ಸತತ 5 ಗಂಟೆ ನಡೆದ ಐಸಿಸಿ ಸಭೆ ಗೊಂದಲದಲ್ಲೇ ಅಂತ್ಯವಾಯ್ತು !

ಕೊನೆ ಭಾಗದ ರೈತರಿಗಾಗಿ ಬಿಗಿಪಟ್ಟು ಸಭೆ ನಿರ್ಣಯಕ್ಕೆ ರೈತ ಮುಖಂಡರ ವಿರೋಧಆಂಧ್ರ ಕೋಟಾ ನೀರು ಆಯಾ ತಿಂಗಳಲ್ಲಿ ಬಳಸಲಿ

Team Udayavani, Nov 22, 2019, 12:18 PM IST

21-November-7

ಕೊಪ್ಪಳ: ತಾಲೂಕಿನ ಮುನಿರಾಬಾದ್‌ ನೀರಾವರಿ ಕಚೇರಿಯಲ್ಲಿ ನಡೆದ 113ನೇ ನೀರಾವರಿ ಸಲಹಾ ಸಮಿತಿ ಸಭೆಯು ಬೆಳಗ್ಗೆ 11ಕ್ಕೆ ಆರಂಭವಾಗಿ ಸಂಜೆ 4 ಗಂಟೆವರೆಗೂ ಸತತ 5 ಗಂಟೆಗಳ ಕಾಲ ಸುದೀರ್ಘ‌ ಚರ್ಚೆ ನಡೆಸಿ ಕೊನೆಯಲ್ಲಿ ಗೊಂದಲದಲ್ಲಿಯೇ ಅಂತ್ಯವಾಯಿತು.

ನಾಲ್ಕು ವರ್ಷಗಳಿಂದ ಎರಡನೇ ಬೆಳೆಗೆ ನೀರು ಕೊಡಲಾಗಿರಲಿಲ್ಲ. ಈ ಬಾರಿ ಡ್ಯಾಂಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬಂದ ಹಿನ್ನೆಲೆಯಲ್ಲಿ 2ನೇ ಬೆಳೆಗೆ ನೀರು ಹರಿಸುವ ವಿಚಾರದಲ್ಲಿ ರೈತರ ಜೊತೆ ಡಿಸಿಎಂ ಲಕ್ಷ್ಮಣ ಸವದಿ ಎರಡು ಗಂಟೆಗಳ ಕಾಲ ಚರ್ಚೆ ನಡೆಸಿದರು.

ಸಭೆಯಲ್ಲಿ ಮಾಜಿ ಶಾಸಕ, ಸಚಿವರ ಜೊತೆಯೂ ಚರ್ಚೆ ನಡೆಸಿ ಅಭಿಪ್ರಾಯ ಸಂಗ್ರಹಿಸಿದರು. ರೈತ ಮುಖಂಡರಿಂದಲೂ ಅಭಿಪ್ರಾಯ ಪಡೆದರು. ತರುವಾಯ ಮಧ್ಯಾಹ್ನ 2ರಿಂದ ಸಂಜೆ 4ಗಂಟೆ ವರೆಗೂ ಶಾಸಕ, ಸಂಸದರ ಜೊತೆ ಹಾಗೂ ಅಧಿ ಕಾರಿಗಳ ಜೊತೆ ಸಭೆ ನಡೆಸಿ ಚರ್ಚಿಸಿದರು. ಎರಡನೇ ಬೆಳೆಗೆ ನೀರು ಪಕ್ಕಾ ಸಿಗಲಿದೆ ಎನ್ನುವ ನಿರೀಕ್ಷೆಯಲ್ಲಿದ್ದ ರೈತ ಸಮೂಹಕ್ಕೆ ಸವದಿ ಕೊನೆಯಲ್ಲಿ ಜನವರಿ ತಿಂಗಳು ಸಭೆ ನಡೆಸಿ ರೈತರಿಗೆ ನೀರು ಕೊಡುವ ಚಿಂತನೆಯ ಮಾತನ್ನಾಡಿದರು. ಆದರೆ ನಿರ್ಣಯದ ಪ್ರಕಟಣೆಯನ್ನು ಮಾಧ್ಯಮಕ್ಕೆ ಮಾಹಿತಿ ನೀಡಿದರು. ಆದರೆ ರೈತ ಮುಖಂಡರು ಮಾತ್ರ ಜಲಾಶಯದಲ್ಲಿ ನೀರಿದೆ. ಎರಡನೇ ಬೆಳೆಗೆ ನೀರು ಲಭ್ಯವಿದೆ. ಆದರೂ ಮತ್ತೆ ಜನವರಿ ತಿಂಗಳಲ್ಲಿ ಸಭೆ ನಡೆಸುವುದು ಏಕೆ? ಈಗಲೇ ಅದನ್ನು ನಿರ್ಣಯಿಸಿ ದಿನಾಂಕ ಪ್ರಕಟಿಸಿದರೆ ರೈತರು ಭತ್ತದ ಮಡಿಗಳನ್ನು ಹಾಕಲಿದ್ದಾರೆ. ನೀವು ಹೀಗೆ ಮುಂದಿನ ತಿಂಗಳು ಎಂದು ಹೇಳಿದರೆ ರೈತರಲ್ಲಿ ಗೊಂದಲವಾಗಲಿದೆ ಎಂದು ಸಭೆಗೆ ಒತ್ತಾಯ ಮಾಡಿದರು. ಇದಕ್ಕೆ ತಲೆಯಾಡಿಸಿದ ಸವದಿ ಅವರು ಎರಡನೇ ಬೆಳೆಗೆ ನೀರು ಕೊಡಲು ಕ್ರಮ ವಹಿಸಲಾಗುವುದು ಎಂದರು. ಗೊಂದಲದಲ್ಲಿಯೇ ಸಭೆ ನಿರ್ಣಯವನ್ನು ಮಾಧ್ಯಮಕ್ಕೆ ತಿಳಿಸಿ ತೆರಳಿದರು.

