ಶೀಘ್ರದಲ್ಲೇ ಕಾರ್ಖಾನೆ ಆರಂಭಕ್ಕೆ ಕ್ರಮ
Team Udayavani, Jun 10, 2020, 5:20 AM IST
ಪಾಂಡವಪುರ: ಪಿಎಸ್ಎಸ್ಕೆ ಕಾರ್ಖಾನೆ ಸ್ಥಿತಿಗತಿಗಳನ್ನು ಪರಿಶೀಲಿಸಿ, ಶೀಘ್ರದಲ್ಲಿಯೇ ಕಾರ್ಖಾನೆ ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ನಿರಾಣಿ ಷುಗರ್ ಮಾಲೀಕ ಮುರುಗೇಶ್ ನಿರಾಣಿ ಹೇಳಿದರು. ತಾಲೂಕಿನ ಪಿಎಸ್ಎಸ್ಕೆ ಕಾರ್ಖಾನೆಗೆ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿ, ಪಿಎಸ್ಎಸ್ಕೆ ಕಾರ್ಖಾನೆಯು ಕಳೆದ 4 ವರ್ಷದಿಂದ ಆರಂಭವಾಗದೆ ರೋಗಗ್ರಸ್ಥವಾಗಿ ಬಿದ್ದಿತು.
ಇದೀಗ ಕಾರ್ಖಾನೆಯನ್ನು ಟೆಂಡರ್ ಮೂಲಕ ಗುತ್ತಿಗೆ ಪಡೆದುಕೊಂಡಿದ್ದೇವೆ. ಕಾರ್ಖಾನೆ ಹಾಗೂ ಯಂತ್ರೋಪಕರಣಗಳು ಸುಸ್ಥಿತಿಯಲ್ಲಿರುವ ಬಗ್ಗೆ ಪರಿಶೀಲನೆ ಮಾಡುವುದಕ್ಕಾಗಿ 20 ಮಂದಿ ಎಂಜಿ ನಿಯರ್ಗಳೊಂದಿಗೆ ಕಾರ್ಖಾನೆಗೆ ಭೇಟಿ ನೀಡಲಾ ಗಿದ್ದು, ನನ್ನ ಆಶಯದಂತೆ ಕಾರ್ಖಾನೆಯನ್ನು ಆರಂಭಿಸಲಾಗುವುದು ಎಂದು ತಿಳಿಸಿದರು.
ನೌಕರರನ್ನು ಉಳಿಸಿಕೊಳ್ಳಲು ಪ್ರಯತ್ನ: ಕಾರ್ಖಾ ನೆಯ ಹಿಂದಿನ ನೌಕರರನ್ನು ಮುಂದುವರಿಸುವ ಬಗ್ಗೆ ನೌಕರರೊಂದಿಗೆ ಚರ್ಚಿಸಿ ಅವರ ಅಭಿಪ್ರಾಯ ಸಂಗ್ರಹಿ ಸುತ್ತೇವೆ. ನಮ್ಮಲ್ಲಿ 9 ಷುಗರ್ ಕಾರ್ಖಾನೆಗಳಿದ್ದು, ಸುಮಾರು 70 ಸಾವಿರ ಜನರು ನೌಕರರಿದ್ದಾರೆ. ಅವ ರೆಲ್ಲರು ನಮ್ಮ ಕುಟುಂಬದ ಸದಸ್ಯರಂತೆ. ಹೀಗಾಗಿ ಕಾರ್ಖಾನೆಯ ನೌಕರರನ್ನು ಉಳಿಸಿಕೊಳ್ಳುವ ಪ್ರಯ ತ್ನದ ಜತೆಗೆ ನೌಕರರ ಜತೆ ಸಮಲೋಚನೆ ನಡೆಸಿ, ಮುಂದಿನ ನಿರ್ಧಾರವನ್ನು ಮಾಡಲಾಗುವುದು ಎಂದರು.
ಕಾರ್ಖಾನೆಯಿಂದ ನಡೆಸಲಾಗುತ್ತಿರುವ ಶಾಲೆಗಳನ್ನು ಆರಂಭಿಸುವ ಬಗ್ಗೆ ಸ್ಥಳೀಯ ಶಾಸಕರು, ಸಂಸದರ ಜೊತೆ ಚರ್ಚಿಸಿ, ಶಾಲೆಯನ್ನು ಹೇಗೆ ನಡೆಸ ಬೇಕು ಎನ್ನುವ ಬಗ್ಗೆ ತೀರ್ಮಾನಿಸಲಾಗುವುದು ಎಂದು ತಿಳಿಸಿದರು. ಬಿಜೆಪಿ ಮುಖಂಡರಾದ ನಾಗಣ್ಣಗೌಡ, ಸುಂಡಹಳ್ಳಿ ಸೋಮಶೇಖರ್ ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya LokSabha Constituency:ಸಕ್ಕರೆ ನಾಡಿನ ಪಾರುಪತ್ಯಕ್ಕೆ ಸಾಂಪ್ರದಾಯಿಕ ಜಿದ್ದಾಜಿದ್ದಿ
ಹಾಲಾದರೂ ನೀಡಿ, ವಿಷವಾದರೂ ನೀಡಿ; ನಾನು ಸ್ವೀಕರಿಸುತ್ತೇನೆ: ಎಚ್ಡಿಕೆ
ಲಿಂಗಾಯತರಿಗೆ ಸಿಎಂ ಹುದ್ದೆ ವಂಚಿಸಿದ್ದು ಕುಮಾರಸ್ವಾಮಿ: ಸಚಿವ ಎಂ.ಬಿ. ಪಾಟೀಲ್
Srirangapatna: ಐಸ್ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ
LS Polls 2024: ಸುಮಲತಾ ಪ್ರಚಾರಕ್ಕೆ ಬರುವುದು ರಾಜ್ಯ ನಾಯಕರ ತೀರ್ಮಾನ: ನಿಖಿಲ್