ಕಾಂಗ್ರೆಸ್ ಬೆಂಬಲಿಗರಿಗೆ ಗೆಲುವು
Team Udayavani, Feb 10, 2020, 3:55 PM IST
ಮಳವಳ್ಳಿ: ತಾಲ್ಲೂಕಿನ ಪೂರಿಗಾಲಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಸಿ.ಜಿ. ಬಸವರಾಜು ಹಾಗೂ ಉಪಾಧ್ಯಕ್ಷರಾಗಿ ಪಿ.ಎಸ್. ಪರಶಿವಮೂರ್ತಿ ಅವಿರೋಧವಾಗಿ ಆಯ್ಕೆಯಾದರು.
ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಮಾಜಿ ಸಚಿವ ಹಾಗೂ ಸಹಕಾರ ಸಂಘ ನಿರ್ದೇಶಕರಾದ ಪಿ.ಎಂ.ನರೇಂದ್ರ ಸ್ವಾಮಿ, ಸಿ. ಎಂ.ಮಹದೇವಪ್ಪ, ಸಿ.ರಾಜಶೇಖರ್, ಪಿ.ಎಂ.ಹರೀಶ್, ಚಿಕ್ಕಬಸವರಾಜು, ರೇವಣ್ಣ, ಎಂ.ಸಂತೋಷ್, ಜ್ಯೋತಿ, ಪುಟ್ಟಮ್ಮ, ಮಂಗಳಮ್ಮ, ಕಾರ್ಯದರ್ಶಿ ನಾಗರಾಜು, ತಾ.ಪಂ.ಅಧ್ಯಕ್ಷ ನಾಗೇಶ್, ಉಪಾಧ್ಯಕ್ಷ ಸಿ.ಮಾಧು, ಮಾಜಿ ಅಧ್ಯಕ್ಷ ವಿಶ್ವಾಸ, ಅಂಬರೀಶ್, ಪ್ರಭುಸ್ವಾಮಿ, ಮಹೇಶ್ ಅಭಿನಂದಿ ಸಿದರು. ಚುನಾವಣಾಧಿಕಾರಿಯಾಗಿ ನಾಗರಾಜು ಕಾರ್ಯನಿರ್ವಹಿಸಿದರು.