ಕೊನೆ ಭಾಗಕ್ಕೆ ನೀರಿಗಾಗಿ ಬಿಗಿಪಟ್ಟು: ತುಂಗಭದ್ರಾ ಜಲಾಶಯದಿಂದ ಎಡದಂಡೆ ಮುಖ್ಯ ಕಾಲುವೆಯ ಕೊನೆ ಭಾಗದ ರೈತರ ಭೂಮಿಗೆ ನೀರು ಹರಿಸಬೇಕೆಂದು ಆ ಭಾಗದ ಶಾಸಕರು ಐಸಿಸಿ ಸಭೆಯಲ್ಲಿ ಪಟ್ಟು ಹಿಡಿದ ಹಿನ್ನೆಲೆಯಲ್ಲಿ ಸಭೆಯಲ್ಲಿ ಹಲವು ಚರ್ಚೆಗಳು ನಡೆದವು. ಎಡದಂಡೆ ನಾಲೆಗೆ 4200 ಕ್ಯೂಸೆಕ್‌ ನೀರು ಹರಿಸಿದರೆ ಮಾತ್ರ ಕೊನೆ ಭಾಗದ ರೈತರಿಗೆ ನೀರು ತಲುಪಲಿದೆ. 3800 ಕ್ಯೂಸೆಕ್‌ ನಷ್ಟು ನೀರು ಹರಿಸಿದರೆ ನಮಗೆ ನೀರು ಲಭ್ಯವಾಗಲ್ಲ. ರೈತರು ಸಂಕಷ್ಟ ಎದುರಿಸುವಂತಹ ಪರಿಸ್ಥಿತಿ ಬರಲಿದೆ. ಕೊನೆಯ ಭಾಗದ ರೈತರ ಕಷ್ಟವನ್ನು ಆಲಿಸಬೇಕೆಂದು ಬಿಗಿಪಟ್ಟು ಹಿಡಿದಿದ್ದರಿಂದ ಸಭೆಯಲ್ಲಿ ಸುದೀರ್ಘ‌ ಚರ್ಚೆ ನಡೆದವು. ಕಾಲುವೆ ಆಧುನೀಕರಣದ ನೆಪ ಹಾಗೂ ಅಗಲೀಕರಣ ಮಾಡಿದ್ದರಿಂದ ನೀರು ರಭಸವಾಗಿ ಹರಿಯಲ್ಲ. ಹೀಗಾಗಿ ಕೊನೆ ಭಾಗಕ್ಕೆ ನೀರು ಸಕಾಲಕ್ಕೆ ತಲುಪಲ್ಲ. ಕೂಡಲೇ ಇದನ್ನು ಪರಿಶೀಲನೆ ನಡೆಸಬೇಕು. ಇನ್ನೂ ಆನ್‌ ಆ್ಯಂಡ್‌ ಆಫ್‌ ಪದ್ಧತಿ ಮಾಡಿದರಂತೂ ನಮಗೆ ನೀರೇ ಬರಲ್ಲ ಎಂದು ಸಭೆಯಲ್ಲಿ ಚರ್ಚೆ ನಡೆದವು.

