ಸತ್ತವನ ಹೆಸರಲ್ಲಿ ನಕಲಿ ಗುರುತಿನ ಚೀಟಿ


Team Udayavani, Nov 24, 2019, 5:10 PM IST

Udayavani Kannada Newspaper

ಮಂಡ್ಯ: ಸತ್ತವನ ಹೆಸರಲ್ಲಿ ನಕಲಿ ಚುನಾವಣಾ ಗುರುತಿನ ಚೀಟಿ ಸೃಷ್ಟಿಸಿ ಆತನಿಗೆ ಸೇರಿದ ಎರಡು ಎಕರೆ ಜಮೀನನ್ನು ಹಲವರು ಕಬಳಿಸಿರುವ ಸಂಗತಿ ನಾಗಮಂಗಲ ತಾಲೂಕು ಹೊಣಕೆರೆ ಹೋಬಳಿ ಪಡುವಲಪಟ್ಟಣ ಗ್ರಾಮದಲ್ಲಿ ನಡೆದಿದೆ.

ಈ ಸಂಬಂಧ 11 ಮಂದಿ ಆರೋಪಿಗಳ ವಿರುದ್ಧ ಗೊಲ್ಲರಹಳ್ಳಿ ಗ್ರಾಮದ ಚಿನ್ನೇಗೌಡರ ಪತ್ನಿ ಸರೋಜಮ್ಮ ಅವರು ಜಿಲ್ಲಾ ಪೊಲೀಸ್‌ ಅಧೀಕ್ಷಕರಿಗೆ ದೂರು ಸಲ್ಲಿಸಿದ್ದಾರೆ. ಮಾರುತಿ ಸ್ಟೋನ್‌ ಕ್ರಷರ್‌ ಪಾಲುದಾರರಾದ ಕೆ.ಎಂ. ರವಿ, ಎಚ್‌.ಬಿ.ಪ್ರಕಾಶ್‌, ಎಸ್‌.ನಂಜಪ್ಪ, ಚನ್ನರಾಯಪಟ್ಟಣದ ಡಿ.ಆರ್‌. ರವಿಕುಮಾರ್‌, ಪಡುವಲಪಟ್ಟಣದ

ಎಚ್‌.ಪಿ.ಕೃಷ್ಣಪ್ಪ, ಬಂಕಾಪುರ ಗ್ರಾಮದ ಲಕ್ಷ್ಮಮ್ಮ, ಮಕ್ಕಳಾದ ಬಿ.ಕೆ.ಬೋರೇಗೌಡ, ಬಿ.ಕೆ.ಮರೀಗೌಡ, ಬಿ.ಕೆ.ನಂಜೇಗೌಡ, ಲಕ್ಷ್ಮಮ್ಮ ಸೊಸೆಯಂದಿರಾದ ಕಾಮಾಕ್ಷಮ್ಮ, ಭಾಗ್ಯಮ್ಮ, ಕಲಾವತಿ ವಿರುದ್ಧ ಸರೋಜಮ್ಮ ದೂರು ದಾಖಲಿಸಿದ್ದಾರೆ.

ಏನಿದು ಪ್ರಕರಣ?:  ನಾಗಮಂಗಲ ತಾಲೂಕಿನ ಗೊಲ್ಲರಹಳ್ಳಿ ಗ್ರಾಮದ ಹಳೇ ಸ.ನಂ.5ರ (ಹೊಸ ಸರ್ವೆ ನಂ.34) ಪಡುವಲಪಟ್ಟಣ ಗ್ರಾಮದ ವಾಸಿ ಹೊನ್ನೇಗೌಡರಿಗೆ ದರಖಾಸ್ತು ಆಧಾರದ ಮೇಲೆ 1961ನೇ ಸಾಲಿನಲ್ಲಿ ಸರ್ಕಾರದಿಂದ ಷರತ್ತಿಗೊಳಪಟ್ಟು ಎರಡು ಎಕರೆ ಜಮೀನು ಮಂಜೂರಾಗಿತ್ತು. ನಂತರ ಈ ಜಮೀನನ್ನು ಹೊನ್ನೇಗೌಡರು ಬಂಕಾಪುರ ಗ್ರಾಮದ ವಾಸಿ ನಂಜೇಗೌಡರಿಗೆ 1973ರಲ್ಲಿ ಆಧಾರ ಮಾಡಿದ್ದು, ನಂತರ 1974ರಲ್ಲಿ ಕ್ರಯ ಮಾಡಿಕೊಡಲಾಗಿದೆ. ಆದರೆ, ಸರ್ಕಾರದ ದರಖಾಸ್ತು ಷರತ್ತನ್ನು ಪಾಲಿಸದೆ ಮುಂಗಡವಾಗಿ ಜಮೀನನ್ನು ಮಾರಾಟ ಮಾಡಿದ್ದರಿಂದ ನಂಜೇಗೌಡರಿಗೆ ಇದುವರೆಗೂ ಖಾತೆಯಾಗದೆ ಆರ್‌ ಟಿಸಿಯು ಹೊನ್ನೇಗೌಡರ ಹೆಸರಿನಲ್ಲೇ ಮುಂದುವರಿದಿದೆ.

