ಅಂತರಂಗ-ಬಹಿರಂಗ ಶುದ್ಧಿಯಾಗಲಿ

•ಶರಣರ ಆದರ್ಶಗಳಲ್ಲಿದೆ ನಮ್ಮ ಬದುಕು•ಧನ-ಅಧಿಕಾರ-ಕುಲ ಮಧ ತೊಲಗಲಿ

Team Udayavani, Aug 22, 2019, 1:37 PM IST

22-Agust-27

ಕೊಪ್ಪಳ: ನಗರದ ಶಿವಶಾಂತ ಮಂಗಲ ಭವನದಲ್ಲಿ ಬುಧವಾರ ನಡೆದ ಮತ್ತೆ ಕಲ್ಯಾಣ ಕಾರ್ಯಕ್ರಮದಲ್ಲಿ ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಆಶೀರ್ವಚನ ನೀಡಿದರು

ಕೊಪ್ಪಳ: ಬಸವಾದಿ ಶರಣರು 12ನೇ ಶತಮಾನದಲ್ಲಿ ಮಹಾ ಕ್ರಾಂತಿಯನ್ನೇ ಮಾಡಿದ್ದಾರೆ. ಅವರ ಆದರ್ಶಗಳಲ್ಲಿಯೇ ನಮ್ಮ ಜೀವನದ ಸಾಮರಸ್ಯ ಅಡಗಿದೆ. ಉತ್ತಮರ ಸಂಗ, ಆಚಾರ, ವಿಚಾರಗಳು ನಮ್ಮನ್ನು ಉನ್ನತಿಗೆ ಕೊಂಡೊಯ್ಯಲಿವೆ. ನಾವು ಧನ, ಅರ್ಥ ಹಾಗೂ ಕುಲ ಮಧದಿಂದ ದೂರ ಇರಬೇಕು ಎಂದು ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ನಗರದ ಶಿವಶಾಂತ ಮಂಗಲ ಭವನದಲ್ಲಿ ಬುಧವಾರ ಮತ್ತೆ ಕಲ್ಯಾಣ ಸಮಿತಿಯಿಂದ ನಡೆದ ಮತ್ತೆ ಕಲ್ಯಾಣ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು. ಏಷ್ಟೋ ಜನರು ದೇವರನ್ನು ಒಲಿಸಿಕೊಳ್ಳಲು ಮಠ, ಮಂದಿರ, ಮಸೀದಿ, ಚರ್ಚ್‌ಗಳಿಗೆ ತೆರಳಿ ಗಂಟೆಗಳ ಕಾಲ ಧ್ಯಾನ, ಮೌನಾಚರಣೆ ಮಾಡುತ್ತಾರೆ. ಆದರೆ ದೇಗುಲದಿಂದ ಹೊರ ಬಂದಾಕ್ಷಣ ಮತ್ತೆ ಲೌಖೀಕ ಬದುಕಿನಲ್ಲಿ ತೊಡಗಿ ಮಾಡಬಾರದ್ದನ್ನು ಮಾಡುತ್ತಾರೆ. ಅಂತರಂಗದಲ್ಲಿ ಒಂದಿದ್ದರೆ, ಬಹಿರಂಗದಲ್ಲಿ ಒಂದು ಮಾಡುತ್ತಾರೆ. ಮೊದಲು ಅಂತರಂಗ, ಬಹಿರಂಗ ಶುದ್ಧಿ ಮಾಡಿಕೊಳ್ಳಬೇಕಿದೆ. ಒಳ್ಳೆಯ ಮಾತು, ಒಳ್ಳೆಯ ಕಾರ್ಯ, ಎಲ್ಲರ ಹಿತ ಬಯಸುವುದು, ಉತ್ತಮರ ಸಂಗವು ನಮ್ಮನ್ನು ಶುದ್ಧಿಗೊಳಿಸಲಿದೆ. ಇತ್ತೀಚೆಗಂತೂ ಶುದ್ಧಿಗಾಗಿ ದೂರದ ದೇವಸ್ಥಾನಕ್ಕೆ ಹೋಗುತ್ತಾರೆ. ಆದರೆ ಬಸವಣ್ಣ ಕಾಯಕವೇ ಕೈಲಾಸ ಎಂದಿದ್ದಾರೆ. ನಿಮ್ಮ ಕಾಯಕದಲ್ಲಿಯೇ ನೀವು ದೇವರನ್ನು ಕಾಣಿ. ಶ್ರಮವಿಲ್ಲದೇ ನಾವು ಉನ್ನತಿಗೆ ಬರಲು ಸಾಧ್ಯವಿಲ್ಲ ಎಂದರು.

