ಮಂಡ್ಯ ಬಳಿ 1600 ಟನ್ ಲಿಥಿಯಂ ಪತ್ತೆ: ಎಎಂಡಿ ತಂಡದಿoದ ಪರಿಶೀಲನೆ
Team Udayavani, Jan 11, 2021, 11:00 PM IST
ಮಂಡ್ಯ: ಶ್ರೀರಂಗಪಟ್ಟಣ ತಾಲೂಕಿನ ಅಲ್ಲಾಪಟ್ಟಣ ಗ್ರಾಮದ ಬಳಿ ಅಪರೂಪದ ಲಿಥಿಯಂ ನಿಕ್ಷೇಪ ಪತ್ತೆಯಾಗಿರುವುದು ದೃಢಪಟ್ಟಿದ್ದು, ಇದು ಎಷ್ಟು ಪ್ರಮಾಣದಲ್ಲಿ ಸಿಗಲಿದೆ ಎಂದು ಸೋಮವಾರ ಕೇಂದ್ರದ ಪರಮಾಣು ಶಕ್ತಿ ಇಲಾಖೆಯ(ಡಿಎಇ) ಒಂದು ಭಾಗವಾಗಿರುವ ಪರಮಾಣು ಖನಿಜಗಳ ನಿರ್ದೇಶನಾಲಯದ ಪರಿಶೋಧನೆ ಮತ್ತು ಸಂಶೋಧನೆ(ಎಎoಡಿ)ಯ ತಂಡ ಪರಿಶೀಲನೆ ನಡೆಸಿದೆ.
ದೇಶದ ಯಾವುದೇ ಭಾಗದಲ್ಲೂ ಸಿಗದ ಅಪರೂಪದ ಲೋಹ ಇದಾಗಿದೆ ಎಂದು ಹೇಳಲಾಗುತ್ತಿದೆ. ಇದಕ್ಕಾಗಿ ಕೇಂದ್ರ ಸರ್ಕಾರ ದೇಶದ ಎಲ್ಲ ಭಾಗಗಳಲ್ಲೂ ಹುಡುಕಾಟ ನಡೆಸಿತ್ತು. ಅದರಂತೆ ಕಳೆದ ವರ್ಷ ಅಲ್ಲಾಪಟ್ಟಣ ಹಾಗೂ ಗಂಜ್ರಾ ಬಳಿಯ ಬೆಟ್ಟಗುಡ್ಡಗಳಲ್ಲಿ ಶೋಧ ನಡೆಸಿದಾಗ ಲಿಥಿಯಂ ಹಾಗೂ ಕಲ್ಲಿದ್ದಲು ಇರುವುದು ಗೊತ್ತಾಗಿತ್ತು. ಅಂದಿನಿoದಲೂ ಅಧಿಕಾರಿಗಳ ತಂಡ ಸಂಶೋಧನೆಯಲ್ಲಿ ತೊಡಗಿದ್ದರು.
ಲಿಥಿಯಂ ನಿಕ್ಷೇಪ ಬಹುಮುಖ್ಯವಾಗಿದ್ದು, ಎಲೆಕ್ಟ್ರಿಕ್ ವಾಹನಗಳು, ಲ್ಯಾಪ್ಟಾಪ್ಗಳು ಮತ್ತು ಮೊಬೈಲ್ ಫೋನ್ ರಿಚಾರ್ಜ್ ಬ್ಯಾಟರಿ ಸೇರಿದಂತೆ ವಿವಿಧ ಯಂತ್ರೋಪಕರಣಗಳ ತಯಾರಿಕೆಗೆ ಬಳಸಲಾಗುತ್ತದೆ.
ಸೋಮವಾರ ಆಗಮಿಸಿದ್ದ ಎಎಂಡಿ ಸಂಶೋಧಕರ ತಂಡ ಅಲ್ಲಾಪಟ್ಟಣದ ಗುಡ್ಡದ ಮೇಲ್ಭಾಗದ ನೆಲ ಹಾಗೂ ಸ್ವಲ್ಪ ಒಳಭಾಗದಲ್ಲಿ ಸಂಶೋಧನೆ ನಡೆಸಿದಾಗ ಅಲ್ಪ ಪ್ರಮಾಣದ ಲಿಥಿಯಂ ಇರುವುದು ದೃಢಪಟ್ಟಿದೆ. ಕಳೆದ ವರ್ಷ ಸಂಶೋಧನೆ ನಡೆಸಿದ್ದ ತಂಡ ಲಿಥಿಯಂ ಇರಬಹುದು. ಸುಮಾರು 14 ಸಾವಿರ ಟನ್ ಲಿಥಿಯಂ ಸಿಗಬಹುದು ಎಂದು ಹೇಳಲಾಗಿತ್ತು. ಆದರೆ ಸೋಮವಾರ ನಡೆಸಿದ ಸಂಶೋಧನೆ ತಂಡ ಪ್ರಾಥಮಿಕ ಸಮೀಕ್ಷೆಗಳ ಪ್ರಕಾರ 1600 ಟನ್ ಲಿಥಿಯಂ ನಿಕ್ಷೇಪ ಎಂದು ಅಭಿಪ್ರಾಯಕ್ಕೆ ಬರಲಾಗಿದೆ ಎಂದು ಹೇಳಲಾಗುತ್ತಿದೆ.
