ನೃತ್ಯ ಮಾಡಿ ಕೋವಿಡ್ ಸೋಂಕಿತರಿಗೆ ರಂಜನೆ ನೀಡಿದ ಜೆಡಿಎಸ್ ಶಾಸಕ ಅನ್ನದಾನಿ
Team Udayavani, May 15, 2021, 10:25 AM IST
ಮಂಡ್ಯ: ಕೋವಿಡ್ ಸೋಂಕಿತರ ಮನೋಲ್ಲಾಸಕ್ಕಾಗಿ ಶಾಸಕ ಕೆ.ಅನ್ನದಾನಿ ಹಾಡಿ, ನೃತ್ಯ ಮಾಡಿ ರಂಜಿಸಿದ್ದಾರೆ.
ಮಳವಳ್ಳಿ ಪಟ್ಡಣದ ಕೆಎಸ್ ಆರ್ ಟಿಸಿ ತರಬೇತಿ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೋವಿಡ್ ಸೋಂಕಿತರು ರಂಜಿಸಲು ಜೆಡಿಎಸ್ ಶಾಸಕ ಅನ್ನದಾನಿ ನೃತ್ಯ ಮಾಡಿದರು.
ಸೋಂಕಿತರಿಗೆ ಮನೋರಂಜನೆ ನೀಡುವುದಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಈ ವೇಳೆ ಕಾರ್ಯಕ್ರಮದಲ್ಲಿ ಜಾನಪದ ಗೀತೆ ಹಾಡಿ ನೃತ್ಯಮಾಡಿ ರಂಜಿಸಿದ ಶಾಸಕರ ಜೊತೆ, ಸೋಂಕಿತರು ಕೂಡ ನೃತ್ಯ ಮಾಡಿ ಸಂತೋಷಪಟ್ಟಿದ್ದಾರೆ. ಸ್ವತಃ ಜಾನಪದ ಗಾಯಕರು ಹಾಗೂ ಕಲಾವಿದರಾಗಿರುವ ಶಾಸಕ ಅನ್ನದಾನಿ, ಸೋಂಕಿತರು ಬೇಗ ಗುಣಮುಖರಾಗುವಂತೆ ಹಾರೈಸಿದರು.
ಇದನ್ನೂ ಓದಿ: ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 3.26 ಲಕ್ಷ ಕೋವಿಡ್ ಪ್ರಕರಣ ಪತ್ತೆ, 3,890 ಸಾವು