ಅತಿವೃಷ್ಟಿ ಪರಿಣಾಮ: ಬೆಳೆಗಳಿಗೆ ಕೊಳೆಬಾಧೆ
Team Udayavani, Aug 29, 2019, 1:31 PM IST
ಲಕ್ಷ್ಮೇಶ್ವರ: ರೋಗಬಾಧೆಗೆ ತುತ್ತಾಗಿರುವ ಶೇಂಗಾ ಬೆಳೆಗೆ ರೈತರು ಕ್ರಿಮಿನಾಶಕ ಸಿಂಪಡಣೆ ಮಾಡಿದರು.
ಲಕ್ಷ್ಮೇಶ್ವರ: ಈ ವರ್ಷದ ಮುಂಗಾರು ಮಳೆ ಕೊಂಚ ತಡವಾದರೂ ಹದವರ್ತಿ ಮಳೆಯಾಗಿದ್ದರಿಂದ ಮುಂಗಾರಿನ ಬಹುತೇಕ ಬೆಳೆಗಳು ಉತ್ತಮವಾಗಿಯೇ ಬೆಳೆದಿದ್ದವು. ಆದರೆ ಆಗಸ್ಟನಲ್ಲಿ ಉಂಟಾದ ಅತಿವೃಷ್ಟಿಯಿಂದಾಗಿ ಎಲ್ಲ ಬೆಳೆಗಳೂ ಕೀಟಬಾಧೆ ಮತ್ತು ತೇವಾಂಶ ಹೆಚ್ಚಳದಿಂದ ಕೊಳೆಬಾಧೆಗೆ ತುತ್ತಾಗಿವೆ.
ಮುಖ್ಯವಾಗಿ ರೈತರ ಪ್ರಮುಖ ವಾಣಿಜ್ಯ ಬೆಳೆಯಾದ ಶೇಂಗಾ ಬೆಳೆಗೀಗ ರಸಹೀರುವ ಕೀಟಬಾಧೆ, ಎಲೆಚುಕ್ಕಿ ರೋಗ, ಸುರುಳಿಪೂಚಿ ಜೊತೆಗೆ ತೇವಾಂಶ ಹೆಚ್ಚಳದಿಂದ ಹಳದಿ ರೋಗದ ಬಾಧೆಯಿಂದ ಹೂವು ಬಿಡುವ ಹಂತದಲ್ಲಿರುವ ಶೇಂಗಾ ಬೆಳೆ ಹಾನಿಗೀಡಾಗಿದೆ. ಇದರಿಂದ ಬೆಳೆ ಉಳಿಸಿಕೊಳ್ಳಲು ರೈತರು ಕ್ರಿಮಿನಾಶಕ ಮತ್ತು ರಸಗೊಬ್ಬರಗಳ ಬಳಕೆ ಮಾಡುವ ಮೂಲಕ ಹೆಣಗಾಡುತ್ತಿದ್ದಾರೆ. ಸತತ ಬರಗಾಲದ ಸುಳಿಗೆ ಸಿಲುಕಿ ನಲುಗಿದ್ದ ರೈತ ಸಮುದಾಯ ಈ ವರ್ಷವಾದರೂ ಉತ್ತಮ ಮಳೆ ಬೆಳೆ ಬಂದು ಸಂಕಷ್ಟ ಪರಿಹಾರವಾದೀತು ಎಂದು ನಂಬಿದ್ದ ರೈತರಿಗೆ ಮತ್ತೇ ಬರ ಸಿಡಿಲಿನಂತೆ ಹಸಿಬರ ಬಂದೊದಗಿ ಬೆಳೆ ಕೈ ತಪ್ಪುವ ಆತಂಕಕ್ಕೆ ಸಿಲುಕಿದ್ದಾರೆ..
ಪ್ರಸಕ್ತ ಹಂಗಾಮಿಗೆ ತಾಲೂಕಿನಲ್ಲಿ ಒಟ್ಟು 58913 ಹೆಕ್ಟೇರ್ ಪ್ರದೇಶ ಬಿತ್ತನೆಯಾಗಿದ್ದು, ಅದರಲ್ಲಿ 18670 ಹೆಕ್ಟೇರ್ ಜಮೀನಿನಲ್ಲಿ ಶೇಂಗಾ ಬಿತ್ತನೆಯಾಗಿದೆ. ಈಗ ಹೂವು ಬಿಡುವ, ಕಾಯಿಬೇರು ಚುಚ್ಚುವ ಹಂತದಲ್ಲಿರುವಾಗ ಬೆಳೆಗೆ ಸುರಳಿಪುಚಿ, ರಸಹೀರುವ ಕಿಟಭಾದೆ, ಎಲೆಚುಕ್ಕಿ ಮತ್ತು ಹಳದಿ, ನಂಜಾಣು, ತಾಮ್ರದ ರೋಗ ಗಳು ಕಾಣಿಸಿಕೊಂಡಿದ್ದು, ರೈತರನ್ನು ಆತಂಕಕ್ಕೀಡು ಮಾಡಿದೆ. ತಾಲೂಕಿನ ಅಕ್ಕಿಗುಂದ, ಲಕ್ಷ್ಮೇಶ್ವರ, ರಾಮಗೇರಿ, ಬಸಾಪುರ, ಯಳವತ್ತಿ, ಯತ್ನಳ್ಳಿ, ಅಡರಕಟ್ಟಿ ಮತ್ತಿತರ ಕಡೆ ಶೇಂಗಾ ಬೆಳೆಗೆ ರೋಗಬಾಧೆ ಕಾಣಿಸಿಕೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election: ‘ಬಿವೈಆರ್ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’
ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ
Kushtagi: ನಿರೀಕ್ಷಿತ ಫಲಿತಾಂಶ ಬಾರದ ಹಿನ್ನೆಲೆ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ
Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು
Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್
MUST WATCH
ಹೊಸ ಸೇರ್ಪಡೆ
Lok Sabha Election: ‘ಬಿವೈಆರ್ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’
ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ
Kushtagi: ನಿರೀಕ್ಷಿತ ಫಲಿತಾಂಶ ಬಾರದ ಹಿನ್ನೆಲೆ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ
Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು
Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್