ನಾವು ನಡೆಯುವ ಮಾರ್ಗ ಸರಿಯಾಗಿರಬೇಕು. ನಿನ್ನೊಳಗಿನ ವೇಷ, ದಾರಿ, ಮುಖವಾಡ ಸರಿಯಿದ್ದರೆ ಬದುಕು ಬಂಗಾರವಾಗಲಿದೆ. ನಮ್ಮ ವ್ಯಕ್ತಿತ್ವ ಬೆಳಗಲಿದೆ. ಒಳ್ಳೆಯವರ ಒಡನಾಟ ಬೆಳೆಸಿಕೊಂಡರೆ, ಸಜ್ಜನರ ಒಡನಾಟ ಹೆಚ್ಚಾದರೆ ನಮ್ಮ ವ್ಯಕ್ತಿತ್ವವೂ ಬದಲಾಗುತ್ತದೆ. ನಾವು ಹಣ, ಆಸ್ತಿ ಗಳಿಸಿದರೂ ಸಾವಿರ ವರ್ಷ ಬದುಕಲು ಸಾಧ್ಯವಿಲ್ಲ. ಆದರೆ ಬುದ್ಧ, ಬಸವಣ್ಣ ತಮ್ಮ ಆದರ್ಶಗಳಿಂದಲೇ ಇಂದು ಜೀವಂತವಾಗಿದ್ದಾರೆ. ಗಾಂಧಿಧೀಜಿ ಅವರ ಆದರ್ಶವನ್ನು ನಾವು ನೆನೆಯುತ್ತಿದ್ದೇವೆ. ವೈಚಾರಿಕ ವಿಚಾರ ಬೆಳೆಸಿಕೊಂಡರೆ ಸೂರ್ಯ ಇರುವವರೆಗೂ ಮನುಷ್ಯ ಬದುಕಿರುತ್ತಾನೆ. ಆದರ್ಶವಾದಿಗಳು ಎಂದೂ ಶ್ರೀಮಂತಿಕೆಯ ಹಿಂದೆ ಓಡಲಿಲ್ಲ. ಆಸೆಯೇ ದುಃಖಕ್ಕೆ ಮೂಲ ಎಂದು ಸಾರಿದರು. ಆ ಆಶಯವನ್ನು ನಮ್ಮ ಕಾಯಕದ ಮೂಲಕ ಈಡೇರಿಸಿಕೊಳ್ಳಬೇಕು. ಆದರೆ ಇಂದು ಗ್ರಾಪಂ ಸದಸ್ಯನಿಂದ ಹಿಡಿದು ರಾಷ್ಟ್ರಪತಿವರೆಗೂ ಅಧಿಕಾರದ ಮಧ ಏರಿದೆ ಎಂದರು.

ಮನುಷ್ಯನಿಗೆ ಇಂದು ಆನೆ ಮಧ ಬಂದಿದೆ. ಆನೆಗೆ ಮಧ ಏರಿದಾಗ ಏನೂ ಕಾಣಿಸಿಲ್ಲ. ಇಂದು ಪರಿಸ್ಥಿತಿ ಹಾಗಾಗಿದೆ. ಧನ ಮಧ, ಕುಲ ಮಧ ಹಾಗೂ ಅರ್ಥ ಮಧ ಹೆಚ್ಚು ಅಪಾಯಕಾರಿ ಎಂದು ಶರಣರು ಸಾರಿ ಸಾರಿ ಹೇಳಿದ್ದಾರೆ. ಇನ್ನೂ ಕುಲ ಮಧದಿಂದ ನಾವು ದೂರ ಇರಬೇಕು. ಈ ಜಗತ್ತಿನಲ್ಲಿ ಗಾಳಿ, ಬೆಳಕಿಗೆ ಜಾತಿಯಿಲ್ಲ. ಈ ಮೂರು ಆಶಯಗಳೊಂದಿಗೆ ಮತ್ತೆ ಕಲ್ಯಾಣ ಆರಂಭಿಸಿದ್ದೇವೆ. ಇಲ್ಲಿನ ವಿಚಾರಗಳು ಎಲ್ಲರಿಗೂ ತಲುಪಬೇಕು. ವ್ಯಕ್ತಿ ಬದಲಾದರೆ ದೇಶ ಬದಲಾಗುತ್ತದೆ. ನಾವು ನಮ್ಮ ವ್ಯಕ್ತಿತ್ವದ ಜೊತೆಗೆ ಸಮಾಜದ ವ್ಯಕ್ತಿತ್ವ ರೂಪಿಸೋಣ ಎಂದರು.

