ಕಳಪೆ ಕೂಗು; 3,789 ಮಲ್ಟಿ ಚೆಕ್ಡ್ಯಾಂಗಳ ನೈಜತೆ ತನಿಖೆ
ನರೇಗಾದಲ್ಲಿ ನಡೆದ ಕಾಮಗಾರಿ ಪರಿಶೀಲನೆ
Team Udayavani, Nov 29, 2019, 11:09 AM IST
ದತ್ತು ಕಮ್ಮಾರ
ಕೊಪ್ಪಳ: ಉದ್ಯೋಗ ಖಾತ್ರಿ ಯೋಜನೆಯಡಿ ನಿರ್ಮಿಸಿರುವ ಆರ್ಚ್ ಮಲ್ಟಿ ಚೆಕ್ಡ್ಯಾಂಗಳಲ್ಲಿ ಹಲವಾರು ಕಳಪೆಯಾಗಿವೆ ಎನ್ನುವ ಕೂಗು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಇಲಾಖೆ ಆಯುಕ್ತರು 26 ಜಿಲ್ಲೆಗಳಲ್ಲಿ ನಿರ್ಮಾಣ ಗೊಂಡಿರುವ 3,783 ಚೆಕ್ಡ್ಯಾಂಗಳ ನೈಜತೆ ಪರಿಶೀಲನೆ ನಡೆಸಿ ವಾಸ್ತವ ವರದಿ ನೀಡುವಂತೆ ಸೂಚಿಸಿದ್ದು, ವಿಶೇಷ ತನಿಖಾ ತಂಡ ಪರಿಶೀಲನೆ ನಡೆಸುತ್ತಿದೆ.
ನರೇಗಾದಡಿ ನಿರ್ಮಾಣಗೊಂಡ ಪ್ರತಿಯೊಂದು ಚೆಕ್ ಡ್ಯಾಂಗೂ 10 ಲಕ್ಷಕ್ಕೂ ಹೆಚ್ಚು ಹಣ ವೆಚ್ಚವಾಗಿದೆ. ಅಂದರೆ 3783 ಚೆಕ್ಡ್ಯಾಂಗಳಿಗೆ ಕೋಟ್ಯಂತರ ರೂ.
ವ್ಯಯ ಮಾಡಲಾಗಿದೆ. ಈ ಬಗ್ಗೆ ತನಿಖೆ ನಡೆಸಿ ರೈತರ ಹಿತ ಕಾಯಬೇಕೆನ್ನುವ ಕೂಗುಗಳು ಕೇಳಿದ್ದರಿಂದ ತನಿಖೆಯ ಕಾರ್ಯವೂ ಭರದಿಂದ ಸಾಗಿದೆ. ಚೆಕ್ ಡ್ಯಾಂಗಳನ್ನು ಬೇಕಾಬಿಟ್ಟಿಯಾಗಿ, ಕಡಿಮೆ ವೆಚ್ಚದಲ್ಲಿ ನಿರ್ಮಿಸಲಾಗಿದೆ ಎನ್ನುವ ಆಪಾದನೆಗಳು ಇವೆ. ಈ ಯೋಜನೆ ರೈತರಿಗೆ ಅನುಕೂಲವಾಗಿದ್ದರೂ ಕೆಲಸ ಮಾಡಿದ ಗುತ್ತಿಗೆದಾರರು, ಅಧಿ ಕಾರಿಗಳ ಆಟದಿಂದ ಚೆಕ್ ಡ್ಯಾಂಗಳು ಅರ್ಥವನ್ನೇ ಕಳೆದುಕೊಂಡಿವೆ. ಇದಕ್ಕೆ ಸಾಕ್ಷಿ ಎಂಬಂತೆ ಕೊಪ್ಪಳ ಜಿಲ್ಲೆಯಲ್ಲಿ ನಿರ್ಮಾಣಗೊಂಡ ಚೆಕ್ಡ್ಯಾಂಗಳ ಬಗ್ಗೆಯೂ ಪರಿಶೀಲನೆಗೆ ರೈತರು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.
ಎಲ್ಲೆಲ್ಲಿ ನಡೆಯಲಿದೆ ತನಿಖೆ?: ಬಾಗಲಕೋಟೆಯಲ್ಲಿ 100, ಬೆಂಗಳೂರು ಗ್ರಾಮಾಂತರ 20, ರಾಮನಗರ 103, ಬೆಳಗಾವಿ 209, ಬಳ್ಳಾರಿ 401, ಬೀದರ್ 209, ಚಾಮರಾಜ ನಗರ 55, ಮೈಸೂರು 65, ಚಿಕ್ಕಬಳ್ಳಾಪೂರ 64, ಕೋಲಾರ 88, ಚಿಕ್ಕಮಗಳೂರು 28, ಶಿವಮೊಗ್ಗ 107, ಚಿತ್ರದುರ್ಗ 326, ದಾವಣಗೆರೆ 82, ಹಾಸನ 73, ದಕ್ಷಿಣ ಕನ್ನಡ 102, ಮಂಡ್ಯ 110, ಧಾರವಾಡ 99, ಉತ್ತರ ಕನ್ನಡ 12, ಗದಗ 197, ಹಾವೇರಿ 30, ಕಲಬುರಗಿ 440, ಯಾದಗಿರಿ 178, ಕೊಪ್ಪಳ 221, ರಾಯಚೂರು 239, ವಿಜಯಪುರ ಜಿಲ್ಲೆಯಲ್ಲಿ 224 ಸೇರಿ ಒಟ್ಟು 3783 ಮಲ್ಟಿ ಆರ್ಚ್ ಚೆಕ್ಡ್ಯಾಂಗಳ ಸ್ಥಿತಿಗತಿಯ ಕುರಿತು ತನಿಖಾ ತಂಡಗಳು ನೈಜತೆ ತಪಾಸಣೆ ನಡೆಸಿ ವರದಿ ನೀಡಲಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್
Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ
Kalaburagi; ಕಾಂಗ್ರೆಸ್ ಸರಕಾರ ರೈತರಿಗೆ ಭಿಕ್ಷುಕರಂತೆ 2ಸಾವಿರ ಪರಿಹಾರ ನೀಡಿದೆ: ವಿಜಯೇಂದ್ರ
Kalaburagi;ಆನೆ ಪ್ರತಿಮೆ ಏರಿ ನಾಮಪತ್ರ ಸಲ್ಲಿಸಲು ಬಂದ ಹುಚ್ಚಪ್ಪ
ಸಚಿವರು ಲೀಡ್ ಕೊಡಿಸದಿದ್ದರೆ ಪದತ್ಯಾಗ ಅನಿವಾರ್ಯ: ಪ್ರಿಯಾಂಕ್