1988ರಲ್ಲಿ ಜಮೀನಿನ ಮಾಲೀಕ ಹೊನ್ನೇಗೌಡರು ನಿಧನರಾಗಿದ್ದಾರೆ. ಬಳಿಕ ಆರೋಪಿಗಳೆಲ್ಲರೂ ಜಮೀನನ್ನು ಕಬಳಿಸುವ ಉದ್ದೇಶದಿಂದ ಜಮೀನಿನ ವಾರಸುದಾರ ಹೊನ್ನೇಗೌಡರು ಮೃತರಾಗಿದ್ದರೂ ಪಡುವಲಪಟ್ಟಣ ಗ್ರಾಮದ ವಾಸಿ ದಾನಮ್ಮನ ಹಾರುವೇಗೌಡರ ಮಗ ಕೃಷ್ಣಪ್ಪ ಅವರನ್ನು ಮೃತ ಹೊನ್ನೇಗೌಡ ಎಂದು ಬಿಂಬಿಸಿ ನಕಲಿ ಚುನಾವಣಾ ಗುರುತಿನ ಚೀಟಿ ಮಾಡಿಸಿದ್ದಾರೆ. ಬಳಿಕ ಬಂಕಾಪುರ ಗ್ರಾಮದ ಕುಳ್ಳೇಗೌಡನ ಹೆಂಡತಿ ಲಕ್ಷ್ಮಮ್ಮ ಅವರಿಗೆ 2016ರ ಆಗಸ್ಟ್‌ ನಲ್ಲಿ ಬೋಗಸ್‌ ಕ್ರಯ ಮಾಡಿದ್ದಾರೆ. ನಂತರ ಅದೇ ವರ್ಷದ ಅಕ್ಟೋಬರ್‌ನಲ್ಲಿ ಲಕ್ಷ್ಮಮ್ಮರವರು ತಮ್ಮ ಮೂವರು ಗಂಡುಮಕ್ಕಳೊಂದಿಗೆ ಗೊಲ್ಲರಹಳ್ಳಿ ಗ್ರಾಮದ ನಂಜಪ್ಪರವರಿಗೆ ಭೋಗ್ಯಪತ್ರ ಮಾಡಿಕೊಟ್ಟಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಭೋಗ್ಯವಾಗಿ ಪಡೆದ ಜಮೀನನ್ನು ನಂಜಪ್ಪರವರು ಹೊಸೂರು ಗ್ರಾಮದ ಪ್ರಕಾಶ್‌ ಮತ್ತು ಬಂಕಾಪುರ ಗ್ರಾಮದ ಕೆ.ಎಂ.ರವಿ ಅವರೊಂದಿಗೆ ಪಾಲುದಾರಿಕೆ ಮಾಡಿ ಕೊಂಡು ಮಾರುತಿ ಸ್ಟೋನ್‌ ಕ್ರಷರ್‌ ಮತ್ತು ಎಂ-ಸ್ಯಾಂಡ್‌ ಕಂಪನಿಯನ್ನು ಯಾವುದೇ ಪರವಾನಗಿ ಪಡೆಯದೆ, ಹಾಗೂ ಕೃಷಿ ಭೂಮಿಯನ್ನು ಕೃಷಿಯೇತರ ಉದ್ದೇಶಗಳಿಗೆ ಬಳಸಲು ಭೂ ಪರಿವರ್ತನೆಯನ್ನು ಮಾಡಿಸದೆ ಆರೋಪಿಗಳು ಜಮೀನನ್ನು ಒತ್ತುವರಿ ಮಾಡಿಕೊಂಡು ತೊಂದರೆ ನೀಡುತ್ತಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