2 ಲಕ್ಷ ಎಕರೆ ಅಕ್ರಮ ಭತ್ತ ನಾಟಿ!: ಜನಪ್ರತಿನಿಧಿಗಳ ಜೊತೆ ನಡೆದ ಐಸಿಸಿ ಆಂತರಿಕ ಸಭೆಯಲ್ಲಿ ತುಂಗಭದ್ರಾ ಜಲಾಶಯದ ಭತ್ತ ನಾಟಿ ಪ್ರದೇಶ ವಿಸ್ತಾರವಾಗಿದೆ. ಎಲ್ಲ ರೈತರಿಗೂ ನೀರು ಹರಿಸಲು ಕಷ್ಟಸಾಧ್ಯವಾಗಿದೆ. 6 ಲಕ್ಷ ಎಕರೆ ಪ್ರದೇಶದಿಂದ 8 ಲಕ್ಷ ಎಕರೆ ಪ್ರದೇಶವಾಗಿದೆ. ಇದರಿಂದ ಭತ್ತ ಅಕ್ರಮ ನಾಟಿಯಾಗುವ ಬಗ್ಗೆ ಚರ್ಚೆ ನಡೆಸಬೇಕು ಎಂದು ಅಧಿಕಾರಿ ವರ್ಗ ಸಭೆ ಗಮನಕ್ಕೆ ತಂದಿದ್ದಾರೆ. ಇದಕ್ಕೆ ಯಾವ ಶಾಸಕರು ಪ್ರತಿ ಮಾತನಾಡದೇ, ರೈತರನ್ನು ವಿರೋಧ ಹಾಕಿಕೊಳ್ಳಲು ಯಾವುದೇ ಶಾಸಕರು ತಯಾರಿಲ್ಲ. ಎಲ್ಲ ರೈತರಿಗೂ ನೀರು ಕೊಡಬೇಕು ಎನ್ನುವ ಉತ್ತರ ನೀಡಿದ್ದಾರೆ ಎನ್ನುವ ಮಾಹಿತಿ ಮೂಲಗಳಿಂದ ಲಭ್ಯವಾಯಿತು.

ಕಾಂಗ್ರೆಸ್‌ ಪ್ರತಿಭಟನೆ: ತುಂಗಭದ್ರಾ ಡ್ಯಾಂನಲ್ಲಿ ನೀರಿನ ಪ್ರಮಾಣ ಹೆಚ್ಚಿದೆ. ಆದರೂ ಎರಡನೇ ಬೆಳೆಗೆ ನೀರು ಕೊಡಲು ಸಲಹಾ ಸಮಿತಿ ಸಭೆಯಲ್ಲಿ ಮೀನಮೇಷ ಎಣಿಸಲಾಗುತ್ತಿದೆ. ಕೂಡಲೇ ಸ್ಪಷ್ಟ ನಿರ್ಧಾರ ಕೈಗೊಳ್ಳಬೇಕು ಎಂದು ಕೈ ಮುಖಂಡರು ಒತ್ತಾಯ ಮಾಡಿದರು. ಬಿಜೆಪಿ ಸರ್ಕಾರ ರೈತರಿಗೆ ನೀರು ಕೊಡದೇ ಮೋಸ ಮಾಡುತ್ತಿದೆ ಎಂದು ಕಾಂಗ್ರೆಸ್‌ ಮುಖಂಡರು ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು.

ಟಾಪ್ ನ್ಯೂಸ್

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

17-voting

Vote: ಮತದಾನದ ಮಹತ್ವ

Siddaramaiah

Haveri; ದೇಶ ಬಿಡುತ್ತೇನೆ ಎಂದಿದ್ದ ದೇವೇಗೌಡರು ಮೋದಿ ಜತೆ ಸೇರಿದ್ದಾರೆ: ಸಿದ್ದರಾಮಯ್ಯ

15-udupi

Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ

Delhi Police: ಮಾರುತಿ ಸ್ವಿಫ್ಟ್‌ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!

Delhi Police: ಮಾರುತಿ ಸ್ವಿಫ್ಟ್‌ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

Siddaramaiah

Haveri; ದೇಶ ಬಿಡುತ್ತೇನೆ ಎಂದಿದ್ದ ದೇವೇಗೌಡರು ಮೋದಿ ಜತೆ ಸೇರಿದ್ದಾರೆ: ಸಿದ್ದರಾಮಯ್ಯ

15-udupi

Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ

Belagavi; ಸವದಿ ಮನೆಗೆ ಭೇಟಿ ನೀಡಿದ ರಣದೀಪ್ ಸುರ್ಜೆವಾಲಾ

Belagavi; ಸವದಿ ಮನೆಗೆ ಭೇಟಿ ನೀಡಿದ ರಣದೀಪ್ ಸುರ್ಜೆವಾಲಾ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

17-voting

Vote: ಮತದಾನದ ಮಹತ್ವ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.