ಳಲು ಸಹಾಯಕ್ಕೆ ಮುಂದಾಗಿದ್ದೇವೆ. -ದುಗ್ಗಮ್ಮ ದೋಟಿಹಾಳ, ವಿಮುಕ್ತ ದೇವದಾಸಿ ಮಹಿಳಾ ವೇದಿಕೆ

ದೇವದಾಸಿ ಮಹಿಳೆ ಎಂದರೆ ಕೀಳಾಗಿ ಕಾಣುವ ಸಂದರ್ಭ, ಶಾರೀರಿಕವಾಗಿ ಸಂಬಂಧ ಬೆಳೆಸಲು ಮುಂದಾಗುವವರಿಂದ ಕಿರುಕುಳ ತಪ್ಪಿಸಲು ವಿಮುಕ್ತ ಮಹಿಳಾಸಂಘಟನೆ ಸೃಷ್ಟಿಸಲಾಗಿದೆ. ದೇವದಾಸಿ ಮಹಿಳೆಯರ ಮನಃಪರಿವರ್ತಿಸಿ, ಇನ್ಮುಂದೆ ಯಾವೂದೇ ಕಾರಣಕ್ಕೂ ಈ ಅನಿಷ್ಠ ಪದ್ಧತಿಗೆ ಆಚರಿಸದಿರಲು ಅರಿವು ಮೂಡಿಸಿದ್ದೇವೆ. -ಪಡಿಯಮ್ಮ ಕ್ಯಾದಗುಂಪ, ವಿಮುಕ್ತ ದೇವದಾಸಿ ಮಹಿಳಾ ವೇದಿಕೆ ಕುಷ್ಟಗಿ

 

-ಮಂಜುನಾಥ ಮಹಾಲಿಂಗಪುರ

ಟಾಪ್ ನ್ಯೂಸ್

Kollam; ಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

Kollam; ವಿಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

Seat next to parents for children under 12 years on the plane?

DGCA: ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಪಕ್ಕ ಆಸನ?

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Parameshwar

Dr.G. Parameshwara ಅವರ ಜಾತಿ ನಿಂದನೆ; ಬೀದರ್ ವ್ಯಕ್ತಿ ವಿರುದ್ಧ ಕೇಸ್

Minchu

Rain; ಬೀದರ್,ಕೊಪ್ಪಳದಲ್ಲಿ ಸಿಡಿಲಿನ ಆರ್ಭಟಕ್ಕೆ ಇಬ್ಬರು ಮೃತ್ಯು

Neha Hiremath Case; Protest by BJP-JDS-ABVP across the state

Neha Hiremath Case; ಬಿಜೆಪಿ-ಜೆಡಿಎಸ್-ಎಬಿವಿಪಿಯಿಂದ ರಾಜ್ಯದೆಲ್ಲೆಡೆ ಪ್ರತಿಭಟನೆ

Gangavathi; ಪರಾರಿಯಾಯ್ತು ಮೇಕೆ ಹಿಡಿಯಲು ಬಂದು ಸೆರೆಯಾಗಿದ್ದ ಚಿರತೆ

Gangavathi; ಪರಾರಿಯಾಯ್ತು ಮೇಕೆ ಹಿಡಿಯಲು ಬಂದು ಸೆರೆಯಾಗಿದ್ದ ಚಿರತೆ

crime (2)

Koppal: ಕಾಣೆಯಾಗಿದ್ದ 7 ವರ್ಷದ ಬಾಲಕಿ ಶವವಾಗಿ ಪತ್ತೆ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Kollam; ಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

Kollam; ವಿಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

Seat next to parents for children under 12 years on the plane?

DGCA: ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಪಕ್ಕ ಆಸನ?

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.