2019ರಲ್ಲಿ ಬೋಗಸ್‌ ಕ್ರಯದ ರೂಪದಲ್ಲಿ ಪಡೆದಿದ್ದ ಜಮೀನನ್ನು ಲಕ್ಷ್ಮಮ್ಮ ಅವರು ತಮ್ಮ ಮೂವರು ಸೊಸೆಯಂದಿರಿಗೆ ದಾನಪತ್ರ ಮೂಲಕ ರಿಜಿಸ್ಟರ್‌ ಮಾಡಿಸಿದ್ದಾರೆ. ನಂತರ ಅದೇ ವರ್ಷ ಲಕ್ಷ್ಮಮ್ಮ ಹಾಗೂ ಅವರ ಮೂವರು ಸೊಸೆಯಂದಿರು ಸೇರಿಕೊಂಡು ಜಮೀನನ್ನು ಚನ್ನರಾಯಯಪಟ್ಟಣದ ರವಿಕುಮಾರ್‌ ಅವರಿಗೆ ಮಾರಾಟ ಮಾಡಿದ್ದಾರೆ ಎಂದು ದೂರಲಾಗಿದೆ. ಅಕ್ರಮವಾಗಿ ಸರ್ಕಾರದ ದರಖಾಸ್ತು ಜಮೀನನ್ನು ಕಬಳಿಸಿರುವುದಲ್ಲದೆ, ವಿನಾ ಕಾರಣ ನಮಗೆ ತೊಂದರೆ ನೀಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸರೋಜಮ್ಮ ದೂರಿನಲ್ಲಿ ತಿಳಿಸಿದ್ದಾರೆ.

ಟಾಪ್ ನ್ಯೂಸ್

Ram Navami Procession: ರಾಮನವಮಿ ಮೆರವಣಿಗೆ ವೇಳೆ ಘರ್ಷಣೆ: 20ಕ್ಕೂ ಹೆಚ್ಚು ಮಂದಿಗೆ ಗಾಯ

Ram Navami Procession: ರಾಮನವಮಿ ಮೆರವಣಿಗೆ ವೇಳೆ ಘರ್ಷಣೆ: 20ಕ್ಕೂ ಹೆಚ್ಚು ಮಂದಿಗೆ ಗಾಯ

2-shimoga

Bhadravathi: ಲಾರಿ ಡಿಕ್ಕಿ, ರೈಲು ಹಳಿಗಳು ಏರುಪೇರು; ಎರಡೂವರೆ ತಾಸು ಪ್ರಯಾಣಿಕರು ಹೈರಾಣು

1-24-thursday

Daily Horoscope: ಕೊಟ್ಟ ಮಾತಿಗೆ ತಪ್ಪದಂತೆ ಎಚ್ಚರಿಕೆ ಇರಲಿ,ಅನವಶ್ಯ ವಿವಾದಗಳಿಂದ ದೂರವಿರಿ

Elections; ದೇಶದಲ್ಲಿ ಹಂತ 1: ಬಹಿರಂಗ ಪ್ರಚಾರ ಅಂತ್ಯ, ನಾಳೆ ಮತದಾನ

Elections; ದೇಶದಲ್ಲಿ ಹಂತ 1: ಬಹಿರಂಗ ಪ್ರಚಾರ ಅಂತ್ಯ, ನಾಳೆ ಮತದಾನ

1eqqewe

IPL; ಪಂಜಾಬ್‌ ಕಿಂಗ್ಸ್‌-ಮುಂಬೈ ಇಂಡಿಯನ್ಸ್‌ : ಒಂದೇ ದೋಣಿಯ ಪಯಣಿಗರು

Lok Sabha Polls 2024 ಕರ್ನಾಟಕದ ನಂಟು ಹೊರರಾಜ್ಯದಲ್ಲಿ ಸ್ಪರ್ಧೆ

Lok Sabha Polls 2024; ಕರ್ನಾಟಕದ ನಂಟು ಹೊರರಾಜ್ಯದಲ್ಲಿ ಸ್ಪರ್ಧೆ

ಭಾರತದ ಜಿಡಿಪಿ ಶೇ.6.8 ದರದಲ್ಲಿ ಪ್ರಗತಿ: ಐಎಂಎಫ್ ಅಂದಾಜು

ಭಾರತದ ಜಿಡಿಪಿ ಶೇ.6.8 ದರದಲ್ಲಿ ಪ್ರಗತಿ: ಐಎಂಎಫ್ ಅಂದಾಜು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mandya Lok Sabha Constituency; ಸ್ಟಾರ್‌ ಚಂದ್ರು ಪರ ಇಂದು ನಟ ದರ್ಶನ್‌ ಪ್ರಚಾರ

