ಒಂದೇ ರಾತ್ರಿ 12 ರೈತರ ಕೊಳವೆ ಬಾವಿ ಕೇಬಲ್ ಕಟ್
ಮೂವತ್ತರಿಂದ, ನೂರೈವತ್ತು ಅಡಿಗಳಿಗೂ ಮೀರಿ ಕೇಬಲ್ ಕಳವು ಆಗಿದೆ
Team Udayavani, Mar 31, 2022, 6:32 PM IST
ನಾಗಮಂಗಲ: ಜಮೀನು, ತೋಟಗಳಲ್ಲಿ ರೈತರು ಕೊಳವೆ ಬಾವಿಗೆ ಅಳವಡಿಸಿರುವ ಕೇಬಲ್ ಕದ್ದೊಯ್ದಿರುವ ಘಟನೆ ತಾಲೂಕಿನ ದೇವಲಾಪುರ ಹೋಬಳಿ ಮೈಲಾರಪಟ್ಟಣದ ದಾಖಲೆ ಗ್ರಾಮಗಳಾದ ಬಿಟ ಗೋನಹಳ್ಳಿ ಮತ್ತು ಗೊಗ್ಗನಕೊಪ್ಪಲು ಗ್ರಾಮಗಳಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ನಾಗಮಂಗಲ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಈ ದುಷ್ಕೃತ್ಯ ನಡೆದಿದ್ದು, ಬೆಳಗ್ಗೆ ರೈತರು ತಮ್ಮಕೊಳವೆ ಬಾವಿಯಿಂದ ನೀರು ಹಾಯಿಸಲು ಹೋದಾಗ ಕಳವಿನ ಘಟನೆ ಬೆಳಕಿಗೆ ಬಂದಿದೆ.
ಮೀಟರ್ಗೆ 150 ರೂ.ಗಿಂತ ಹೆಚ್ಚು: ಈ ಕುರಿತು “ಉದಯವಾಣಿ’ಯೊಂದಿಗೆ ತಮ್ಮ ಅಳಲು ತೋಡಿ ಕೊಂಡ ರೈತರಾದ ಲಕ್ಷ್ಮಣ, ಗಿರೀಶ್ ಮತ್ತಿತರರು, ಕೊಳವೆ ಬಾವಿಯಿಂದ ನೀರೆತ್ತಲು ಕೊಳವೆ ಬಾವಿಯ ಮೋಟಾರ್ ಮತ್ತು ಸ್ಟ್ರಾಟರ್ಗೆ ಸಂಪರ್ಕ ಕಲ್ಪಿಸುವ ಕೇಬಲ್ಗಳನ್ನು ಕಳ್ಳರು ತುಂಡರಿಸಿಕೊಂಡು ಹೋಗಿದ್ದಾರೆ. ಮೂವತ್ತರಿಂದ, ನೂರೈವತ್ತು ಅಡಿಗಳಿಗೂ ಮೀರಿ ಕೇಬಲ್ ಕಳವು ಆಗಿದೆ. ಮೀಟರ್ಗೆ 150 ರೂ. ಗಿಂತ ಹೆಚ್ಚು ಬೆಲೆ ಬಾಳುವಕೇಬಲ್ ಇದಾಗಿದ್ದು ರೈತರಿಗೆ ನಷ್ಟ ತುಂಬಿ ಕೊಡುವವರು ಯಾರು ಎಂದು ನೋವನ್ನು ತೋಡಿಕೊಂಡರು.
ಕರೆಂಟ್ ಕಣ್ಣಾಮುಚ್ಚಾಲೆ: ಬೇಸಿಗೆಯಲ್ಲಿ ವಿದ್ಯುತ್ ಕಣ್ಣಮುಚ್ಚಾಲೆ ನಡುವೆ ಕೇಬಲ್ ಕಳವು ಆಗಿದ್ದು ಒಣಗುತ್ತಿರುವ ಗಿಡಗಂಟಿಗಳಿಗೆ ನೀರು ಹಾಯಿಸಲು ತ್ರಾಸ ಪಡುವಂತಾಗಿದೆ. ಪೊಲೀಸರು ಗ್ರಾಮಗಳಲ್ಲಿ ಹೆಚ್ಚು ಗಸ್ತು ಹಾಕುವ ಮೂಲಕ ಇಂಥ ಕಳವು ಪ್ರಕರಣ ತಪ್ಪಿಸಬೇಕೆಂದು ಮನವಿ ಮಾಡಿದ್ದಾರೆ.
ಮಾಹಿತಿ ನೀಡಿ: ಪೊಲೀಸ್ ಅಧಿಕಾರಿಯೊಬ್ಬರು ಮಾತನಾಡಿ, ಗ್ರಾಮಗಳಲ್ಲಿ ಅನುಮಾನಾಸ್ಪದವಾಗಿ ತಿರುಗಾಡುವ ವ್ಯಕ್ತಿಗಳ ಬಗ್ಗೆ ಗ್ರಾಮಸ್ಥರು ಎಚ್ಚರಿಕೆ ವಹಿಸಬೇಕು. ಜತೆಗೆ ಅಂಥವರ ಬಗ್ಗೆ ಪೊಲೀಸ್ ಇಲಾಖೆಗೆ ಮಾಹಿತಿ ನೀಡಬೇಕು ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಲಿಂಗಾಯತರಿಗೆ ಸಿಎಂ ಹುದ್ದೆ ವಂಚಿಸಿದ್ದು ಕುಮಾರಸ್ವಾಮಿ: ಸಚಿವ ಎಂ.ಬಿ. ಪಾಟೀಲ್
Srirangapatna: ಐಸ್ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ
LS Polls 2024: ಸುಮಲತಾ ಪ್ರಚಾರಕ್ಕೆ ಬರುವುದು ರಾಜ್ಯ ನಾಯಕರ ತೀರ್ಮಾನ: ನಿಖಿಲ್
Mandya Lok Sabha Constituency; ಸ್ಟಾರ್ ಚಂದ್ರು ಪರ ಇಂದು ನಟ ದರ್ಶನ್ ಪ್ರಚಾರ
ಚುನಾವಣ ಬಾಂಡ್ ವಿಶ್ವದ ಅತಿದೊಡ್ಡ ಹಗರಣ: ರಾಹುಲ್
MUST WATCH
ಹೊಸ ಸೇರ್ಪಡೆ
Box office: ಈ ವಾರ ಬಾಲಿವುಡ್ನಲ್ಲಿ ಎರಡು ಸಿನಿಮಾಗಳು ರಿಲೀಸ್: 1st Day ಗಳಿಸಿದ್ದೆಷ್ಟು?
Congress: ಕೈಗಾರಿಕೋದ್ಯಮದಿಂದ ನಿರುದ್ಯೋಗ ಸಮಸ್ಯೆಗೆ ಪರಿಹಾರ: ಜೆಪಿ ಹೆಗ್ಡೆ
Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್
Congress: ಉತ್ಸಾಹದ ಉತ್ತುಂಗದಲ್ಲಿ ಕಾಂಗ್ರೆಸ್; ಕಾರ್ಕಳದಲ್ಲಿ ಜೆಪಿ ಪಡೆ ದಿಟ್ಟ ನಡೆ
Fraud: ರೈಸ್ ಪುಲ್ಲಿಂಗ್ ಹೆಸರಿನಲ್ಲಿ ವಂಚನೆಗೆ ಯತ್ನ; 3 ಸೆರೆ, 69.79 ಲಕ್ಷ ವಶ