ಡಾ| ಸಿದ್ಧನಗೌಡ ಪಾಟೀಲ್ ಮಾತನಾಡಿ, ಇಂದು ಧಮನವೇ ಧರ್ಮದ ಮೂಲವಯ್ಯ ಎನ್ನುವ ಭಾವನೆ ಬಂದಿದೆ. ಚರ್ಚ್‌, ದೇವಾಲಯ ಸಂಕೇತಗಳೇ ಹೊರತು ಭಾವನೆಯಲ್ಲ. ಧರ್ಮ ಎನ್ನುವುದು ಅಂತರಾತ್ಮದೊಳಗೆ ಇದೆ. ಧಾರ್ಮಿಕ ಸಂಕೇತಗಳ ಮಧ್ಯೆ ಇಂದು ಸಂಘರ್ಷ ನಡೆದಿದೆ. ಧರ್ಮಾಂಧರಿಂದ ಸಮಾಜ ಕೆಡುತ್ತಿದೆ. 12ನೇ ಶತಮಾನದಲ್ಲಿ ಬಸವಾದಿ ಶರಣರು ಹೇಳಿದ ಅಂಶಗಳೇ ಇಂದು ಸಂವಿಧಾನದ ರಾಜ್ಯ ನಿರ್ದೇಶನದ ತತ್ವಗಳು ಒಳಗೊಂಡಿವೆ ಎಂದರು.

12ನೇ ಶತಮಾನದಲ್ಲಿ ಬಸವಣ್ಣ ವೇದದ ನೀತಿಗಳ ವಿರುದ್ಧ ಹೋರಾಡಿದರು. ಪ್ರಭುತ್ವವನ್ನೇ ಧಿಕ್ಕಾರ ಮಾಡಿ ಕಾಯಕವೇ ಕೈಲಾಸ. ಅಲ್ಲಿಯೇ ದೇವರನ್ನು ಕಾಣಿ ಎಂಬ ಸಂದೇಶ ಸಾರಿದರು. ಆದರೆ ಇಂದು ವಂಚನೆಯ ವ್ಯವಸ್ಥೆ ಹೆಚ್ಚಾಗಿದೆ. ಆಯ್ದಕ್ಕಿ ಲಕ್ಕಮ್ಮ ಈಸಕ್ಕಿ ಆಸೆ ನಮಗೇಕಯ್ಯ ಎಂದು ಪತಿಗೆ ಹೇಳಿದ್ದರಂತೆ. ಒಂದು ದಿನಕ್ಕೆ ಆಗುವಷ್ಟು ಅಕ್ಕಿ ನಮಗಿದೆ. ನಾಳೆಯ ಅಕ್ಕಿ ನಮಗೇಕೆ ಎಂದು ಹೇಳಿದ್ದಳು. ಆದರೆ ಇಂದು ಕೋಟಿ ಕೋಟಿ ಲೂಟಿ ಹೊಡೆದು ಪರಾರಿಯಾಗುವ ಸಂಸ್ಕೃತಿ ಬೆಳೆದಿದೆ. ಇಂದು ಬಸವಣ್ಣನ ಕಾಯಕ ಚಿಂತನೆ, ಲಕ್ಕಮ್ಮನ ಚಿಂತನೆಗಳು ಅವಶ್ಯವಾಗಿವೆ ಎಂದರು.

ಅರ್ಥ, ಅಹಂಕಾರ, ಕುಲ ಮಧ ತೊಲಗಿದುವುದು ಮತ್ತೆ ಕಲ್ಯಾಣದ ಆಶಯವಾಗಿದೆ. ಜಗತ್ತಿನ ಎಲ್ಲ ಧರ್ಮಗಳು ಮನುಷ್ಯ ಹೇಗೆ ಬಾಳಬೇಕು ಎಂದು ಬೋಧಿಸಿವೆ. ಹಲವಾರು ಧರ್ಮಗಳು ಕೂಡಿಕೊಂಡು ಹೇಗೆ ಬದುಕಬೇಕು ಎಂದು ಯಾವ ಧರ್ಮ ಹೇಳಿಲ್ಲ. ಆದರೆ ಬಸವಣ್ಣ ಅದನ್ನು ಹೇಳಿದ್ದಾರೆ. ತಾತ್ವಿಕವಾಗಿ, ಮಾನಸಿಕವಾಗಿ ನಮ್ಮ ಚಿಂತನೆಗಳ ಮೂಲಕ 12ನೇ ಶತಮಾನದ ಚಿಂತನೆ ಮಾಡೋಣ, ಮಾನವ ಧರ್ಮ ಕಾಪಾಡೋಣ ಎನ್ನುವ ಸಂದೇಶ ನೀಡಿದರು. ಸಮಾರಂಭದಲ್ಲಿ ಸಾವಿತ್ರಿ ಮಜಂದಾರ, ಮೌಲಾನಾ ಮಹ್ಮದ್‌ ಇಮ್ತಿಯಾಜ್‌ ಸೇರಿದಂತೆ ರೈತ ಮುಖಂಡರು ಪಾಲ್ಗೊಂಡಿದ್ದರು.

