ಸೇನೆ-ಎನ್ಡಿಆರ್ಎಫ್ ತಂಡದ ಸದಸ್ಯರಿಗೆ ರಕ್ಷಾಬಂಧನ
Team Udayavani, Aug 16, 2019, 11:10 AM IST
ಲಿಂಗಸುಗೂರು: ನದಿ ತೀರದ ಯಳಗುಂದಿ ಗ್ರಾಮದಲ್ಲಿ ಸೇನೆ ಹಾಗೂ ಎನ್ಡಿಆರ್ಎಫ್ ತಂಡದ ಸದಸ್ಯರಿಗೆ ತಹಶೀಲ್ದಾರ್ ಕಚೇರಿ ಮಹಿಳಾ ಸಿಬ್ಬಂದಿ ರಾಖೀ ಕಟ್ಟಿ ಶುಭ ಕೋರಿದರು.
ಲಿಂಗಸುಗೂರು: ಪ್ರವಾಹ ನಿರ್ವಹಣೆಗಾಗಿ ತಾಲೂಕಿಗೆ ಆಗಮಿಸಿದ್ದ ಸೇನಾ ಪಡೆ ಹಾಗೂ ಎನ್ಡಿಆರ್ಎಫ್ ತಂಡದ ಸದಸ್ಯರಿಗೆ ತಹಶೀಲ್ದಾರ್ ಕಚೇರಿ ಮಹಿಳಾ ಸಿಬ್ಬಂದಿ ಗುರುವಾರ ರಾಖೀ ಕಟ್ಟುವ ಮೂಲಕ ರಕ್ಷಾ ಬಂಧನವನ್ನು ವಿಶೇಷವಾಗಿ ಆಚರಿಸಿದರು.
ತಾಲೂಕಿನ ಕೃಷ್ಣಾ ನದಿಯಲ್ಲಿ ಪ್ರವಾಹ ಪೀಡಿತ ಗ್ರಾಮಗಳಲ್ಲಿ ಸಂತ್ರಸ್ತರ ನೆರವಿಗಾಗಿ ಕಳೆದ ಹತ್ತು ದಿನಗಳಿಂದ ಜೀವ ಒತ್ತೆ ಇಟ್ಟು ಸೇವೆ ಸಲ್ಲಿಸುತ್ತಿರುವ ಆರ್ಮಿ ಹಾಗೂ ಎನ್ಡಿಆರ್ಎಫ್ ತಂಡದವರಿಗೆ ರಾಖೀ ಕಟ್ಟಿ ಸಿಹಿ ತಿನಿಸಿ ಮತ್ತಷ್ಟು ದೇಶ ಸೇವೆ ಮಾಡಲೆಂದು ತಹಶೀಲ್ದಾರ್ ಕಚೇರಿ ಸಿಬ್ಬಂದಿಗಳಾದ ಶಾರದಾ, ಸುಚೇತನಾ ಇತರರು ಶುಭ ಹಾರೈಸಿದರು.
ಪ್ರವಾಹ ಪರಿಸ್ಥಿತಿಯಲ್ಲಿ ತಮ್ಮ ಕುಟಂಬವನ್ನು ಬಿಟ್ಟು ತಾಲೂಕಿನ ಜನತೆಯನ್ನು ಸಂಕಷ್ಟದಿಂದ ದೂರ ಮಾಡಲು ಆಗಮಿಸಿದ ಸೈನಿಕರು ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ಎಲ್ಲ ಸದಸ್ಯರು ರಕ್ಷಾ ಬಂಧನ ಹಬ್ಬದಿಂದ ವಂಚಿತರಾಗಬಾರದು ಎಂಬ ದೃಷ್ಟಿಯಿಂದ ಇಲ್ಲಿ ಅವರಿಗೆ ನಾವೇ ಸಹೋದರಿಯರಿದ್ದಂತೆ ಎಂದು ಸಿಬ್ಬಂದಿಗಳು ರಾಖೀ ಕಟ್ಟಿ ಸಂಭ್ರಮಿಸಿದರು.
ಇದೇ ವೇಳೆ ಸಹಾಯಕ ಆಯುಕ್ತ ರಾಜಶೇಖರ ಡಂಬಳ, ತಹಶೀಲ್ದಾರ್ ಚಾಮರಾಜ ಪಾಟೀಲ, ಎನ್ಡಿಆರ್ಎಫ್ ಕಮಾಂಡರ್ ಬಲಬೀರಸಿಂಗ್, ಕರೆ ಪವರ್ ಪ್ರೊಜೆಕ್ಟ್ ಮುರುಳಿ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು
Politics: ಚಿತ್ರದುರ್ಗ ರಾಜಕೀಯ ನಿರಾಶ್ರಿತರ ಕೇಂದ್ರವೇ?: ರಘುಚಂದನ್
Mandya: ಬಿಜೆಪಿ ಮುಖಂಡರಿಗೆ ವೇದಿಕೆ ಬಿಟ್ಟು ಕೆಳಗೆ ಕುಳಿತ ಮಂಡ್ಯ ದಳಪತಿಗಳು!
Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್ ಮಧ್ವರಾಜ್
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