ಬರ ‘ಬವಣೆ’ಯಲ್ಲೂ ಬೆಳೆಯಿತು “ನವಣೆ’
ಕಡಿಮೆ ಖರ್ಚಿನಲ್ಲೂ ಉತ್ತಮ ಇಳುವರಿಮಳೆ ಕೊರತೆ ಸಿರಿಧಾನ್ಯ ಬೆಳೆಗೆ ಆಗದು ತೊಂದರೆ
Team Udayavani, Sep 26, 2019, 6:34 PM IST
ಕುಷ್ಟಗಿ: ತಾಲೂಕಿನ ಹಂಚಿನಾಳದ ರೈತ ಈಶಪ್ಪ ಮೆಳ್ಳಿ ಅವರು ಒಂದೂವರೆ ಎಕರೆ ಜಮೀನಿನಲ್ಲಿ ಬೆಳೆದ ನವಣೆ ಬರ ಪರಿಸ್ಥಿತಿಯಲ್ಲಿ ಉತ್ತಮ ಬೆಳೆ ಬಂದಿದೆ.
ಉದ್ದುಮ ಹಾರಕ, ಕೋರಲೆ, ಬರಗು, ನವಣೆ ಇತ್ಯಾದಿ ಸಿರಿಧಾನ್ಯ ಪ್ರಸ್ತುತ ಪ್ರಮುಖ ಆಹಾರ ಬೆಳೆ ಅತಿ ಕಡಿಮೆ ಮಳೆ ಇರುವ ಪ್ರದೇಶಗಳಲ್ಲೂ ಉತ್ತಮ ಬೆಳೆ ನಿರೀಕ್ಷಿಸಿಸಬಹುದಾಗಿದೆ. ಶುಷ್ಕ, ಒಣ ಪರಿಸ್ಥಿತಿಗಳಲ್ಲಿ ಕಡಿಮೆ ಫಲವತ್ತತೆಯಲ್ಲೂ ಈ ಬೆಳೆ ಬೆಳೆಬಹುದಾಗಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಸಿರಿಧಾನ್ಯಕ್ಕೆ ಬೇಡಿಕೆ ಕಡಿಮೆಯಾದ ಹಿನ್ನೆಲೆಯಲ್ಲಿ ಇವನ್ನು ಬೆಳೆಯುವಲ್ಲಿ ರೈತರಲ್ಲಿ ನಿರಾಸಕ್ತಿ ಕಂಡು ಬಂದಿದೆ. ಇದೇ ಸಂಧರ್ಭದಲ್ಲಿ ರೈತ ಸಿರಿ ಯೋಜನೆ ಜಾರಿಯಲ್ಲಿದ್ದು, ಹಂಚಿನಾಳ ರೈತ ಈಶಪ್ಪ ಮೆಳ್ಳಿ ತಮ್ಮ ಮೂರು ಎಕರೆ ಜಮೀನಿನಲ್ಲಿ ಬೆಳೆದ ನವಣೆ ಮಳೆ ಅಭಾವದಲ್ಲೂ ಸಮೃದ್ಧ ಇಳುವರಿ ಬಂದಿರುವುದು ರೈತರಲ್ಲಿ ಸಂತಸ ಮೂಡಿಸಿದೆ.
ರೈತ ಈಶಪ್ಪ ಮೆಳ್ಳಿ ಮೂರು ಎಕರೆ ಜಮೀನನಲ್ಲಿ ಕೃಷಿ ಮಾಡುತ್ತಿದ್ದು, ಕೊಳವೆಬಾವಿ ಅಳವಡಿಸಿಕೊಂಡಿದ್ದಾರೆ. ಅಂತರ್ಜಲ ತೀವ್ರ ಕೊರತೆ ಹಿನ್ನೆಲೆಯಲ್ಲಿ ಅಗತ್ಯ ಸಂದರ್ಭದಲ್ಲಿ ಒಮ್ಮೆ ಮಾತ್ರ
ಕೊಳವೆಬಾವಿ ನೀರನ್ನು ತುಂತುರು ನೀರಾವರಿ ಮೂಲಕ ಬಳಸಿಕೊಳ್ಳಲಷ್ಟೇ ಸಾಕಾಗುತ್ತದೆ. ರೈತ ಈಶಪ್ಪ ಅವರು, ಮಳೆಯಾಶ್ರಿತ ಬೆಳೆ ಬೆಳೆಯುವುದು ಅನಿವಾರ್ಯ ಪರಿಸ್ಥಿತಿಯಲ್ಲೂ, ಒಂದೂವರೆ ಎಕರೆ ಹತ್ತಿ ಬೆಳೆದಿದ್ದು, ಇನ್ನೂ ಒಂದೂವರೆ ಎಕರೆಯಲ್ಲಿ
ರೈತ ಸಿರಿ ಯೋಜನೆಯಲ್ಲಿ ನವಣೆ ಎಸ್.ಎಂ.ಟಿ 100-1 ಈ ತಳಿ ಬೆಳೆದಿದ್ದಾರೆ. ಸದ್ಯ ಹತ್ತಿ ಕಾಯಿ ಕಟ್ಟುವ ಹಂತದಲ್ಲಿದೆ. ನವಣೆ ಮಾತ್ರ ಮಳೆ ಅಭಾವದಲ್ಲೂ ಸಮೃದ್ಧ ಇಳುವರಿ ಬಂದಿದ್ದು, ಮಳೆ ತೀರ ಅಭಾವ ಪರಿಸ್ಥಿತಿಯಲ್ಲಿ ಬೆಳೆ ಒಣಗುವುದನ್ನು ನೋಡಲಾಗದೇ ತುಂತುರು ನೀರಾವರಿ ಮೂಲಕ ನೀರುಣಿಸಿದ್ದರಿಂದ ನವಣೆ ಬಂಪರ್ ಇಳುವರಿ ಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election: ಮಹಿಳೆ ಅಡುಗೆ ಮನೆಗಷ್ಟೇ ಸೀಮಿತವಲ್ಲ: ಗಾಯತ್ರಿ ಸಿದ್ದೇಶ್ವರ
ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ್ ನಾಯ್ಕ ಸೋನಿ ?
Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಣೆ ಮಾಡಿದ NIA
LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ
ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು
MUST WATCH
ಹೊಸ ಸೇರ್ಪಡೆ
Lok Sabha Election: ಮಹಿಳೆ ಅಡುಗೆ ಮನೆಗಷ್ಟೇ ಸೀಮಿತವಲ್ಲ: ಗಾಯತ್ರಿ ಸಿದ್ದೇಶ್ವರ
Kannada Cinema; ಚಿತ್ರೀಕರಣ ಮುಗಿಸಿದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’
ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ್ ನಾಯ್ಕ ಸೋನಿ ?
JDS; ಮೂವರು ಅಭ್ಯರ್ಥಿಗಳ ಪಟ್ಟಿ ಪ್ರಕಟ: ಕೋಲಾರಕ್ಕೆ ಮಲ್ಲೇಶ್ ಬಾಬು
Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಣೆ ಮಾಡಿದ NIA