Mandya Lok Sabha Constituency; ಸ್ಟಾರ್‌ ಚಂದ್ರು ಪರ ಇಂದು ನಟ ದರ್ಶನ್‌ ಪ್ರಚಾರ

ಚುನಾವಣ ಬಾಂಡ್‌ ವಿಶ್ವದ ಅತಿದೊಡ್ಡ ಹಗರಣ: ರಾಹುಲ್‌

ಚುನಾವಣ ಬಾಂಡ್‌ ವಿಶ್ವದ ಅತಿದೊಡ್ಡ ಹಗರಣ: ರಾಹುಲ್‌

raLok Sabha Elections; ಜಾತಿ ಗಣತಿ ಬಗ್ಗೆ ಮೋದಿ ನಿಲುವೇನು?: ರಾಹುಲ್‌ ಗಾಂಧಿ

Lok Sabha Elections; ಜಾತಿ ಗಣತಿ ಬಗ್ಗೆ ಮೋದಿ ನಿಲುವೇನು?: ರಾಹುಲ್‌ ಗಾಂಧಿ

Lok Sabha Elections: ಎಚ್‌ಡಿಕೆ ಆಯ್ಕೆಯಾದರೆ ಕಾವೇರಿ ವಿವಾದಕ್ಕೆ ಪರಿಹಾರ: ಅಶೋಕ್‌

Lok Sabha Elections: ಎಚ್‌ಡಿಕೆ ಆಯ್ಕೆಯಾದರೆ ಕಾವೇರಿ ವಿವಾದಕ್ಕೆ ಪರಿಹಾರ: ಅಶೋಕ್‌

ಡಿಕೆಶಿಗೆ ಸಿದ್ದರಾಮಯ್ಯ ಏಕೆ ಸಿಎಂ ಸ್ಥಾನ ಬಿಟ್ಟುಕೊಡಲಿಲ್ಲ: ಪ್ರತಾಪಸಿಂಹ ಪ್ರಶ್ನೆ

ಡಿಕೆಶಿಗೆ ಸಿದ್ದರಾಮಯ್ಯ ಏಕೆ ಸಿಎಂ ಸ್ಥಾನ ಬಿಟ್ಟುಕೊಡಲಿಲ್ಲ: ಪ್ರತಾಪಸಿಂಹ ಪ್ರಶ್ನೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Ram Navami Procession: ರಾಮನವಮಿ ಮೆರವಣಿಗೆ ವೇಳೆ ಘರ್ಷಣೆ: 20ಕ್ಕೂ ಹೆಚ್ಚು ಮಂದಿಗೆ ಗಾಯ

Ram Navami Procession: ರಾಮನವಮಿ ಮೆರವಣಿಗೆ ವೇಳೆ ಘರ್ಷಣೆ: 20ಕ್ಕೂ ಹೆಚ್ಚು ಮಂದಿಗೆ ಗಾಯ

2-shimoga

Bhadravathi: ಲಾರಿ ಡಿಕ್ಕಿ, ರೈಲು ಹಳಿಗಳು ಏರುಪೇರು; ಎರಡೂವರೆ ತಾಸು ಪ್ರಯಾಣಿಕರು ಹೈರಾಣು

1-24-thursday

Daily Horoscope: ಕೊಟ್ಟ ಮಾತಿಗೆ ತಪ್ಪದಂತೆ ಎಚ್ಚರಿಕೆ ಇರಲಿ,ಅನವಶ್ಯ ವಿವಾದಗಳಿಂದ ದೂರವಿರಿ

Elections; ದೇಶದಲ್ಲಿ ಹಂತ 1: ಬಹಿರಂಗ ಪ್ರಚಾರ ಅಂತ್ಯ, ನಾಳೆ ಮತದಾನ

Elections; ದೇಶದಲ್ಲಿ ಹಂತ 1: ಬಹಿರಂಗ ಪ್ರಚಾರ ಅಂತ್ಯ, ನಾಳೆ ಮತದಾನ

1eqqewe

IPL; ಪಂಜಾಬ್‌ ಕಿಂಗ್ಸ್‌-ಮುಂಬೈ ಇಂಡಿಯನ್ಸ್‌ : ಒಂದೇ ದೋಣಿಯ ಪಯಣಿಗರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.