ಲಕ್ಷ್ಮೀಕಾಂತಸ್ವಾಮಿಯ ಅದ್ಧೂರಿ ರಥೋತ್ಸವ
Team Udayavani, Mar 25, 2019, 1:19 PM IST
ನಂಜನಗೂಡು: ತಾಲೂಕು ಕಳಲೆ ಗ್ರಾಮದ ಶ್ರೀಲಕ್ಷ್ಮೀಕಾಂತಸ್ವಾಮಿ ಅವರ ಬ್ರಹ್ಮೋತ್ಸವ ಹಾಗೂ ಜಾತ್ರಾ ಮಹೋತ್ಸವ ಅದ್ಧೂರಿಯಾಗಿ ನಡೆಯಿತು. ಈ ವೇಳೆ ನಂಜನಗೂಡು ಶ್ರೀಕಂಠೇಶ್ವರ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಕುಮಾರಸ್ವಾಮಿ ಬ್ರಹ್ಮೋತ್ಸವಕ್ಕೆ ಚಾಲನೆ ನೀಡಿದರು.
ಶ್ರೀಲಕ್ಷ್ಮೀಕಾಂತಸ್ವಾಮಿಯ ಜಾತ್ರಾ ಮಹೋತ್ಸವ, ಬ್ರಹ್ಮೋತ್ಸವ ಪ್ರಯುಕ್ತ ಬೆಳಗ್ಗೆ 7.47ರಿಂದ 8.10 ಸಮಯದ ಶುಭ ಲಗ್ನದಲ್ಲಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.
ಈ ವೇಳೆ ಲಕ್ಷ್ಮೀಕಾಂತ ದೇವಾಲಯ ಪಾರುಪತ್ತೆಗಾರರಾದ ಜಯರಾಮು, ದೇವಸ್ಥಾನದ ಸಮಿತಿ ಅಧ್ಯಕ್ಷ ಪುಟ್ಟರಂಗಶೆಟ್ಟಿ, ಶಶಿರೇಖಾ, ಮಂಜುಮಧು, ಕಳಲೆ ಗ್ರಾಪಂ ಅಧ್ಯಕ್ಷೆ ಲತಾ, ಮಹೇಶ್ ಗ್ರಾಮಸ್ಥರು, ಗ್ರಾಮದ ಯಜಮಾನರು, ರಥದ ಉಸ್ತುವಾರಿ ಯುವಕರು ಇದ್ದರು.
ಇತಿಹಾಸ ಪ್ರಸಿದ್ಧ ದೇವಾಲಯಗಳ ಸಾಲಿಗೆ ಸೇರಿದ ಕಳಲೆ ಗ್ರಾಮದ ಶ್ರೀಲಕ್ಷ್ಮೀಕಾಂತಸ್ವಾಮಿ ದೇವಾಲಯ, ನಂಜನಗೂಡಿನಿಂದ 5 ಕಿ.ಮೀ.ಅಂತರದಲ್ಲಿದೆ. ರಾಜರ ಆಳ್ವಿಕೆ, ದಳವಾಯಿಗಳ ಆಡಳಿತದಲ್ಲಿ ಈ ಗ್ರಾಮ ಪ್ರಸಿದ್ಧಿಪಡೆದಿತ್ತು. ಪ್ರತಿ ವರ್ಷದಂತೆ ಈ ವರ್ಷವೂ ಶ್ರೀಕಂಠೇಶ್ವರಸ್ವಾಮಿಯ ಜಾತ್ರಾ ಮಹೋತ್ಸವದ 5ದಿನಗಳ ನಂತರ ಜಾತ್ರಾ ಆಚರಿಸುವ ಪದ್ಧತಿಯಿದೆ.
ಶ್ರೀರಂಗಪಟ್ಟಣದ ರಾಜ ಟಿಪ್ಪುಸುಲ್ತಾನ್ ದಂಡೆತ್ತಿ ಬಂದು, ವಜ್ರವೈಢೂರ್ಯಗಳನ್ನು, ಶ್ರೀಲಕ್ಷ್ಮೀಕಾಂತದೇವರ ಉತ್ಸವ ಮೂರ್ತಿಯನ್ನು ಅಪಹರಿಸಿದ್ದರು. ಗ್ರಾಮದ ಮುಖಂಡರು ಟಿಪ್ಪು ಸುಲ್ತಾನ್ರಲ್ಲಿ ಮೊರೆ ಹೋಗಿ ಮತ್ತೆ ದೇವರ ವಿಗ್ರಹ, ಬೆಳ್ಳಿ ಪಾತ್ರೆ ಪಡೆದ ಇತಿಹಾಸ ಈ ದೇವಾಲಯದ್ದಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
MUST WATCH
ಹೊಸ ಸೇರ್ಪಡೆ
Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ
Daily Horoscope: ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ತೃಪ್ತಿ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ
Modi ಹಸಿ ಸುಳ್ಳು: ಸಿಎಂ ಸಿದ್ದರಾಮಯ್ಯ ಕೆಂಡ; ಒಬಿಸಿ, ಎಸ್ಸಿ ಮೀಸಲಾತಿ ಹೇಳಿಕೆಗೆ ವಿರೋಧ
Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ
Lok Sabha Election; ಹಂತ 1: 14 ಕ್ಷೇತ್ರಗಳ ಬಹಿರಂಗ ಪ್ರಚಾರ ಅಂತ್ಯ: ನಾಳೆ ಮತದಾನ