ಲಿಥಿಯಂ ನಿಕ್ಷೇಪಗಳು ಬಹಳ ಅಮೂಲ್ಯವಾದ ಸಂಪತ್ತಾಗಿದ್ದು, ಭಾರತವು ಸ್ವಾವಲಂಬನೆ ಸಾಧಿಸಲು ಹಾಗೂ ಎಲೆಕ್ಟ್ರಾನಿಕ್ಸ್ ಉತ್ಪಾದನೆಯಲ್ಲಿ ಮುಂದುವರೆಯಬೇಕಾದರೆ ಲಿಥಿಯಂ ಅಗತ್ಯವಾಗಿದೆ. ಈಗಾಗಲೇ ಭಾರತ ವಿವಿಧ ದೇಶಗಳಿಂದ ಲಿಥಿಯಂ ಅನ್ನು ಅಮದು ಮಾಡಿಕೊಳ್ಳುತ್ತಿದೆ.
ರಾಜಸ್ಥಾನ, ಛತ್ತೀಸ್ಘಡ, ಗುಜರಾತ್ ಹಾಗೂ ಒಡಿಶಾ ರಾಜ್ಯಗಳ ವಿವಿಧ ಭಾಗಗಳಲ್ಲಿ ಲಿಥಿಯಂ ನಿಕ್ಷೇಪವನ್ನು ಹೊರತೆಗೆಯುವ ಕಾರ್ಯಗಳು ನಡೆಯುತ್ತಿವೆ. ಅದರ ಮಧ್ಯೆ ಮಂಡ್ಯದ ಶ್ರೀರಂಗಪಟ್ಟಣದ ಬಳಿ ಪತ್ತೆಯಾಗಿರುವುದನ್ನು ಅಧಿಕಾರಿಗಳು ದೃಢಪಡಿಸಿದ್ದಾರೆ ಎಂದು ತಿಳಿದು ಬಂದಿದೆ.
ಕಳೆದ ವರ್ಷ ಅಲ್ಲಾಪಟ್ಟಣ ಬಳಿ ಇದೇ ಸಂಶೋಧಕರ ತಂಡ ಸ್ಥಳದಲ್ಲಿ ಬೀಡು ಬಿಟ್ಟು ನಿಕ್ಷೇಪ ಪತ್ತೆಗಾಗಿ ಹುಡುಕಾಟ ನಡೆಸಿದ್ದರು. ಆಗ ಲಿಥಿಯಂ ಇರುವುದು ದೃಢಪಟ್ಟಿತ್ತು. ನಂತರ ಕೊರೊನಾದಿಂದ ತಂಡ ಹುಡುಕಾಟ ಕಾರ್ಯ ನಿಲ್ಲಿಸಿತ್ತು. ಈಗ ಮತ್ತೆ ಮರು ಚಾಲನೆ ದೊರೆತಿದೆ.
ಶ್ರೀರಂಗಪಟ್ಟಣದ ಅಲ್ಲಾಪಟ್ಟಣ ಬಳಿ ಲಿಥಿಯಂ ಹಾಗೂ ಕಲ್ಲಿದ್ದಲು ಪತ್ತೆಯಾಗಿದೆ. ಇದು ಹಲವಾರು ವರ್ಷಗಳಿಂದ ಸಂಶೋಧನೆ ನಡೆಯುತ್ತಿದೆ. ಆದರೆ ಎಷ್ಟು ಪ್ರಮಾಣದಲ್ಲಿ ಲಭ್ಯವಾಗಲಿದೆ ಎಂಬುದರ ಬಗ್ಗೆ ಸೋಮವಾರ ಎಎಂಡಿ ತಂಡ ಪರಿಶೀಲನೆ ನಡೆಸಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆoಕಟೇಶ್ ಉದಯವಾಣಿಗೆ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Srirangapatna: ಐಸ್ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ
LS Polls 2024: ಸುಮಲತಾ ಪ್ರಚಾರಕ್ಕೆ ಬರುವುದು ರಾಜ್ಯ ನಾಯಕರ ತೀರ್ಮಾನ: ನಿಖಿಲ್
Mandya Lok Sabha Constituency; ಸ್ಟಾರ್ ಚಂದ್ರು ಪರ ಇಂದು ನಟ ದರ್ಶನ್ ಪ್ರಚಾರ
ಚುನಾವಣ ಬಾಂಡ್ ವಿಶ್ವದ ಅತಿದೊಡ್ಡ ಹಗರಣ: ರಾಹುಲ್
Lok Sabha Elections; ಜಾತಿ ಗಣತಿ ಬಗ್ಗೆ ಮೋದಿ ನಿಲುವೇನು?: ರಾಹುಲ್ ಗಾಂಧಿ
MUST WATCH
ಹೊಸ ಸೇರ್ಪಡೆ
Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ
Srirangapatna: ಐಸ್ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ
Loksabha Election; ದೇಶದಲ್ಲಿ ಹಂತ-1: ಮತ ಇಂದು
Ls Polls: ಕಾಂಗ್ರೆಸ್ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್
Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು