ಡಿಜಿಟಲ್ ಮಾಧ್ಯಮ ಬಗ್ಗೆ ಎಚ್ಚರವಹಿಸಿ
Team Udayavani, Sep 6, 2018, 2:03 PM IST
ಮಂಡ್ಯ: ಡಿಜಿಟಲ್ ಮಾಧ್ಯಮ ಬದಲಾವಣೆ ಕಾಣುತ್ತಿರುವಂತೆಯೇ ಸಮಸ್ಯೆಗಳೂ ಸಹ ಹೆಚ್ಚಾಗುತ್ತಿವೆ
ಎಂದು ಬಿಜೆಪಿ ಮುಖಂಡ ಎಚ್.ಆರ್. ಅರವಿಂದ್ ತಿಳಿಸಿದರು. ಮಾಂಡವ್ಯ ವೃತ್ತಿಪರ ಛಾಯಾಚಿತ್ರ ಗ್ರಾಹಕರ ಸಂಘ ಹಾಗೂ ತಾಲೂಕು ಛಾಯಾಚಿತ್ರ ಗ್ರಾಹಕರ ಸಂಘದ ವತಿಯಿಂದ ನಗರದ ಗಾಂಧಿ ಭವನದಲ್ಲಿ ಬುಧವಾರ ಆಯೋಜಿಸಿದ್ದ 179ನೇ ವಿಶ್ವಗ್ರಾಹಕರ ದಿನಾಚರಣೆ ಕಾರ್ಯಕ್ರಮ ದಲ್ಲಿ ಮಾತನಾಡಿದರು.
ಹಲವು ಛಾಯಾಗ್ರಾಹಕರು ಸಾಕಷ್ಟು ಬಾರಿ ಡಿಜಿಟಲ್ ಮೀಡಿಯಾದಲ್ಲಿ ಸಾಕಷ್ಟು ತೊಂದರೆ ಎದುರಿಸುತ್ತಿದ್ದಾರೆ.
ಹಾರ್ಡ್ಡಿಕ್ಸ್, ಮೆಮೋರಿ ಚಿಪ್ನಲ್ಲಿ ಫೋಟೋ, ವಿಡಿಯೋ ಡಿಲಿಟ್ ಆಗಿದೆ ಎನ್ನುತ್ತಾರೆ. ಡಿಜಿಟಲ್ ಮೀಡಿಯಾದ
ಅನುಕೂಲ ಪಡೆದುಕೊಳ್ಳುವುದರ ಜೊತೆಗೆ ಎಚ್ಚರಿಕೆ ವಹಿಸದಿದ್ದರೆ ತೊಂದರೆ ಅನುಭವಿಸಬೇಕಾಗುತ್ತದೆ ಎಂದರು.
ಕಾವೇರಿ ಕಲರ್ ಲ್ಯಾಬ್ ಮಾಲಿಕ ಕೆ.ಎಸ್.ಸಂದೀಪ್ ಮಾತನಾಡಿ, ಸಾಮಾಜಿಕ ಜಾಲತಾಣಗಳಲ್ಲಿ ನಾವು ಯಾವಾಗಲೂ ಸಕ್ರಿಯವಾಗಿರುತ್ತೇವೆ. ಮುಖಾ ಮುಖೀ ಭೇಟಿ ಸಾಧ್ಯವಾಗುತ್ತಿರಲಿಲ್ಲ. ವಿಶ್ವ ಛಾಯಾಗ್ರಾಹಕರ ದಿನದೊಂದಿಗೆ ಮುಖಾಮುಖೀ ಭೇಟಿ ಯಾಗಿದ್ದು, ಸಂತಸ ಉಂಟು ಮಾಡಿದೆ ಎಂದರು.
ಛಾಯಾಗ್ರಾಹಕರ ವೃತ್ತಿ ಬಹಳ ಸಂಕಷ್ಟದಲ್ಲಿದೆ. ವರ್ಷ ಪೂರ್ತಿ ವೃತ್ತಿ ನಡೆ ಯುವುದಿಲ್ಲ. ವೃತ್ತಿ ಚೆನ್ನಾಗಿ ನಡೆಯುವ
ಕಾಲದಲ್ಲಿ ಹಣ ಸಂಪಾದಿಸಿ, ಕೂಡಿಟ್ಟುಕೊಳ್ಳಬೇಕು ಎಂದು ಸಲಹೆ ನೀಡಿದರು. ಸಂಘದ ಗೌರವಾಧ್ಯಕ್ಷ ಐ.ಎನ್. ರಾವ್, ಜಿಲ್ಲಾಧ್ಯಕ್ಷಬಿ.ಎಸ್.ಜಗದೀಶ್, ಎನ್.ಚಂದ್ರಶೇಖರ್, ಎಂ.ಕುಮಾರ್, ಎಸ್.ಸತ್ಯನಾರಾಯಣ, ಕೆ.ಕೆ.ಪ್ರಭು, ಬಾಲಚಂದ್ರ, ಕೆ.ರೂಬೆನ್ ಇತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ
ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ
Mandya LokSabha Constituency:ಸಕ್ಕರೆ ನಾಡಿನ ಪಾರುಪತ್ಯಕ್ಕೆ ಸಾಂಪ್ರದಾಯಿಕ ಜಿದ್ದಾಜಿದ್ದಿ
ಹಾಲಾದರೂ ನೀಡಿ, ವಿಷವಾದರೂ ನೀಡಿ; ನಾನು ಸ್ವೀಕರಿಸುತ್ತೇನೆ: ಎಚ್ಡಿಕೆ
ಲಿಂಗಾಯತರಿಗೆ ಸಿಎಂ ಹುದ್ದೆ ವಂಚಿಸಿದ್ದು ಕುಮಾರಸ್ವಾಮಿ: ಸಚಿವ ಎಂ.ಬಿ. ಪಾಟೀಲ್
MUST WATCH
ಹೊಸ ಸೇರ್ಪಡೆ
Madhya Pradesh Rally; ಕೈಯಿಂದ ಮೀಸಲಾತಿ ಕಸಿಯುವ ಯತ್ನ: ಪ್ರಧಾನಿ ಮೋದಿ
ಕೊಲೆಗಾಗಿಯೇ ಚಾಕು ಖರೀದಿಸಿದ್ದ ಫಯಾಜ್: ಮೂರೂವರೆ ತಾಸು ಸ್ಥಳ ಮಹಜರು ಮಾಡಿದ ಸಿಐಡಿ ತಂಡ
Congress ಅಭ್ಯರ್ಥಿ ಡಿ.ಕೆ. ಸುರೇಶ್ 6 ಮಂದಿ ಆಪ್ತರ ಮನೆ ಮೇಲೆ ಐಟಿ ದಾಳಿ
Congress ವಿರುದ್ಧ ಬಿಜೆಪಿ ಕ್ಯೂಆರ್ ಕೋಡ್ ಸಮರ
Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