ಟಾಪ್ ನ್ಯೂಸ್

gayi

Davanagere; ಗಾಯಿತ್ರಿ ಸಿದ್ದೇಶ್ವರ್‌ ಅಂತಿಮ ನಾಮಪತ್ರ ಸಲ್ಲಿಕೆ; ಭರ್ಜರಿ ಮೆರವಣಿಗೆ

4-shirva

Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Boat Capsizes In Odisha’s Mahanadi River

Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ

Tamil Nadu BJP chief Annamalai demands re-poll due to missing voter names

Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ

3-blthngady

ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Glanders infection: ಗ್ಲ್ಯಾಂಡರ್ಸ್‌ ಸೋಂಕು; ಬೆಂಗಳೂರು ತೊರೆದ ಕುದುರೆ ಮಾಲೀಕ, ಸವಾರ

Glanders infection: ಗ್ಲ್ಯಾಂಡರ್ಸ್‌ ಸೋಂಕು; ಬೆಂಗಳೂರು ತೊರೆದ ಕುದುರೆ ಮಾಲೀಕ, ಸವಾರ

Chain theft: ಒಂಟಿ ಮಹಿಳೆಯರ ಸರ ಕದಿಯುತ್ತಿದ್ದ 5 ಬಂಧನ; 10.82 ಲಕ್ಷದ ವಸ್ತು ಜಪ್ತಿ

Chain theft: ಒಂಟಿ ಮಹಿಳೆಯರ ಸರ ಕದಿಯುತ್ತಿದ್ದ 5 ಬಂಧನ; 10.82 ಲಕ್ಷದ ವಸ್ತು ಜಪ್ತಿ

Hubli;ತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕು: ನೇಹಾ ಮನೆಗೆ ಫಕೀರ ಸಿದ್ಧರಾಮೇಶ್ವರ ಶಿವಯೋಗಿ ಭೇಟಿ

Hubli;ತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕು: ನೇಹಾ ಮನೆಗೆ ಫಕೀರ ಸಿದ್ಧರಾಮೇಶ್ವರ ಶಿವಯೋಗಿ ಭೇಟಿ

gayi

Davanagere; ಗಾಯಿತ್ರಿ ಸಿದ್ದೇಶ್ವರ್‌ ಅಂತಿಮ ನಾಮಪತ್ರ ಸಲ್ಲಿಕೆ; ಭರ್ಜರಿ ಮೆರವಣಿಗೆ

4-shirva

Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Glanders infection: ಗ್ಲ್ಯಾಂಡರ್ಸ್‌ ಸೋಂಕು; ಬೆಂಗಳೂರು ತೊರೆದ ಕುದುರೆ ಮಾಲೀಕ, ಸವಾರ

Glanders infection: ಗ್ಲ್ಯಾಂಡರ್ಸ್‌ ಸೋಂಕು; ಬೆಂಗಳೂರು ತೊರೆದ ಕುದುರೆ ಮಾಲೀಕ, ಸವಾರ

Chain theft: ಒಂಟಿ ಮಹಿಳೆಯರ ಸರ ಕದಿಯುತ್ತಿದ್ದ 5 ಬಂಧನ; 10.82 ಲಕ್ಷದ ವಸ್ತು ಜಪ್ತಿ

Chain theft: ಒಂಟಿ ಮಹಿಳೆಯರ ಸರ ಕದಿಯುತ್ತಿದ್ದ 5 ಬಂಧನ; 10.82 ಲಕ್ಷದ ವಸ್ತು ಜಪ್ತಿ

Hubli;ತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕು: ನೇಹಾ ಮನೆಗೆ ಫಕೀರ ಸಿದ್ಧರಾಮೇಶ್ವರ ಶಿವಯೋಗಿ ಭೇಟಿ

Hubli;ತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕು: ನೇಹಾ ಮನೆಗೆ ಫಕೀರ ಸಿದ್ಧರಾಮೇಶ್ವರ ಶಿವಯೋಗಿ ಭೇಟಿ

gayi

Davanagere; ಗಾಯಿತ್ರಿ ಸಿದ್ದೇಶ್ವರ್‌ ಅಂತಿಮ ನಾಮಪತ್ರ ಸಲ್ಲಿಕೆ; ಭರ್ಜರಿ ಮೆರವಣಿಗೆ

4-shirva

Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.